April 28, 2024

Bhavana Tv

Its Your Channel

ಗಂಡನ ಮಾನಸಿಕ ಕಿರುಕುಳಕ್ಕೆ ಬೇಸತ್ತು ಗೃಹಿಣಿ ವಿಷ ಸೇವಿಸಿ ಆತ್ಮಹತ್ಯೆ

ಕೃಷ್ಣರಾಜಪೇಟೆ ತಾಲ್ಲೂಕಿನ ಬೊಮ್ಮನಾಯಕನಹಳ್ಳಿ ಗ್ರಾಮದ ಅಮಿತಾ ಮಂಜನಾಥ್ ಗೌಡ ರವರ ಪುತ್ರಿಯಾದ ನಿಶಾ ಗೌಡ ರವರನ್ನು ತಾಲ್ಲೂಕಿನ ಅಗ್ರಹಾರ ಬಾಚಹಳ್ಳಿ ಗ್ರಾಮದ ಪ್ರೇಮ ನಾಗೇಶ್ ರವರ ಮಗ ರಾಮಕೃಷ್ಣ ಎಂಬುವರಿಗೆ ಕಳೆದ ಮೂರು ವರ್ಷದ ಹಿಂದೆ ಅದ್ದೂರಿಯಾಗಿ ಮದುವೆ ಮಾಡಿಕೊಡಲಾಗಿತ್ತು.

ಆದ್ರೆ ಆಸಾಮಿ, ಹಾಗೂ ಅವರ ಕುಟುಂಬದವರು ಮದುವೆ ಮಾಡಿಕೊಂಡ ಮೇಲೆ ಹೆಚ್ಚುವರಿ ವರದಕ್ಷಿಣೆಗೆ ಬೇಡಿಕೆ ಇಟ್ಟು ಪದೇ ಪದೇ ಮಾನಸಿಕ ಕಿರುಕುಳ ನೀಡುತ್ತಿರುವ ಕಾರಣಕ್ಕೆ ವಿಷ ಸೇವಿಸಿ ಆತ್ಮಹತ್ಯೆ ಮಾಡಿಕೊಂಡಿರುವುದಾಗಿ ಆಕೆಯ ತಂಗಿ ಕವಿತಾ ವಿಜಯ್ ರವರು ಕೆ ಆರ್ ಪೇಟೆ ಪಟ್ಟಣದ ಪೋಲೀಸ್ ಠಾಣೆಗೆ ದೂರು ನೀಡಿದ್ದು ಪ್ರಕರಣ ದಾಖಲಾಗಿದೆ.

ಕೇಸು ದಾಖಲಿಸಿಕೊಂಡ ಕೆ.ಆರ್ ಪೇಟೆ ಪೋಲೀಸರು ರಾಮಕೃಷ್ಣ ರವರ ತಾಯಿಯನ್ನು ಈಗಾಗಲೇ ಬಂಧಿಸಿ ನ್ಯಾಯಾಲಯದ ಬಂಧನಕ್ಕೆ ಒಪ್ಪಿಸಲಾಗಿದ್ದು ಆದ್ರೆ ನನ್ನ ತಂಗಿಯ ಸಾವಿಗೆ ಕಾರಣಕರ್ತರಾದ ರಾಮಕೃಷ್ಣ ಆತನ ತಂದೆ ನಾಗೇಶ್, ಮಗಳು ದೀಪ, ವಿನೋದ, ದೇವರಾಜು ವಿರುದ್ದು ದೂರು ದಾಖಲಿಸಿದ್ದು ಕೂಡಲೇ ಇವರನ್ನು ಬಂಧಿಸುವAತೆ ಮನವಿ ಮಾಡಿದರು..

ವರದಿ: ಶಂಭು ಕಿಕ್ಕೇರಿ

error: