April 26, 2024

Bhavana Tv

Its Your Channel

ಜಮೀರ್ ಅಹಮ್ಮದ್ ವಿರುದ್ದ ಶಾಸಕ ಸುರೇಶ್ ಗೌಡ ಆಕ್ರೋಶ.

ನಾಗಮಂಗಲ: ಮಾಜಿ ಮುಖ್ಯಮಂತ್ರಿ ಕುಮಾರಸ್ವಾಮಿ ಪಲ್ಟಿ ಗಿರಾಕಿ ಎಂದಿದ್ದ ಜಮೀರ್ ಅಹಮ್ಮದ್ ವಿರುದ್ಧ
ಕಾರವಾಗಿ ಪ್ರತಿಕ್ರಿಯಿಸಿದ ಶಾಸಕ ಸುರೇಶ್ ಗೌಡ,
ಪಲ್ಟಿ ಗಿರಾಕಿ ಯಾರು, ಉಲ್ಟಾ ಗಿರಾಕಿ ಯಾರು, ಜಮೀರ್ ಅಹಮದ್ ಯಾವ ಸಂಸ್ಕೃತಿಯಿ0ದ ಬಂದವರು ಎಂದು ಸ್ಬಲ್ಪ ತಿಳಿದುಕೊಳ್ಳಬೇಕು.
ಈಡಿ ರಾಜ್ಯದಲ್ಲಿ ಡಾ. ರಾಜ್‌ಕುಮಾರ್ ಬಿಟ್ಟರೆ ಕುಮಾರಸ್ವಾಮಿಯವರನ್ನ ಮಾತ್ರ ಅಣ್ಣ ಅಂತ ಕರಿಯೋದು.
ಯಾರನ್ನೋ ಮೆಚ್ಚಿಸಲು, ಒಂದು ಸಮುದಾಯವನ್ನ ಹಿಡಿತದಲ್ಲಿ ಇಟ್ಟುಕೊಳ್ಳಲು, ನಮಗೆ ಆಗದವರನ್ನ ಮೆಚ್ಚಿಸಿಕೊಳ್ಳೋಕೆ ಈತ ಆ ರೀತಿ ಹೇಳಿಕೆಗಳನ್ನ ತಿನ್ನೋದನ್ನು ನಿಲ್ಲಿಸಬೇಕು.
ಜಮೀರ್ ಅಹಮದ್ ಅವರ ಯೋಗ್ಯತೆಗೆ ರಾಜ್ಯದ ಜನರಿಗೆ ಚೆನ್ನಾಗಿ ಗೊತ್ತು ಜನ ಸಾಮಾನ್ಯರು ಕೊಟ್ಟಂತ ಓಟನ್ನ ಮಾರಿಕೊಂಡ0ತವರು ಇವರು.
ರಾಮ್ ಮೂರ್ತಿಯವರಿಗೆ ಮತವನ್ನ ಹಾಕಲು ಇವತ್ತು ಎಷ್ಟೆಷ್ಟು ಹಣ ಪಡೆದುಕೊಂಡ್ರು. ಇವರು ಉಲ್ಟಾ ಗಿರಾಕಿ ಅಲ್ಲವಾ.
ಈಗಾಗಲೇ ಜಮೀರ್ ಅಹಮ್ಮದ್‌ಗೆ ಜೆಡಿಎಸ್ ಕಾರ್ಯಕರ್ತರು ಎಚ್ಚರಿಕೆ ಕೊಟ್ಟಿದ್ದೇವೆ. ಮುಂದಿನ ದಿನಗಳಲ್ಲಿ ಜಿಲ್ಲೆಗಳಿಗೆ ಭೇಟಿ ಕೊಟ್ಟ ಸಂದರ್ಭ ಜನರೇ ಬುದ್ದಿ ಕಲಿಸುತ್ತಾರೆ. ಇಂತವರ ಬಗ್ಗೆ ನಾವು ಕೇರ್ ಮಾಡಲ್ಲ.
ಅವನೊಬ್ಬ ನಾಲಾಯಕ್ ಲೀಡರ್ ಅಂತ ದೇಶಕ್ಕೆ ಗೊತ್ತು. ಬಾಯಿಗೆ ಬಂದAತೆ ಏನ್ ಏನೋ ಬೊಗಳಿದರು ನಮ್ಮ ನಾಯಕ ಕುಮಾರಸ್ವಾಮಿ ಅವರ ಗೌರವ ಕಡಿಮೆಯಾಗುವುದಿಲ್ಲ ಎಂದು ಶಾಸಕ ಜಮೀರ್ ಅಹಮದ್ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದರು.
ವರದಿ ; ಚೌಂದ್ರಮೌಳಿ, ನಾಗಮಂಗಲ, ಮಂಡ್ಯ

error: