April 26, 2024

Bhavana Tv

Its Your Channel

ಕನ್ನಡಾಂಬೆ ರತ್ನ ಪ್ರಶಸ್ತಿ ಪುರಸ್ಕಾರ ಸಮಾರಂಭ ಆಹ್ವಾನ ಪತ್ರಿಕೆ ಬಿಡುಗಡೆ

ಕಿಕ್ಕೇರಿ: ಕನ್ನಡಾಂಬೆ ರಕ್ಷಣಾ ವೇದಿಕೆ ವತಿಯಿಂದ ಕನ್ನಡಾಂಬೆ ರತ್ನ ಪ್ರಶಸ್ತಿ ಪುರಸ್ಕಾರ ಸಮಾರಂಭ ಆಹ್ವಾನ ಪತ್ರಿಕೆಯನ್ನು ಪರಮ ಪೂಜ್ಯ ಶ್ರೀ ಸಿದ್ದಗಂಗಾ ಮಠದ ಸಿದ್ದಲಿಂಗೇಶ್ವರ ಸ್ವಾಮಿಯವರು ಬಿಡುಗಡೆ ನೆರವೇರಿಸಿದರು

ನವೆಂಬರ್ ೧೪ ರಂದು ಮೈಸೂರಿನ ಕಲಾಮಂದಿರದಲ್ಲಿ ಕನ್ನಡಾಂಬೆ ರಕ್ಷಣಾ ವೇದಿಕೆ ವತಿಯಿಂದ ಕನ್ನಡಾಂಬೆ ರತ್ನ ಪ್ರಶಸ್ತಿ ಪುರಸ್ಕಾರ ಸಮಾರಂಭ ಶ್ರೀಗಳ ಆರ್ಶಿವಾದದೊಂದಿಗೆ ಅದ್ದೂರಿಯಾಗಿ ನೆರೆವೇರುವುದು ರಾಜ್ಯದ ನಾನಾ ಕ್ಷೇತ್ರದ ಸಾಧಕರನ್ನು ಗುರುತಿಸಿ ಕಾರ್ಯಕ್ರಮದಲ್ಲಿ ಅದ್ದೂರಿಯಾಗಿ ಕನ್ನಡಾಂಬೆ ರತ್ನ ಪ್ರಶಸ್ತಿ ನೀಡಿ ಗೌರವಿಸಲಾಗುವುದು. ಕಾರ್ಯಕ್ರಮಕ್ಕೆ ಕಲಾವಿದರು, ಸಾಧಕರು, ಸಾಹಿತ್ಯಿಗಳು, ಹಿರಿಯರು ಸೇರಿದಂತೆ ಸುಮಾರು ೧೫೦೦ ಜನರನ್ನು ಆಹ್ವಾನ ನೀಡಲಾಗಿದೆ ಎಂದು ಕನ್ನಡಾಂಬೆ ರಕ್ಷಣಾ ವೇದಿಕೆಯ ರಾಜ್ಯಾದ್ಯಕ್ಷರಾದ ರಾಜಶೇಖರ್ ತಿಳಿಸಿದರು..

ಈ ಸಂರ್ಭದಲ್ಲಿ ಕನ್ನಡಾಂಬೆ ರಕ್ಷಣಾವೇದಿಕೆಯ ರಾಜ್ಯಧ್ಯಕ್ಷರು ರಾಜಶೇಖರ್, ಉಪಾಧ್ಯಕ್ಷರು ಮಂಜುನಾಥ್, ಕಾರ್ಯಾಧ್ಯಕ್ಷರು ಮಾದೇಶ್, ಕಾರ್ಮಿಕ ಘಟಕದ ನವೀನ್, ಮಹಿಳಾ ಘಟಕ ರಾಜ್ಯಾಧ್ಯಕ್ಷರು ಕೀರ್ತನ, ಕಾರ್ಯ ಅಧ್ಯಕ್ಷರು ರೂಪ, ಬೆಂಗಳೂರು ಅಧ್ಯಕ್ಷರು ಶೋಭಾ ಸುಧಾರಣೆ, ಬೆಂಗಳೂರು ಕಾರ್ಮಿಕ ಘಟಕದ ಅಧ್ಯಕ್ಷರು ಮಲ್ಲೇಶ್, ಆರಾಧ್ಯ ಉಪಾಧ್ಯಕ್ಷರು ಶಿವಪ್ಪ, ಮಂಡ್ಯ ಜಿಲ್ಲಾ ರೈತ ಘಟಕದ ಅಧ್ಯಕ್ಷರು ಜಯದೇವ ಸೇರಿದಂತೆ ಸಂಘದ ಪದಾಧಿಕಾರಿಗಳು ಭಾಗವಯಿಸಿದರು..

ವರದಿ:ಶಂಭು ಕಿಕ್ಕೇರಿ

error: