May 16, 2024

Bhavana Tv

Its Your Channel

ಶ್ರೀ ಲಕ್ಷ್ಮೀನಾರಾಯಣಸ್ವಾಮಿ ದೇವಾಲಯದ ಜೀರ್ಣೋದ್ಧಾರ ಕಾರ್ಯಕ್ಕೆ ದಾನಿಗಳ ಕೊಡುಗೆ

ಕೃಷ್ಣರಾಜಪೇಟೆ ಪಟ್ಟಣದ ಪುರಾಣ ಪ್ರಸಿದ್ಧವಾದ ಶ್ರೀ ಲಕ್ಷ್ಮೀನಾರಾಯಣಸ್ವಾಮಿ ದೇವಾಲಯದ ಜೀರ್ಣೋದ್ಧಾರ ಕಾರ್ಯಕ್ಕೆ ದಾನಿಗಳ ಕೊಡುಗೆ. ಶ್ರೀ ಲಕ್ಷ್ಮೀನಾರಾಯಣಸ್ವಾಮಿ, ಮಹಾಲಕ್ಷ್ಮಿಅಮ್ಮನವರು ಹಾಗೂ ಆಂಜನೇಯಸ್ವಾಮಿ ಶಿಲಾಮೂರ್ತಿಗಳಿಗೆ ಹಿತ್ತಾಳೆಯ ಕವಚಗಳು ಹಾಗೂ ಪ್ರಭಾವಳಿಯ ನಿರ್ಮಾಣಕ್ಕೆ ಚಾಲನೆ ನೀಡಲಾಯಿತು ..

ಪಾಂಡವಪುರ ತಾಲ್ಲೂಕಿನ ಚಿನಕುರಳಿಯ ದಾನಿಗಳಾದ ಧನಂಜಯ ಅವರು ನಾಗಮಂಗಲದ ಶಿಲ್ಪಿಗಳಾದ ವೆಂಕಟೇಶಮೂರ್ತಿ ಅವರ ಮೂಲಕ ಕವಚಗಳು ಹಾಗೂ ತಿರುಮಲ ತಿರುಪತಿಯ ಮಾದರಿಯಲ್ಲಿ ಶ್ರೀ ಲಕ್ಷ್ಮೀನಾರಾಯಣಸ್ವಾಮಿಯ ಶಿಲಾಮೂರ್ತಿಗೆ ೮ಅಡಿ ಎತ್ತರದ ಪ್ರಭಾವಳಿಯನ್ನು ನಿರ್ಮಿಸಿ ಜೀರ್ಣೋದ್ಧಾರ ಆಗುತ್ತಿರುವ ದೇವಾಲಯಕ್ಕೆ ಸಮರ್ಪಣೆ ಮಾಡಲು ಮುಂದಾಗಿದ್ದಾರೆ…

ಧನAಜಯ ಅವರ ಸೇವಾ ಕಾರ್ಯವನ್ನು ತಾಲ್ಲೂಕು ಆಡಳಿತದ ಮುಖ್ಯಸ್ಥರಾದ ತಹಶೀಲ್ದಾರ್ ಎಂ.ಶಿವಮೂರ್ತಿ ಮತ್ತು ದೇವಾಲಯದ ಪ್ರಧಾನ ಅರ್ಚಕರಾದ ವೇದಬ್ರಹ್ಮ ಶ್ರೀ ನಾರಾಯಣಾಚಾರ್ಯ ಅವರು ಶ್ಲಾಘಿಸಿದ್ದಾರೆ.

ಮಾಹಿತಿಗಾಗಿ. ಕೆ.ಆರ್.ನೀಲಕಂಠ .
ಕೃಷ್ಣರಾಜಪೇಟೆ . ಮಂಡ್ಯ

error: