May 17, 2024

Bhavana Tv

Its Your Channel

ಅಂತರರಾಜ್ಯ ಮಟ್ಟದ ಪುರುಷ ಮತ್ತು ಮಹಿಳೆಯರ ಮುಕ್ತ ಕಬಡ್ಡಿ ಪಂದ್ಯಾವಳಿ

ರೋಣ ತಾಲೂಕಿನ ಮೆಣಸಗಿಯಲ್ಲಿ ಗದಗ ಜಿಲ್ಲಾ ಅಮೇಚೂರ್ ಕಬಡ್ಡಿ ಅಸೋಶಿ ಯೇಸನ್, ಮೆಣಸಗಿಯ ಜೈ ಕರ್ನಾಟಕ ಯುವಕ ಮಂಡಳ, ಕಬಡ್ಡಿ ಸ್ನೇಹ ಲೋಕ ಆಶ್ರಯದಲ್ಲಿ ನಿವೃತ್ತ ಎಸ್.ಪಿ.ಬಿ. ಬಿ.ಆರ್. ಹಿರೇಗೌಡರ ಸ್ಮರಣಾರ್ಥದಲ್ಲಿ ಮಾ. 6 ಮತ್ತು 7ರಂದು ಅಂತರರಾಜ್ಯ ಮಟ್ಟದ ಪುರುಷ ಮತ್ತು ಮಹಿಳೆಯರ ಮುಕ್ತ ಕಬಡ್ಡಿ ಪಂದ್ಯಾವಳಿಗಳನ್ನು ಆಯೋಜಿಸಲಾಗಿತ್ತು.

ಮಾ.6ರಂದು ನಡೆದ ಕಾರ್ಯಕ್ರಮದ ಸಾನ್ನಿಧ್ಯವನ್ನು ಮುದಿಯಪ್ಪಯ್ಯ ಸ್ವಾಮೀಜಿ ವಹಿಸಿದ್ದು ನಿವೃತ್ತ ಎಸ್ಪಿ ಬಿ.ಬಿ, ಸಕ್ತಿ ಅಧ್ಯಕ್ಷತೆ ವಹಿಸಿದರು. ನಿವೃತ್ತ ಎಸ್.ಪಿ.ಎಸ್.ಪಿ. ಗುಳೇದ ಜ್ಯೋತಿ ಬೆಳಗಿಸುವ ಮೂಲಕ ಚಾಲನೆ ನೀಡಿದರು , ಪ್ರೊ ಕಬಡ್ಡಿ ತರಬೇತಿದಾರ ಜಗದೀಶ ಕುಂಬ್ಳೆ ಆಗಮಿಸಿ ದ್ದರು. ಮಹಾರಾಷ್ಟ್ರ, ತಮಿಳುನಾಡು, ಆಂಧ್ರ ಪ್ರದೇಶ, ಬೆಂಗಳೂರು, ಗೋವಾ ಸೇರಿದಂತೆ ವಿವಿಧ ರಾಜ್ಯಗಳಿಂದ 70 ತಂಡಗಳು ಭಾಗವಹಿಸಿದರು. ಪುರುಷರಿಗೆ ಪ್ರಥಮ ಬಹುಮಾನ 50.001 ಹಾಗೂ ಟ್ರೋಫಿ, ದ್ವಿತೀಯ 40. 001 ಹಾಗೂ ಟ್ರೋಪಿ ತೃತೀಯ 30,001ಮೊದಲ ಪಂದ್ಯ ಚಿಕ್ಕಮಗಳೂರು ಮತ್ತು ಹಾವೆರಿ ತಂಡಗಳ ನಡುವೆ ನಡೆಯಿತು ಈ ತಂಡದಲ್ಲಿ ಚಿಕ್ಕಮಗಳೂರು ತಂಡ ವಿಜಯಶಾಲಿಯಾಯಿತು

ಇದೇ ಸಂದರ್ಭದಲ್ಲಿ ಮಿಥುನ ಜಿ ಪಾಟೀಲ, ಪ್ರವೀಣ ಯಾವಗಲ ಈರಪ್ಪ ತ್ತಾಳಿ, ಬಸುರಾಜ ಕೊಳ್ಳಿಯವರ, ಶಾರದ ಹಿರೇಗೌಡ,್ರ ಮೆಣಸಗಿ ಗ್ರಾಮದ ಕ್ರೀಡಾಪಟುಗಳು ಊರಿನ ಎಲ್ಲಾ ಹಿರಿಯರು ಉಪಸ್ಥಿತರಿದ್ದರು

ವರದಿ: ವೀರಣ್ಣ ಸಂಗಳದ

error: