ಕೆ.ಆರ್.ಪೇಟೆ: ಟ್ಯಾಕ್ಟರ್ ಚಾಲಕನ ನಿಯಂತ್ರಣ ತಪ್ಪಿ ಬಾರಿ ಅಪಘಾತ…ಟ್ರಾಕ್ಟರ್ ಮೊಗಚಿ ಬಿದ್ದು ಸ್ಥಳದಲ್ಲೇ ಇಬ್ಬರ ದಾರುಣ ಸಾವು. ಸುದ್ದಿ ತಿಳಿಯುತ್ತಿದ್ದಂತೆ ಸ್ಥಳಕ್ಕೆ ದೌಡಾಯಿಸಿದ ಗ್ರಾಮಾಂತರ ಠಾಣೆಯ ಪೊಲೀಸರು
ಕೃಷ್ಣರಾಜಪೇಟೆ ತಾಲೂಕಿನ ಬೀರವಳ್ಳಿ ಗ್ರಾಮ ಪಂಚಾಯಿತಿ ವ್ಯಾಪ್ತಿಗೆ ಬರುವ ಶಕ್ತಿದೇವತೆ ತಾಯಿ ಶ್ರೀ ಚಂದಗೋಳಮ್ಮನವರ ದೇವಾಲಯಕ್ಕೆ ಕೆ ಆರ್ ನಗರ ತಾಲೂಕಿನ ತಂದ್ರೆ ಗ್ರಾಮದ ಭಕ್ತಾದಿಗಳು ಹರಕೆ ರೂಪದಲ್ಲಿ ದೇವಾಲಯದಲ್ಲಿ ಪರುವನ್ನು ನೆರವೇರಿಸಿ ಸಂಜೆ ಹಿಂತಿರುಗುವಾಗ ಟ್ಯಾಕ್ಟರ್ ಚಾಲಕನ ಅಜಾಗರೂಕತನದಿಂದ ಟ್ಯಾಕ್ಟರ್ ಪಲ್ಟಿ ಹೊಡೆದು ಟ್ರ್ಯಾಕ್ಟರ್ ನಲ್ಲಿದ್ದ ೭ಕ್ಕೂ ಹೆಚ್ಚು ಜನರಿಗೆ ಗಂಭೀರವಾದ ಗಾಯಗಳಾಗಿದ್ದು ಸ್ಥಳದಲ್ಲೇ ರಮೇಶ್ ತಮ್ಮೇಗೌಡ (೪೫ ವರ್ಷ), ಬಾಲಕ ಧ್ರುವ ಬಲರಾಮ (೧೧ ವರ್ಷ) ಸ್ಥಳದಲ್ಲೇ ಮೃತಪಟ್ಟಿದ್ದಾರೆ. ಚನ್ನಪ್ಪ ಕೃಷ್ಣೇಗೌಡ, ಮಂಜು ಸ್ವಾಮಿಗೌಡ, ಅಭಿ ಚೆನ್ನಪ್ಪ, ಮೂವರಿಗೆ ತೀವ್ರಸ್ವರೂಪದ ಗಾಯಗೊಂಡ ಹಿನ್ನೆಲೆಯಲ್ಲಿ ಹೆಚ್ಚಿನ ಚಿಕಿತ್ಸೆಗೆ ತಾಲೂಕು ಆಸ್ಪತ್ರೆಯಲ್ಲಿ ಪ್ರಾಥಮಿಕ ಚಿಕಿತ್ಸೆಯನ್ನು ಕೊಡಿಸಿ ಹೆಚ್ಚಿನ ಚಿಕಿತ್ಸೆಗಾಗಿ ಮೈಸೂರಿನ ಕೆ.ಆರ್.ಆಸ್ಪತ್ರೆಗೆ ರವಾನಿಸಲಾಗಿದೆ.
ಸುದ್ದಿ ತಿಳಿಯುತ್ತಿದ್ದಂತೆ ಕೆ.ಆರ್. ಪೇಟೆ ಗ್ರಾಮಾಂತರ ಪೋಲಿಸ್ ಠಾಣೆಯ ಇನ್ಸ್ ಪೆಕ್ಟರ್ ಕೆ.ಎಸ್. ನಿರಂಜನ ಮತ್ತು ಸಿಬ್ಬಂದಿಗಳಾದ. ರೇವಣ್ಣ, ದೊರೆ, ವಿರೂಪಾಕ್ಷ. ನಾಗರಾಜ್ ಮತ್ತು ಪ್ರಶಾಂತ್. ಸ್ಥಳಕ್ಕೆ ದೌಡಾಯಿಸಿ ಸ್ಥಳ ಪರಿಶೀಲನೆ ನಡೆಸಿ ಗಾಯಾಳುಗಳನ್ನು ತಮ್ಮ ವಾಹನದಲ್ಲಿ ಆಸ್ಪತ್ರೆಗೆ ಕೊಂಡೊಯ್ದು ಮಾನವೀಯತೆ ಮೆರೆದಿದ್ದಾರೆ. ಹೆಚ್ಚಿನ ತನಿಖೆಗಾಗಿ ಪ್ರಕರಣ ದಾಖಲಿಸಿಕೊಂಡು ಪ್ರಕರಣ ದಾಖಲಿಸಿಕೊಂಡಿದ್ದು ತನಿಖೆಯನ್ನು ಮುಂದುವರೆಸಿದ್ದಾರೆ.
ವರದಿ.ಡಾ.ಕೆ.ಆರ್.ನೀಲಕoಠ.
ಕೃಷ್ಣರಾಜಪೇಟೆ. ಮಂಡ್ಯ.
More Stories
ತಮಟೆಯ ಸದ್ದಿಗೆ ಲಯಬದ್ದವಾಗಿ ಹೆಜ್ಜೆ ಹಾಕಿ ರಂಗ ಕುಣಿದು ಸಂಭ್ರಮಿಸಿದ ಗ್ರಾಮಸ್ಥರು..
ಇಂಧನ ದಕ್ಷ ಪಂಪ್ ಉಪಕರಣಗಳ ಕುರಿತು ತರಬೇತಿ ಮತ್ತು ಜಾಗೃತಿ ಕಾರ್ಯಕ್ರಮ
ಚುನಾವಣೆ ನಡೆಸಲು ರಾಜಕೀಯ ಪಕ್ಷಗಳು ಹಾಗೂ ಸಾರ್ವಜನಿಕರು ಸಹಕಾರ ನೀಡಬೇಕು ಎಂದು ಚುನಾವಣಾಧಿಕಾರಿ ಚಂದ್ರಯ್ಯ ಮನವಿ