ಕೃಷ್ಣರಾಜಪೇಟೆ: ತಾಲೂಕಿನ ಅಕ್ಕಿಹೆಬ್ಬಾಳು ಗ್ರಾಮದಲ್ಲಿ ಆಶಾ ಕಾರ್ಯಕರ್ತರಿಗೆ ಮತ್ತು ಆಟೋಚಾಲಕರಿಗೆ ಮಂಡ್ಯ ಜಿಲ್ಲಾ ಮಣ್ಮುಲ್ ನಿರ್ದೇಶಕರಾದ ಎಚ್ ಟಿ ಮಂಜು ರವರು ಆಹಾರದ ಕಿಟ್ಗಳನ್ನು ವಿತರಿಸಿದರು.
ನಂತರ ಮಾತನಾಡಿದ ಎಚ್ ಟಿ ಮಂಜುರವರು ಆಟೋ ಚಾಲಕರು ಲಾಕ್ಡೌನ್ ಆದ ಸಂದರ್ಭದಿAದಲೂ ಯಾವುದೇ ಆದಾಯವಿಲ್ಲದೆ ಮನೆಯಲ್ಲಿ ಕೂತಿದ್ದಾರೆ. ಯಾವುದೇ ಪ್ರಯಾಣಿಕರು ಸಂಚರಿಸಿದೆ ಆಟೋ ಚಾಲಕರಿಗೆ ತುಂಬಾ ತೊಂದರೆಯಾಗುತ್ತಿದೆ. ಈ ಹಿನ್ನಲೆಯಲ್ಲಿ ರಾಜ್ಯದ ಮಾಜಿ ಮುಖ್ಯಮಂತ್ರಿಗಳಾದ ಕುಮಾರಸ್ವಾಮಿ ರವರ ಆಶೀರ್ವಾದದೊಂದಿಗೆ ನಾವು ಕೃಷ್ಣರಾಜಪೇಟೆ ತಾಲೂಕಿನ ಆಟೋ ಚಾಲಕರು ಮತ್ತು ಆಶಾ ಕಾರ್ಯಕರ್ತರಿಗೆ ಪುಡ್ ಕಿಟ್ ವಿತರಿಸುವ ಮೂಲಕ ನಮ್ಮ ಸಮಾಜ ಸೇವೆಯನ್ನು ಮಾಡುತ್ತಿದ್ದೇವೆ ಎಂದು ಹೇಳಿದರು.
ಗ್ರಾಮ ಪಂಚಾಯಿತಿ ಸದಸ್ಯರಾದ ಅತೀಕ್ ಮಾತನಾಡಿ ಮಂಜಣ್ಣನವರು ಸಮಾಜ ಸೇವೆ ಮಾಡುತ್ತಾ ಮುಂದಿನ ಶಾಸಕರಾಗಲಿ ಎಂದು ಶುಭ ಹಾರೈಸಿದರು. ಇದೇ ಸಂದರ್ಭದಲ್ಲಿ ೧೫೦ಕ್ಕೂ ಹೆಚ್ಚಿನ ಆಟೋ ಚಾಲಕರಿಗೆ ಹಾಗೂ ಕೋವಿಡ್ ಸಂದರ್ಭದಲ್ಲಿ ತಮ್ಮ ನಿಷ್ಠಾವಂತ ಕಾರ್ಯವನ್ನು ಪ್ರದರ್ಶಿಸುತ್ತಿರುವ ಆಶಾ ಕಾರ್ಯಕರ್ತರಿಗೆ ಆಹಾರ ಕಿಟ್ಗಳನ್ನು ವಿತರಿಸಿದರು.
ಈ ಸಂದರ್ಭದಲ್ಲಿ ಮಣ್ಮುಲ್ ನಿರ್ದೇಶಕರಾದ ಎಚ್ ಟಿ ಮಂಜು, ಜೆಡಿಎಸ್ ಮುಖಂಡರಾದ ಕೋಟಿ ಸುಬ್ಬೆಗೌಡರು, ಗ್ರಾಮ ಪಂಚಾಯಿತಿ ಸದಸ್ಯರಾದ ಅತೀಕ್, ಮಾಜಿ ಸದಸ್ಯರಾದ ಕಾಳನಾಯಕ, ನಯಾಜ್ ಪಾಷ, ಸೇರಿ , ಸೇರಿ 150ಕ್ಕೂ ಹೆಚ್ಚಿನ ಆಟೋ ಚಾಲಕರು ಹಾಜರಿದ್ದರು
More Stories
ಇಂಧನ ದಕ್ಷ ಪಂಪ್ ಉಪಕರಣಗಳ ಕುರಿತು ತರಬೇತಿ ಮತ್ತು ಜಾಗೃತಿ ಕಾರ್ಯಕ್ರಮ
ಚುನಾವಣೆ ನಡೆಸಲು ರಾಜಕೀಯ ಪಕ್ಷಗಳು ಹಾಗೂ ಸಾರ್ವಜನಿಕರು ಸಹಕಾರ ನೀಡಬೇಕು ಎಂದು ಚುನಾವಣಾಧಿಕಾರಿ ಚಂದ್ರಯ್ಯ ಮನವಿ
ದೇವಿರಮ್ಮಣ್ಣೆ ಕೆರೆ ಅಂಗಳಕ್ಕೆ ಇಳಿದು ಪ್ರತಿಭಟನೆ ನಡೆಸಿ ಆಕ್ರೋಶ ವ್ಯಕ್ತಪಡಿಸಿದ ರೈತ ಬಾಂಧವರು