May 17, 2024

Bhavana Tv

Its Your Channel

ಜನಸಂದಣಿ ಹೆಚ್ಚಿರುವುದು ಹಾಗೂ ಅಂಗಡಿಗಳು ತೆರೆದಿರುವುದಕ್ಕೆ ಜಿಲ್ಲಾಧಿಕಾರಿ ಆಕ್ರೋಶ.

ನಾಗಮಂಗಲ: ನಾಗಮಂಗಲ ಪುರಸಭೆ ಮುಖ್ಯಾಧಿಕಾರಿಯನ್ನು ತರಾಟೆಗೆ ತೆಗೆದುಕೊಂಡ ಜಿಲ್ಲಾಧಿಕಾರಿ ಅಶ್ವಥಿ. ಕರ್ನಾಟಕ ಸರ್ಕಾರದ ಆದೇಶವಿದ್ದರು ಇನ್ಯಾವ ಆದೇಶ ಬೇಕು. ಕೋವಿಡ್ ನಿಯಮ ಪಾಲನೆ ಮಾಡಲು ಏನು ಕಷ್ಟ.
ಸಂತೆ ರೀತಿಯಲ್ಲಿ ವ್ಯಾಪಾರ ವಹಿವಾಟು ನಡೆಯಲು ಅವಕಾಶ ಕಲ್ಪಿಸಿಕೊಟ್ಟಿರುವುದು ಏಕೆ ಎಂದು ತರಾಟೆ.
ಅಗತ್ಯ ವಸ್ತುಗಳ ಅಂಗಡಿಗಳನ್ನು ಹೊರತುಪಡಿಸಿ ಎಲ್ಲಾ ಅಂಗಡಿಗಳನ್ನು ಮುಚ್ಚಿಸುವಂತೆ ಖಡಕ್ ಆಗಿ ಎಚ್ಚರಿಕೆ ನೀಡಿದ ಜಿಲ್ಲಾಧಿಕಾರಿ.ಕೋವಿಡ್ ನಿಯಮ ಉಲ್ಲಂಘಿಸಿದವರ ವಿರುದ್ದ ಕ್ರಮ ಜರುಗಿಸುವಂತೆ ಸಿಪಿಐ ಸುಧಾಕರ್ ಅವರಿಗೆ ಸೂಚನೆ ನೀಡಿದ ಡಿಸಿ.

ನಾಗಮಂಗಲ ಪಟ್ಟಣ ಸಾರ್ವಜನಿಕ ಆಸ್ಪತ್ರೆ ಹಾಗೂ ಕೋವಿಡ್ ಸೆಂಟರ್ ಗೆ ಭೇಟಿ ನೀಡಿ ಕೋವಿಡ್ ಸೋಂಕಿತರ ಆರೋಗ್ಯ ವಿಚಾರಿಸಿದ ಜಿಲ್ಲಾಧಿಕಾರಿ.ತಾಲೂಕಿನಲ್ಲಿರುವ ಕರೊನಾ ಪರಿಸ್ಥಿತಿ ಕುರಿತಾಗಿ ಅಧಿಕಾರಿಗಳಿಂದ ಮಾಹಿತಿ ಪಡೆದರು.ತಹಸೀಲ್ದಾರ್ ಅಹಮದ್, ಖಿಊಔ ಡಾ.ರಮೇಶ್, ಡಾ. ವೆಂಕಟೇಶ್, ಸಿಪಿಐ ಸುಧಾಕರ್ ಇದ್ದರು.

error: