ನಾಗಮಂಗಲ ; ತಾಲೂಕು ಬಿಂಡಿಗನವಿಲೆ ಹೋಬಳಿ ಲಾಳನಕೆರೆ ಕೃಷಿ ಪತ್ತಿನ ಸಹಕಾರ ಸಂಘಕ್ಕೆ ಮಾಜಿ ಸಚಿವ ಚೆಲುವರಾಯಸ್ವಾಮಿ ಬಣದ ಲಾಳನಕೆರೆ ಮಂಜೇಶ್ ಅಧ್ಯಕ್ಷರಾಗಿ ಉಪಾಧ್ಯಕ್ಷರಾಗಿ ಶಾಂತಮ್ಮ ಅವಿರೋಧವಾಗಿ ಆಯ್ಕೆಯಾಗಿದ್ದಾರೆ
ಕೆಲವು ದಿನಗಳ ಹಿಂದೆ ಇದೇ ಸಂಘದ ನಿರ್ದೇಶಕರ ಸ್ಥಾನಕ್ಕೆ ಚುನಾವಣೆ ನಡೆದಿತ್ತು ರಾಜ್ಯ ಫೆಡರೇಶನ್ ನಿರ್ದೇಶಕ ತುರುಬನಹಳ್ಳಿ ರಾಜೇಗೌಡ ರವರ ಸಾರಥ್ಯದಲ್ಲಿ ಹನ್ನೊಂದು ಜನ ಚೆಲುವರಾಯಸ್ವಾಮಿ ಬೆಂಬಲಿಗರು ಆಯ್ಕೆಯಾಗಿ ವಿಜಯಶಾಲಿಯಾಗಿ ದ್ದರು. ಸೋಮವಾರ ನಡೆದ ಲಾಳನಕೆರೆ ಕೃಷಿ ಪತ್ತಿನ ಸಹಕಾರ ಸಂಘದ ಅಧ್ಯಕ್ಷ. ಉಪಾಧ್ಯಕ್ಷರ ಸ್ಥಾನದ ಚುನಾವಣೆಯಲ್ಲಿ ಎಲ್ಲಾ ನಿರ್ದೇಶಕರ ಒಪ್ಪಿಗೆ ಮೇರೆಗೆ ಅಧ್ಯಕ್ಷರಾಗಿ ಲಾಳನಕೆರೆ ಗ್ರಾಮದ ಮಂಜೇಶ್ ಉಪಾಧ್ಯಕ್ಷರಾಗಿ ಶಾಂತಮ್ಮ ನವರು ಅವಿರೋಧವಾಗಿ ಆಯ್ಕೆಯಾದರು
ಇದೇ ಸಂದರ್ಭದಲ್ಲಿ ಮಾತನಾಡಿದ ರಾಜ್ಯ ಫೆಡರೇಶನ್ ನಿರ್ದೇಶಕ ತುರುಬನಹಳ್ಳಿ ರಾಜೇಗೌಡ ನಮ್ಮ ನಾಯಕರಾದ ಚೆಲುವರಾಯಸ್ವಾಮಿ ರವರ ಆಶೀರ್ವಾದದೊಂದಿಗೆ ಎಲ್ಲಾ ನಿರ್ದೇಶಕರು ಕೂಡ ಆಯ್ಕೆಯಾಗಿ ನಮ್ಮ ಬೆಂಬಲಿಗರು ಅಧ್ಯಕ್ಷರು ಮತ್ತು ಉಪಾಧ್ಯಕ್ಷ ಸ್ಥಾನ ಗಳಿಸಿದ್ದಾರೆ ಇದೇ ರೀತಿ ಸಂಘದ ಅಭಿವೃದ್ಧಿ ಏಳಿಗೆಗೆ ಒಗ್ಗೂಡಬೇಕು ಎಂದು ತಿಳಿಸಿದರು
ರಾಜ್ಯ ಎಸ್.ಡಿ.ಬಿ.ಐ.ಎಲ್. ನಿರ್ದೇಶಕ ತಿಮ್ಮರಾಯಿ ಗೌಡ ಮಾತನಾಡಿ ನಮ್ಮ ನಾಯಕರಾದ ಚೆಲುವರಾಯಸ್ವಾಮಿ ರವರ ವರ್ಚಸ್ಸು ದಿನದಿಂದ ದಿನಕ್ಕೆ ಹೆಚ್ಚುತ್ತಿದೆ ತಳಮಟ್ಟದ ಗ್ರಾಮ ಪಂಚಾಯತಿ ಚುನಾವಣೆ ಸಹಕಾರ ಸಂಘಗಳ ಚುನಾವಣೆ ಎಲ್ಲಾ ತಾಲೂಕು ಮಟ್ಟದ ಚುನಾವಣೆಗಳಲ್ಲೂ ಕೂಡ ನಮ್ಮ ಬೆಂಬಲಿಗರು ಮೇಲುಗೈ ಸಾಧಿಸಿದ್ದಾರೆ ಮುಂದಿನ ದಿನದಲ್ಲಿ ಗ್ರಾಮ ಪಂಚಾಯಿತಿ ಮತ್ತು ಜಿಲ್ಲಾ ಪಂಚಾಯಿತಿ ಮಟ್ಟದ ಚುನಾವಣೆಯಲ್ಲಿ ಎಲ್ಲರೂ ಒಗ್ಗೂಡಿ ಶ್ರಮಿಸಬೇಕು ನಮ್ಮ ನಾಯಕರಾದ ಚೆಲುವರಾಯಸ್ವಾಮಿ ಅವರ ಕೈ ಬಲಪಡಿಸಬೇಕೆಂದರು.
ಇದೇ ಸಂದರ್ಭದಲ್ಲಿ ಚುನಾವಣೆ ಅಧಿಕಾರಿ ಖಾಲಿದ್ ಅಹಮ್ಮದ್ ಲಾಳನಕೆರೆ ಕೃಷಿ ಪತ್ತಿನ ಸಹಕಾರ ಸಂಘದ ಕಾರ್ಯದರ್ಶಿ ಕುಮಾರ್ ಬಿದರಿಕೆರೆ ಚಂದ್ರು ತುರುಬನಹಳ್ಳಿ ದಿವಾಕರ ಹಾಗೂ ಅಭಿಮಾನಿ ಕಾರ್ಯಕರ್ತರು ಭಾಗವಹಿಸಿದ್ದರು
More Stories
ನೂತನ ಅದ್ಯಕ್ಷರಾಗಿ ಶ್ರೀಮತಿ ಮಹಾಲಕ್ಷ್ಮಿ ವಿಶ್ವಾನಾಥ್, ಉಪಾದ್ಯಕ್ಷರಾಗಿ ನಂಜೇಶ್
ಕಿಕ್ಕೇರಮ್ಮನವರ ಜಾತ್ರೆ ಹಾಗೂ ರಥೋತ್ಸವ, ಭಕ್ತಾದಿಗಳಿಗೆ ಮಜ್ಜಿಗೆ ಪಾನಕ
ಐಕನಹಳ್ಳಿ ಗ್ರಾ.ಪಂ ನೂತನ ಅಧ್ಯಕ್ಷರಾಗಿ ಅಂಬುಜ ಉದಯಶಂಕರ್ ಅವಿರೋಧವಾಗಿ ಆಯ್ಕೆ