April 29, 2024

Bhavana Tv

Its Your Channel

ಕಷ್ಟದ ಪರಿಸ್ಥಿತಿಯಲ್ಲಿ ಇದ್ದ ರೈತನಿಗೆ ಆರ್ಥಿಕ ಸಹಾಯ ಹಸ್ತ ನೀಡಿದ ಮನ್ ಮನ್ ನಿರ್ದೇಶಕ ಜೆ.ಡಿ.ಎಸ್ ನಾಯಕರಾದ ಹೆಚ್ ಟಿ ಮಂಜು

ಕೃಷ್ಣರಾಜಪೇಟೆ ತಾಲ್ಲೂಕಿನ ಕಿಕ್ಕೇರಿ ಹೋಬಳಿಯ ಶೆಟ್ಟಹಳ್ಳಿ ಗ್ರಾಮದ ಮಲ್ಲೇಶ್ ಎಂಬಾತ ತೆಂಗಿನ ಕಾಯಿ ಕೀಳಲು ಹೋಗಿ ಆಯಾ ತಪ್ಪಿ ಮರದಿಂದ ಬಿದ್ದು ಎದೆ ಭಾಗದ ಮೂಳೆ ಹಾಗೂ ಬೆನ್ನು ಮೂಳೆ ಮುರಿದು ಹೋಗಿದ್ದು ಇದರ ಬಗ್ಗೆ ತಿಳಿದ ಮನ್ ಮುಲ್ ನಿರ್ದೇಶಕ ಆರ್ಥಿಕ ಸಹಾಯ ಹಸ್ತ ನೀಡಿ ಮಾನವೀಯತೆಯ ಮೆರೆದಿದ್ದಾರೆ…

ಶೆಟ್ಟಹಳ್ಳಿ ಗ್ರಾಮದ ಮಲ್ಲೇಶ್ ಎಂಬುರ ಮನೆಗೆ ಭೇಟಿ ನೀಡಿ ರೈತನ ಆರೋಗ್ಯ ವಿಚಾರಿಸಿ ಕುಟುಂಬಕ್ಕೆ ಆಸರೆಯಾಗಿರುವ ಮಲ್ಲೇಶ್ ರವರು ಸ್ಥಿತಿ ಗಂಭೀರವಾಗಿದ್ದು ಚಿಕಿತ್ಸೆಗಾಗಿ ಎ.ಪಿ.ಎಂ.ಸಿ ಇಂದ ನೆರವು ಕೊಡಿಸಲು ಪ್ರಯತ್ನ ಮಾಡುತ್ತೇನೆ ಎಂದು ಭರವಸೆ ನೀಡಿ ಆರೋಗ್ಯದ ಬಗ್ಗೆ ಜಾಗೃತಿಯಾಗಿರುವಂತೆ ಸಲಹೆ ನೀಡಿದರು…

ಈ ಸಂದರ್ಭದಲ್ಲಿ ತಾಲ್ಲೂಕು ಜೆ.ಡಿ.ಎಸ್ ಘಟಕದ ಅಧ್ಯಕ್ಷರಾದ ಜಾನಕಿರಾಮು, ಮುಖಂಡರಾದ ಕೋಡಿಮರನಹಳ್ಳಿ ಹರೀಶ್, ದೇವರಾಜು, ಶೇಖರ್, ಮಂಜು, ಸೇರಿದಂತೆ ಹತ್ತಾರು ಸಾರ್ವಜನಿಕರು ಇದ್ದರು..

ವರದಿ ಶಂಭು ಕಿಕ್ಕೇರಿ

error: