April 28, 2024

Bhavana Tv

Its Your Channel

ರೋಣದಲ್ಲಿ ಸಂವಿಧಾನ ದಿನಾಚರಣೆ

ರೋಣ :-ಬೆಳವಣಕಿ ಗ್ರಾಮದ ಡಾ.ಬಿ.ಆರ್.ಅಂಬೇಡ್ಕರ್ ಕಾಲೋನಿಯಲ್ಲಿ ಹೊಳೆಆಲೂರ ಮಂಡಲ ಬಿಜೆಪಿ ಯುವ ಮೋರ್ಚಾ, ಎಸ್.ಸಿ ಮೋರ್ಚಾ, ಎಸ್.ಟಿ ಮೋರ್ಚಾ ಮೋರ್ಚಾದ ನಾಯಕರುಗಳ ಸಮ್ಮುಖದಲ್ಲಿ ಪವಿತ್ರ ಸಂವಿಧಾನ ದಿನಾಚರಣೆ ಆಚರಿಸಲಾಯಿತು.
ಎಲ್ಲರೂ ಸಂವಿಧಾನಕ್ಕೆ ಬದ್ದರಾಗಿ, ಅಂಬೇಡ್ಕರ್ ಅವರು ಹಾಕಿಕೊಟ್ಟ ಮಾರ್ಗದಲ್ಲಿ ಜೀವಿಸುತ್ತೇವೆ ಎಂದು ಪ್ರಮಾಣ ವಚನ ಸ್ವೀಕರಿಸಿದರು.
ಈ ಸಂದರ್ಭದಲ್ಲಿ ಹೊಳೆಆಲೂರ ಮಂಡಲ ಬಿಜೆಪಿ ಕಾರ್ಯದರ್ಶಿಗಳಾದ ಸೋಮು ಚರೇದ, ಬೆಳವಣಿಕಿ ಗ್ರಾಮದ ಹಿರಿಯ ನಾಯಕರಾದ ಶಿವಣ್ಣ ಹಾಲಬಾವಿ, ಹೊಳೆಆಲೂರ ಮಂಡಲ ಬಿಜೆಪಿ ಯುವ ಮೋರ್ಚಾ ಅಧ್ಯಕ್ಷರಾದ ಶರಣು ಬರಶೆಟ್ಟಿ, ಹೊಳೆಆಲೂರ ಮಂಡಲ ಬಿಜೆಪಿ ಎಸ್.ಸಿ ಮೋರ್ಚಾ ಪ್ರಧಾನ ಕಾರ್ಯದರ್ಶಿಗಳಾದ ಮುದಿಯಪ್ಪ ದಾನಿ, ಎಸ್.ಟಿ ಮೋರ್ಚಾ ಅಧ್ಯಕ್ಷರಾದ ಮಂಜುನಾಥ್ ಚುಲಕಿ, ದಲಿತ ಮುಖಂಡರಾದ ಶ್ರೀ ಯಲ್ಲಪ್ಪ ಚಲವಾದಿ,ಕಾರ್ಯಕರ್ತರಾದ ಶಿವು ಪೂಜಾರ, ಪ್ರಶಾಂತ ದಾನಿ, ಪ್ರಶಾಂತ ನಂದಿ,ಬಸು ಪುನಗುಂಡಿ, ಶಿವಾನಂದ ಯತ್ನಟ್ಟಿ ಹಾಗೂ ಎಲ್ಲ ಕಾರ್ಯಕರ್ತರು ಪಾಲ್ಗೊಂಡು ಕಾರ್ಯಕ್ರಮವನ್ನು ಯಶಸ್ವಿಗೊಳಿಸಿದರು.
ವರದಿ ವೀರಣ್ಣ ಸಂಗಳದ ರೋಣ

error: