April 29, 2024

Bhavana Tv

Its Your Channel

ರೋಡಿಗೆ ೨ ಬಾರು ಕನ್ನಡ ಆಲ್ಬಂ ಸಾಂಗ್‌ನ ಶೀರ್ಷಿಕೆ ಬಿಡುಗಡೆ

ಕೃಷ್ಣರಾಜಪೇಟೆ ತಾಲ್ಲೂಕಿನ ಮಾಣಿಕನಹಳ್ಳಿ ಗ್ರಾಮದ ಕುಮಾರ್ ಮಾಣಿಕ್ಯ ರವರ ಸಾಹಿತ್ಯ ಮತ್ತು ಗಾಯನದಲ್ಲಿ ಮೂಡಿ ಬರುತ್ತಿರುವ ರೋಡಿಗೆ ೨ ಬಾರು ಕನ್ನಡ ಆಲ್ಬಂ ಸಾಂಗ್ ನ ಶೀರ್ಷಿಕೆಯನ್ನು ಇಂದು ಬೆಂಗಳೂರು ನಗರದಲ್ಲಿ ಚಲನ ಚಿತ್ರದ ನಟ ಹಾಗೂ ನಿರ್ದೇಶಕರು, ಹಾಗೂ ಪತ್ರಕರ್ತರು ಆದ ಬಿಗ್ ಬಾಸ್ ಖ್ಯಾತಿಯ ಆ ಎ ಚಕ್ರವರ್ತಿ ಚಂದ್ರಚೂಡ್ ರವರು ಹಾಗೂ ಶಿರಾಡಿ ಘಾಟ್ ಚಿತ್ರದ ನಟ ನಿರ್ಮಾಪಕರಾದ ಉಮೇಶ್ ಸಕ್ಕರೆ ನಾಡು ರವರು ಇಂದು ಬಿಡುಗಡೆ ನೆರೆವೇರಿಸಿದರು..

ನಂತರ ಮಾತನಾಡಿ ಮುಂದಿನ ಕೆಲವೇ ದಿನಗಳಲ್ಲಿ ಹಾಡು ಬಿಡುಗಡೆಯಾಗಲಿದೆ ಕುಮಾರ್ ಮಾಣಿಕ್ಯ ರವರು ಒಂದು ಹಳ್ಳಿ ಇಂದ ಬಂದು ಏನಾದರೂ ಮಾಡಬೇಕೆಂಬ ಛಲವನ್ನು ಒಂದಿದ್ದಾರೆ ಈ ರೋಡಿಗೆ ಎರಡು ಬಾರು ಎಂಬ ಹೆಸರಿನಲ್ಲಿ ಆಲ್ಬಂ ಸಾಂಗ್ ನಿರ್ಮಾಣ ಮಾಡುತ್ತಿದ್ದು ಇವರ ಸಾಹಿತ್ಯಕ್ಕೆ ಉತ್ತಮವಾಗಿದ್ದು ಹೊಸ ಯುವ ಬಳಗಕ್ಕೆ ಎಲ್ಲರಾ ಪ್ರೋತ್ಸಾಹ ನೀಡಬೇಕು ಎಂದರು..

ಪತ್ರಕರ್ತರಾದ ಕಿಕ್ಕೇರಿ ಶಂಭು ಸಾರಥ್ಯದಲ್ಲಿ, ತ್ರೀಶೂಲ್ (ಆನೆಗೊಳ) ರವರ ನಿರ್ದೇಶನದಲ್ಲಿ ಗೋಪಿ ಮಾಣಿಕ್ಯ, ನಾಗೇಂದ್ರ ಹಳ್ಳಿ ಮೈಸೂರು ನಿರ್ಮಾಣದಲ್ಲಿ, ಸಂಗೀತಾ ಕ್ಲಾರೆನ್ಸ್ ಅಲೆನ್ ಕ್ರಾಸ್ಟ್, ನೃತ್ಯ ಮಿತುನ್, ಜಗದೀಶ್, ನಾರಾಯಣ್, ಶಂಭು ಹಾವೇರಿ, ನಾಗೇಂದ್ರ ಎಸ್, ಮಹೇಶ್ ಕರೋಠಿ, ಪಾಂಡು ಕುಮಾರ್, ಕೆ.ಎನ್ ಮಂಜುನಾಥ್, (ಆನೆಗೊಳ) ಶಿವು ಮೈಸೂರು, ಪ್ರದೀಪ್, ಪ್ರಶಾಂತ್ ರವರ ಸಹಕಾರೊಂದಿಗೆ ಅತೀ ಶೀಘ್ರದಲ್ಲೇ ನಿಮ್ಮ ಮುಂದೆ ಬರಲಿದೆ ಎಂದು ತಿಳಿಸಿದರು

ವರದಿ:ಶಂಭು ಕಿಕ್ಕೇರಿ

error: