ಮಳವಳ್ಳಿ ; ಕರೋನ ಸೊಂಕು ಜಗತ್ತನ್ನೆ ಅವರಿಸಿದೆ ಅದರ ಒಟ್ಟಿಗೆ ಬದುಕ ಬೇಕಿದೆ ಹಾಗಾಗಿ ನಾವು ಭಯ ಬಿಟ್ಟು ಅರಿವು, ಸ್ವಚ್ಚತೆ, ಮುಂಜಾಗ್ರತೆ ಕಾಯ್ದುಕೊಳ್ಳ ಬೇಕೆಂದು ನೆಲಮಾಕನಹಳ್ಳಿ ಗ್ರಾಮ ಪಂಚಾಯತಿ ಅದ್ಯಕ್ಷರಾದ ಉಮಾ ತಿಳಿಸಿದರು.
ಅವರು ತಾಲೂಕಿನ ಕಾಳಕೆಂಪನದೊಡ್ಡಿ ಗ್ರಾಮದಲ್ಲಿ ಗ್ರಾಮ ಪಂಚಾಯತಿ ಕಾರ್ಯಪಡೆ ಅಯೋಜಿಸಿದ್ದ ಕರೋನ ಜಾಗೃತಿ. ಕೋವಿಡ್ ಪರೀಕ್ಷೆ ಬಿಪಿ. ಶುಗರ್. ಆಕ್ಷೀಜನ್ ಸ್ಯಾಚುರೇಶನ್ ಪರೀಕ್ಷೆ ಕಾರ್ಯಕ್ರಮ ದಲ್ಲಿ ಮಾತನಾಡಿದರು. ಪಂಚಾಯತಿ ಅಭಿವೃದ್ಧಿ ಅಧಿಕಾರಗಳಾದ ಶಶಿಧರ್ ಅವರು ಮನೆ ಬಾಗಲಿಗೆ ಬಂದು ಆರೋಗ್ಯ ಇಲಾಖೆಯ ಸಹಕಾರದೊಂದಿಗೆ ಈ ರೀತಿಯ. ಪರೀಕ್ಷೆಗಳನ್ನ ನಡೆಸಲಾಗುತ್ತಿದೆ ಜನರು ಆರೋಗ್ಯ ದೃಷ್ಟಿಯಲ್ಲಿ ಇದನ್ನು ಸದುಪಯೋಗ ಪಡೆಸಿಕೊಳ್ಳಿ ಎಂದರು.
ಕರ್ನಾಟಕ ಪ್ರಾಂತ ರೈತ ಸಂಘದ ಅಧ್ಯಕ್ಷರಾದ ಎನ್ ಎಲ್ ಭರತ್ ರಾಜ್ ಪಂಚಾಯತಿ ಕಾರ್ಯದರ್ಶಿ ಚೆಲುವರಾಜ್ ಮಹಾದೇವು ಸದಸ್ಯರಾದ ನಾಗರಾಜ್ ನಾಗಪ್ಪ ಡಾ. ಅಶ್ವೀನ್ ಲ್ಯಾಬ್ ಟೆಕ್ನಿಶೀಯನ್ ಶಿವರತ್ನಮ್ಮ .ಆಶಾ ಕಾರ್ಯಕರ್ತೆ ಸುಜಾತ ಮಹಾದೇಮ್ಮ ಗೀತಾ ಸುಮಾ ಲತಾಮಣಿ ಶಿಕ್ಷಕರಾದ ಮಾರುತಿ ಹಾಜರಿದ್ದರು.
ವರದಿ ; ಬಿ ಮಲ್ಲಿಕಾರ್ಜುನಸ್ವಾಮಿ. ಮಳವಳ್ಳಿ.
More Stories
ನೂತನ ಅದ್ಯಕ್ಷರಾಗಿ ಶ್ರೀಮತಿ ಮಹಾಲಕ್ಷ್ಮಿ ವಿಶ್ವಾನಾಥ್, ಉಪಾದ್ಯಕ್ಷರಾಗಿ ನಂಜೇಶ್
ಕಿಕ್ಕೇರಮ್ಮನವರ ಜಾತ್ರೆ ಹಾಗೂ ರಥೋತ್ಸವ, ಭಕ್ತಾದಿಗಳಿಗೆ ಮಜ್ಜಿಗೆ ಪಾನಕ
ಐಕನಹಳ್ಳಿ ಗ್ರಾ.ಪಂ ನೂತನ ಅಧ್ಯಕ್ಷರಾಗಿ ಅಂಬುಜ ಉದಯಶಂಕರ್ ಅವಿರೋಧವಾಗಿ ಆಯ್ಕೆ