April 26, 2024

Bhavana Tv

Its Your Channel

ಪುತ್ತೂರು:ಹೆರಿಗೆ ವೇಳೆ ಅಧಿಕ ರಕ್ತಸ್ರಾವ ಉಂಟಾಗಿ ಬಾಣಂತಿ ಸಾವು

ಪುತ್ತೂರು: ಹೆರಿಗೆ ವೇಳೆ ಅಧಿಕ ರಕ್ತಸ್ರಾವ ಉಂಟಾಗಿ ಪುತ್ತೂರು ಅರಿಯಡ್ಕದ ಬಾಣಂತಿ ಮೃತಪಟ್ಟ ಘಟನೆ ಅ .೧೬ ರಂದು ನಡೆದಿದೆ.ಪುತ್ತೂರು ತಾಲೂಕಿನ ಕಾವು ಗ್ರಾಮದ ನಿವಾಸಿ ಪ್ರವೀಣ್ ನಾಯ್ಕ್ ಎಂಬವರ ಪತ್ನಿ ಚಂದ್ರಕಲಾ (೨೫) ಮೃತ ಪಟ್ಟ ಮಹಿಳೆ.
ಸುಳ್ಯ ತಾಲೂಕಿನ ಮರ್ಕಂಜ ಗ್ರಾಮದ ಬಳ್ಳಕಾನದ ಸುಬ್ಬಣ್ಣ ನಾಯ್ಕರ ಮಗಳಾದ ಚಂದ್ರಕಲಾರವರನ್ನು ಅರಿಯಡ್ಕ ಗ್ರಾಮದ ಕಾವು ನಿವಾಸಿ ಪ್ರವೀಣ್ ನಾಯ್ಕ್ ಎಂಬವರಿಗೆ ಒಂದೂವರೆ ವರ್ಷದ ಹಿಂದೆ ಮದುವೆ ಮಾಡಿಕೊಡಲಾಗಿತ್ತು.
ಚಂದ್ರಕಲಾರವರಿಗೆ ಹೆರಿಗೆ ನೋವು ಕಾಣಿಸಿಕೊಂಡ ಹಿನ್ನಲೆಯಲ್ಲಿ ಪುತ್ತೂರಿನ ಪ್ರಗತಿ ಆಸ್ಪತ್ರೆಗೆ ದಾಖಲಿಸಲಾಗಿತ್ತು, ಹೆರಿಗೆ ವೇಳೆ ಬಾಣಂತಿಗೆ ಅಧಿಕ ರಕ್ತಸ್ರಾವ ಹಾಗೂ ಲೋ ಬಿಪಿ ಕಂಡು ಬಂದಿತ್ತು. ಮೃತ ಚಂದ್ರಕಲಾ ಜನ್ಮ ನೀಡಿದ ಮಗು ಆರೋಗ್ಯವಾಗಿದೆ ಎಂದು ವೈದ್ಯರು ತಿಳಿಸಿದ್ದಾರೆ.
ಕೂಡಲೇ ಚಂದ್ರಕಲಾರವರನ್ನು ಹೆಚ್ಚಿನ ಚಿಕಿತ್ಸೆಗೆ ಮಂಗಳೂರಿನ ಕೆ.ಎಸ್.ಹೆಗ್ಡೆ ಆಸ್ಪತ್ರೆಗೆ ದಾಖಲಿಸಲಾಗಿತ್ತು. ಆದರೆ ಚಿಕಿತ್ಸೆ ಫಲಕಾರಿಯಾಗದೆ ಚಂದ್ರಕಲಾ ಮೃತಪಟ್ಟಿದ್ದಾರೆ

error: