April 29, 2024

Bhavana Tv

Its Your Channel

ಜಿಲ್ಲೆಯ ಸಾಹಿತ್ಯಕ್ಷೇತ್ರ ಮತ್ತಷ್ಟು ಸದೃಡಗೊಳ್ಳುವುದುಕ್ಕೆ ಸಾಹಿತಿ ಕೃಷ್ಣ ಸ್ವರ್ಣಸಂದ್ರ ರವರನ್ನು ಬೆಂಬಲಿಸಿ-ಸೋಮಶೇಖರ್

ಕಿಕ್ಕೇರಿ : ಜಿಲ್ಲೆಯ ಸಾಹಿತ್ಯಕ್ಷೇತ್ರ ಮತ್ತಷ್ಟು ಸದೃಡ ಗೊಳ್ಳುವುದುಕ್ಕೆ ಸಾಹಿತಿ ಮತ್ತು ಪತ್ರಕರ್ತ ಕೃಷ್ಣ ಸ್ವರ್ಣಸಂದ್ರ ರವರನ್ನು ಬೆಂಬಲಿಸೋಣ ಎಂದು ನಿಕಟಪೂರ್ವ ಕಸಾಪ ಅಧ್ಯಕ್ಷರು ಹಾಗೂ ಜಾನಪದ ಸಾಹಿತ್ಯ ತಾಲೂಕು ಅಧ್ಯಕ್ಷರಾದ ಸೋಮಶೇಖರ್ ರವರು ತಿಳಿಸಿದರು

ಕೆ ಆರ್ ಪೇಟೆ ಪಟ್ಟಣದ ಪ್ರವಾಸಿ ಮಂದಿರದಲ್ಲಿ ನಡೆದ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಸೋಮಶೇಖರ್ ಅವರು ಜಿಲ್ಲಾ ಮಟ್ಟದಲ್ಲಿ ಸಾಹಿತ್ಯ ಪರಿಷತ್ ಚುನಾವಣೆ ದಿನಾಂಕ ೨೧-೧೧-೨೦೨೧ ನಡೆಯಲಿರುವ ಚುನಾವಣೆಗೆ ಸಾಹಿತಿ ಹಾಗೂ ಹಿರಿಯ ಪತ್ರಕರ್ತರಾದ ಕೃಷ್ಣ ಸ್ವರ್ಣಸಂದ್ರ ರವರು ಕಳೆದ ಬಾರಿ ಪರಾಭವಗೊಂಡಿದ್ದರು ಕೂಡ ಉತ್ತಮ ಕಾರ್ಯಕ್ರಮಗಳನ್ನು ರೂಪಿಸುತ್ತ ಜಿಲ್ಲೆಯಲ್ಲಿ ತಮ್ಮದೇ ಹೆಸರು ಗಳಿಸಿರುವ ಕೃಷ್ಣ ಸ್ವರ್ಣಸಂದ್ರ ರವರ ಗೆಲುವಿಗಾಗಿ ಕೈ ಬಲಪಡಿಸುವ ನಿಟ್ಟಿನಲ್ಲಿ 13-11-2021 ಪಟ್ಟಣದ ರಾಮದಾಸ್ ಸುಲೋಚಮ್ಮ ಪಾರ್ಟಿಹಾಲಿನಲ್ಲಿ ಬೆಂಬಲಿಗರ ಸಭೆ ಆಯೋಜಿಸಿದ್ದೇವೆ ಈ ಸಭೆಗೆ ಹೆಚ್ಚಿನ ಸಂಖ್ಯೆಯಲ್ಲಿ ಸಾಹಿತಿಗಳು ಮತ್ತು ಕೃಷ್ಣ ಸ್ವರ್ಣಸಂದ್ರ ಬೆಂಬಲಿಗರು ಆಗಮಿಸಿ ಕಾರ್ಯಕ್ರಮ ಯಶಸ್ವಿಗೊಳಿಸಬೇಕು ಎಂದು ಸೋಮಶೇಖರ್ ಅವರು ಕರೆ ನೀಡಿದರು….

ಈ ಸಂದರ್ಭದಲ್ಲಿ ಹಿರಿಯ ಪತ್ರಕರ್ತರಾದ ಹರಿಚರಣ ತಿಲಕ್ .ಟಿ.ವೈ.ಅನಂದ್. ಶಿಕ್ಷಕರು ಗಳಾದ ಚನ್ನರಾಜು ನೌಕರರ ಸಂಘದ ಪ್ರಧಾನ ಕಾರ್ಯದರ್ಶಿಗಳಾದ ಅನಂದ್.ಬಸ್ತಿ ರಂಗಪ್ಪನವರು. ಬಸ್ತಿ ಯೋಗೇಂದ್ರ.ಉಪನ್ಯಾಸಕರಾದ ಕತ್ತರಘಟ್ಟ ವಾಸು ಕುಮಾರಸ್ವಾಮಿ. ಚಲುವಯ್ಯನವರು.ಚಾ.ಶಿ.ಜಯಕುಮಾರ್ . ಸೇರಿದಂತೆ ಉಪಸ್ಥಿತಿರಿದ್ದರು….

ವರದಿ: ಶಂಭು ಕಿಕ್ಕೇರಿ

error: