May 16, 2024

Bhavana Tv

Its Your Channel

ಬಸ್ ಇಲ್ಲದೆ ಪರದಾಡಿದ ವಿದ್ಯಾರ್ಥಿಗಳು

ಕಿಕ್ಕೇರಿ; ಕೃಷ್ಣರಾಜಪೇಟೆ ತಾಲ್ಲೂಕಿನ ಕಿಕ್ಕೇರಿ ಇಂದು ದಿನನಿತ್ಯ ನೂರಾರು ವಿದ್ಯಾರ್ಥಿಗಳು ಕೆ.ಆರ್ ಪೇಟೆ ಮತ್ತು ಚನ್ನರಾಯಪಟ್ಟಣಕ್ಕೆ ಕಾಲೇಜು ಮತ್ತು ಶಾಲೆಗಳಿಗೆ ಹೋಗುತ್ತಿದ್ದು ಆದ್ರೆ ಬೆಳಗ್ಗೆ ಬಸ್ ನಿಲ್ದಾಣಕ್ಕೆ ಬಂದು ಕಾಯ್ದರು ಬಸ್ ಅನ್ನು ನಿಲ್ಲಸದೆ ವಿದ್ಯಾರ್ಥಿಗಳನ್ನು ಬಸ್ ಗೆ ಹತ್ತಿಸಿಕೊಳ್ಳದೆ ಹೋಗುತ್ತಾರೆ ಎಂದು ಆಕ್ರೋಶ ವ್ಯಕ್ತಪಡಿಸಿದರು.

ದಿನನಿತ್ಯ ಸರಿ ಸುಮಾರು ೫೦೦ ಹೆಚ್ವು ವಿದ್ಯಾರ್ಥಿಗಳು ಬಸ್ ಇಲ್ಲದೆ ಪರದಾಟ ಮಾಡುತ್ತಿದ್ದಾರೆ. ವಿದ್ಯಾರ್ಥಿಗಳು ಇಂದು ಬಸ್ ನಿಲ್ದಾಣಕ್ಕೆ ಬಂದ ಬಸ್ ಅನ್ನು ತಡೆದು ಆಕ್ರೋಶ ಹೊರ ಹಾಕಿದ್ದಾರೆ.
ಸ್ಥಳಕ್ಕೆ ಕೆ.ಎಸ್ ಆರ್ ಟಿ ಸಿ ಅಧಿಕಾರಿ ಭೇಟಿ ನೀಡಿ ಕೂಡಲೇ ಹೆಚ್ಚುವರಿ ಬಸ್ ಕಲ್ಪಿಸುವುದಾಗಿ ಭರವಸೆ ನೀಡಿದ್ದಾರೆ

ವರದಿ: ಶಂಭು ಕಿಕ್ಕೇರಿ

error: