ಕೆ ಆರ್ ಪೇಟೆ: ಕರ್ತವ್ಯದಲ್ಲಿ ಎಳ್ಳಷ್ಟು ಲೋಪದೋಷಗಳು ಇಲ್ಲದಿದ್ದರೂ ನಾನು ಸುಮಲತಾ ಅಂಬರೀಶ್ ಮತ್ತು ದರ್ಶನ್ ರವರ ಅಪ್ಪಟ ಅಭಿಮಾನಿ ಎಂಬ ಕಾರಣಕ್ಕೆ ನನ್ನ ಕೆಲಸದಿಂದ ವಜಾಗೊಳಿಸಿದ್ದಾರೆ ಎಂದು ಗ್ರಾಮ ಪಂಚಾಯಿತಿ ಆಡಳಿತ ಮಂಡಳಿಯ ಕೆಲ ಸದಸ್ಯರ ವಿರುದ್ಧ ಗಂಭೀರವಾಗಿ ಆರೋಪಿಸಿ ಏಕಾಂಗಿಯಾಗಿ ನಿರಂತರ ಧರಣಿ ನಡೆಸಿದ ಶಾನುಬಿ ಎಂಬ ಮಹಿಳೆ
ಕೆ ಆರ್ ಪೇಟೆ ತಾಲೂಕಿನ ತಾಲ್ಲೂಕಿನ ಶೀಳನೆರೆ ಹೋಬಳಿಯ ಹರಳಹಳ್ಳಿ ಗ್ರಾಮ ಪಂಚಾಯಿತಿಯಲ್ಲಿ ಕಳೆದ ೬ವರ್ಷಗಳಿಂದ ಕಡತ ಸಹಾಯಕಿಯಾಗಿ ಕೆಲಸ ಮಾಡುತ್ತಿದ್ದ ನನ್ನನ್ನು ಕಾರಣಾಂತರದಿAದ ನೀರುಗಂಟಿ ಕೆಲಸಕ್ಕೆ ನಿಯೋಜಿಸಿದರು ವಾಲ್ ಗಳನ್ನು ಹಾಕಿರುವ ಸ್ಥಳಗಳನ್ನು ತೋರಿಸದೇ ನೀರುಗಂಟಿ ಕೆಲಸ ಮಾಡಲೂ ಕಿರುಕುಳ ನೀಡಿ ಯಾವುದೇ ಲೋಪದೋಷ ವಿಲ್ಲದವರು ಕೂಡ ಚಲನಚಿತ್ರ ನಟಿ ಹಾಗೂ ಮಂಡ್ಯ ಜಿಲ್ಲೆಯ ಸಂಸದೆ ಸುಮಲತಾ ಅಂಬರೀಶ್ ಮತ್ತು ನಟ ದರ್ಶನ್ ರವರ ಅಪ್ಪಟ ಅಭಿಮಾನಿ ಎಂಬ ಕಾರಣಕ್ಕೆ ಏಕಾಏಕಿ ಕೆಲಸದಿಂದ ತೆಗೆದು ಹಾಕಿದ್ದಾರೆ ಎಂದು ಆಡಳಿತ ಮಂಡಳಿಯ ಕೆಲ ಸದಸ್ಯರ ವಿರುದ್ಧ ಗಂಭೀರವಾಗಿ ಆರೋಪಿಸಿ ಒಬ್ಬ ನೌಕರ ಸಿನಿಮಾ ನಟರ ಅಭಿಯಾನಿಯಾಗ ಬಾರದೇ? ಎಂದು ಪ್ರಶ್ನಿಸಿ ಶೀಘ್ರವೇ ನನ್ನದೇ ನ್ಯಾಯ ದೊರಕಿಸಿಕೊಡಬೇಕು ಎಂದು ಗ್ರಾಮ ಪಂಚಾಯಿತಿ ಆವರಣದಲ್ಲಿ ಶುಕ್ರವಾರ ನಿರಂತರ ಏಕಾಂಗಿ ಧರಣಿ ನಡೆಸಿ ಆಕ್ರೋಶ ವ್ಯಕ್ತಪಡಿಸಿದರು.
ಏನೇ ಆಗಲಿ ಇತ್ತೀಚಿನ ದಿನಗಳಲ್ಲಿ ಕೆಲ ಪ್ರಭಾವಿ ರಾಜಕೀಯ ನಾಯಕರ ತಿಕ್ಕಾಟಕ್ಕೆ ಅಭಿಮಾನಿಗಳು ಮತ್ತು ಕಾರ್ಯಕರ್ತರು ಸಂಕಷ್ಟಕ್ಕೆ ಸಿಲುಕಿದ್ದಾರೆ ಮುಂದಿನ ದಿನಗಳಲ್ಲಿ ಇಂತಹ ಘಟನೆಗೆ ಕಡಿವಾಣ ಬೀಳುತ್ತದೆ ಎಂದು ಕಾದುನೋಡಬೇಕಿದೆ.
ವರದಿ:- ಮನು ಮಾಕವಳ್ಳಿ ಕೆ ಆರ್ ಪೇಟೆ
More Stories
ತಮಟೆಯ ಸದ್ದಿಗೆ ಲಯಬದ್ದವಾಗಿ ಹೆಜ್ಜೆ ಹಾಕಿ ರಂಗ ಕುಣಿದು ಸಂಭ್ರಮಿಸಿದ ಗ್ರಾಮಸ್ಥರು..
ಇಂಧನ ದಕ್ಷ ಪಂಪ್ ಉಪಕರಣಗಳ ಕುರಿತು ತರಬೇತಿ ಮತ್ತು ಜಾಗೃತಿ ಕಾರ್ಯಕ್ರಮ
ಚುನಾವಣೆ ನಡೆಸಲು ರಾಜಕೀಯ ಪಕ್ಷಗಳು ಹಾಗೂ ಸಾರ್ವಜನಿಕರು ಸಹಕಾರ ನೀಡಬೇಕು ಎಂದು ಚುನಾವಣಾಧಿಕಾರಿ ಚಂದ್ರಯ್ಯ ಮನವಿ