ನಾಗಮಂಗಲ ; ಕೊರೋನಾ ಸೇನಾನಿಗಳಾಗಿ ಸೇವೆ ಮಾಡುತ್ತಿರುವ ಆರೋಗ್ಯ ಕಂದಾಯ ಪೊಲೀಸ್ ನೌಕರರಿಗೆ ಆರೋಗ್ಯ ಪರಿಕರಗಳನ್ನು ನೆಲ್ಲಿಗೆರೆ ಬಾಲು ವಿತರಿಸಿದರು.
ಅವರಿಂದು ನಾಗಮಂಗಲ ಮಿನಿ ವಿಧಾನಸೌಧ ಆವರಣದಲ್ಲಿ ಕೊರೋನಾ ಶಾಲೆಯಲ್ಲಿ ಜೀವದ ಹಂಗು ಬಿಟ್ಟು ಕೆಲಸ ನಿರ್ವಹಿಸಿತ್ತಿರುವ ನೌಕರರಿಗೆ ತಾಲ್ಲೂಕು ದಂಡಾಧಿಕಾರಿಗಳಾದ ಕುಂಜಿ ಅಹಮದ್ ಅವರು ಆರೋಗ್ಯ ಪರಿಕರಗಳನ್ನುವಿತರಿಸಿ ಸಾಮಾಜಿಕ ಕಾಳಜಿಯಲ್ಲಿ ಮುಂಚೂಣಿಯಲ್ಲಿರುವ ಬಾಲುರವರು ಕಳೆದ ಬಾರಿಯೂ ಊಟದ ವ್ಯವಸ್ಥೆಯನ್ನು ಮಾಡಿದ್ದು ಈ ಬಾರಿ ಆರೋಗ್ಯದ ಹಿತದೃಷ್ಟಿಯಿಂದ ಆರೋಗ್ಯ ಪರಿಕರಗಳನ್ನು ನೀಡಿರುವುದು ಶ್ಲಾಘನೀಯ ಎಂದು ಮಾತನಾಡಿದರು.
ಇದೇ ಸಂದರ್ಭದಲ್ಲಿ ಆರೋಗ್ಯ ಇಲಾಖೆ .ಪೊಲೀಸ್ ಇಲಾಖೆ.ಯವರಿಗೂ ಆರೋಗ್ಯ ಪರಿಕರಗಳನ್ನು ಮಂಡ್ಯ ಹಾಲು ಒಕ್ಕೂಟದ ನಿರ್ದೇಶಕರಾದ ನೆಲ್ಲಿಗೆರೆ ಬಾಲು ಅವರು ವಿತರಿಸಿದರು
ವರದಿ ; ಡಿ.ಆರ್ .ಜಗದೀಶ್ ನಾಗಮಂಗಲ
More Stories
ನೂತನ ಅದ್ಯಕ್ಷರಾಗಿ ಶ್ರೀಮತಿ ಮಹಾಲಕ್ಷ್ಮಿ ವಿಶ್ವಾನಾಥ್, ಉಪಾದ್ಯಕ್ಷರಾಗಿ ನಂಜೇಶ್
ಕಿಕ್ಕೇರಮ್ಮನವರ ಜಾತ್ರೆ ಹಾಗೂ ರಥೋತ್ಸವ, ಭಕ್ತಾದಿಗಳಿಗೆ ಮಜ್ಜಿಗೆ ಪಾನಕ
ಐಕನಹಳ್ಳಿ ಗ್ರಾ.ಪಂ ನೂತನ ಅಧ್ಯಕ್ಷರಾಗಿ ಅಂಬುಜ ಉದಯಶಂಕರ್ ಅವಿರೋಧವಾಗಿ ಆಯ್ಕೆ