April 26, 2024

Bhavana Tv

Its Your Channel

ಪಾಂಡವಪುರ ಗುಮ್ಮನಹಳ್ಳಿ ಗ್ರಾಮ ಪಂಚಾಯಿತಿ ಸಭಾಂಗಣದಲ್ಲಿ ಪತ್ರಿಕಾ ಗೋಷ್ಠಿ

ಪಾಂಡವಪುರ ಗುಮ್ಮನಹಳ್ಳಿ ಗ್ರಾಮ ಪಂಚಾಯಿತಿ ಸದಸ್ಯರುಗಳು ಗ್ರಾಮ ಪಂಚಾಯಿತಿ ಸದಸ್ಯೆ ಅನಿತಾ ರಮೇಶ್‌ರವರು PDO ಕುಮಾರ್‌ರವರ ಮೇಲಿನ ಆರೋಪವನ್ನ ತಳ್ಳಿ ಹಾಕಿದ್ದಾರೆ.
ಶ್ರೀನಿವಾಸ್ ರವರು ಮಾತನಾಡಿ ನಮ್ಮ ಪಂಚಾಯಿತಿ PDO ಕುಮಾರ್ ರವರು ಕೆಲಸಕ್ಕೆ ನಿಗದಿತ ಸಮಯಕ್ಕೆ ಸರಿಯಾಗಿ ಬಂದು ಕಾರ್ಯ ನಿರ್ವಹಿಸುತ್ತಾರೆ.. ಹಾಗೂ ಕೋವಿಡ್ ನಿರ್ವಹಣೆಯಲ್ಲಿ ಗ್ರಾಮಗಳಲ್ಲಿ ಸ್ಯಾನಿಟಿಸರ್ ವ್ಯವಸ್ಥೆ ಮಾಡಿದ್ದಾರೆ. ಗ್ರಾಮದಲ್ಲಿ ಸ್ವಚ್ಛತೆ, ನರೇಗಾ ಯೋಜನೆಯ ಅಡಿಯಲ್ಲಿ ಗ್ರಾಮಸ್ಥರಿಗೆ ಕೆಲಸ ಕೊಡುವ ನಿಟ್ಟಿನಲ್ಲಿ ಪ್ರಮುಖ ಪಾತ್ರ ವಹಿಸಿದ್ದಾರೆ.
ಹಾಗೂ ಅನಿತಾರವರ ಪತಿಯಾದ ರಮೇಶ್‌ರವರು ಅನವಶ್ಯವಾಗಿ ವಾಟ್ಸಪ್ ಹಾಗೂ ಫೇಸ್‌ಬುಕ್ ನಲ್ಲಿ ಅನಗತ್ಯವಾಗಿ ಪೋಸ್ಟ್ ಹಾಕಿದ್ದಾರೆ .. ದಯವಿಟ್ಟು ನಾವು ಸದಸ್ಯರು ಕೇಳಿ ಕೊಳ್ಳುವುದೇನಂದರೆ ನಿಮ್ಮ ಸಮಸ್ಯೆ ಯನ್ನು ಮುಕ್ತವಾಗಿ ಚರ್ಚಿಸಿ ಬಗೆ ಹರಿಸಿಕೊಳ್ಳಿಯೆಂದು ತಿಳಿಸಿದ್ದರು.

ಈ ಪತ್ರಿಕಾ ಗೋಷ್ಠಿಯಲ್ಲಿ ಶ್ರೀನಿವಾಸ್, ರಘು, ಸ್ವಾಮಿ, ಚಂದ್ರು, ವರದರಾಜು, ಪುರುಷೋತ್ತಮ್. ಹಾಜರಿದ್ದರು….

ವರದಿ..
ಟಿ ಎಸ್ ಶಶಿಕಾಂತ್ ಶೆಟ್ಟಿ
ಮಂಡ್ಯ.. ಪಾಂಡವಪುರ ವರದಿಗಾರರು

error: