April 27, 2024

Bhavana Tv

Its Your Channel

ವಿಕಲಚೇತನರಿಗೆ ಕೊರೊನಾ ಲಸಿಕೆ ಹಾಕುವ ಕಾರ್ಯಕ್ರಮಕ್ಕೆ ಪಾಂಡವಪುರ ಜೆ ಎಂ ಎಫ್ ಸಿ ನ್ಯಾಯಾಧೀಶರಿಂದ ಚಾಲನೆ.

ಪಾಂಡವಪುರ; ಮಂಡ್ಯ ಜಿಲ್ಲೆ ಪಾಂಡವಪುರ ಪಟ್ಟಣದ ಸರ್ಕಾರಿ ಪದವಿ ಪೂರ್ವ ಕಾಲೇಜಿನ ಲಸಿಕಾ ಕೇಂದ್ರದಲ್ಲಿ ವಿಕಲಚೇತನರಿಗೆ ಲಸಿಕೆ ಹಾಕಲಾಯಿತು, ಜೆಎಂಎಫ್ ಸಿ ನ್ಯಾಯಾಲಯದ ಹಿರಿಯ ಸಿವಿಲ್ ನ್ಯಾಯಾಧೀಶರಾದ ಬಿ.ಎಸ್.ವೇದಮೂರ್ತಿ ಚಾಲನೆ ನೀಡಿದರು. ಈ ವೇಳೆ ವಿಕಲಚೇತನರಿಗೆಲ್ಲರಿಗೂ ಮೊದಲ ಆಧ್ಯತೆಯಡಿ ಲಸಿಕೆ ನೀಡುವಂತೆ ನ್ಯಾಯಾಧೀಶರು ಸೂಚಿಸಿದರು.
ಪಾಂಡವಪುರದಲ್ಲಿ ೧೪೨ ಮಂದಿ ವಿಕಲಚೇತನರಿದ್ದು, ಈಗಾಗಲೇ ೧೦೦ ಮಂದಿಗೆ ಲಸಿಕೆ ನೀಡಿದ್ದು, ಇನ್ನೂ ೪೨ ಮಂದಿಗೆ ಲಸಿಕೆ ಹಾಕಬೇಕಾಗಿದೆ ಎಂದು ಆರೋಗ್ಯ ಇಲಾಖೆ ಸಿಬ್ಬಂದಿ ಮಾಹಿತಿ ನೀಡಿದರು.
ಈ ಸಂದರ್ಭದಲ್ಲಿ ಪುರಸಭೆ ಮುಖ್ಯಾಧಿಕಾರಿ ಎಸ್.ಡಿ.ಮಂಜುನಾಥ್, ಆರೋಗ್ಯ ನಿರೀಕ್ಷಕ ಕೆ.ಕಾಳಯ್ಯ, ನ್ಯಾಯಾಲಯದ ಸಿಬ್ಬಂದಿ ಮಂಚಯ್ಯ ಇತರರಿದ್ದರು..

ವರದಿ..ಟಿ ಎಸ್ ಶಶಿಕಾಂತ್ ಶೆಟ್ಟಿ, ಮಂಡ್ಯ.. ಪಾಂಡವಪುರ

error: