May 2, 2024

Bhavana Tv

Its Your Channel

ಮಳೆಯಿಂದ ಹಾನಿಗೊಳಗಾದ ಕೆ.ಆರ್.ಪೇಟೆ ತಾಲ್ಲೂಕಿನ ಇಪ್ಪತ್ತಕ್ಕೂ ಹೆಚ್ಚಿನ ಗ್ರಾಮಗಳಿಗೆ ಸಚಿವ ಡಾ.ನಾರಾಯಣಗೌಡ ಭೇಟಿ

ಕೆ.ಆರ್.ಪೇಟೆ :-ಭಾರಿ ಬಿರುಗಾಳಿ ಹಾಗೂ ಮಳೆಯಿಂದಾಗಿ ಹಾನಿ ಪೀಡಿತ ಕೆ.ಆರ್.ಪೇಟೆ ತಾಲ್ಲೂಕಿನ ಹೆಮ್ಮಡಹಳ್ಳಿ,ಬಳ್ಳೇಕೆರೆ, ನಾಟನಹಳ್ಳಿ, ಬೂಕಹಳ್ಳಿ, ಗಂಜಿಗೆರೆ, ಬೂಕಹಳ್ಳಿ, ಕುರುಬಳ್ಳಿ ಮುಂತಾದ ಗ್ರಾಮಗಳಿಗೆ ಅಧಿಕಾರಿಗಳ ತಂಡದೊAದಿಗೆ ಭೇಟಿ ಮಾಡಿ ಜನರ ನೋವುಗಳನ್ನು ಆಲಿಸಿ ವಯಕ್ತಿಕ ಪರಿಹಾರ ವಿತರಿಸಿ, ತಾಲೂಕು ಆಡಳಿತದಿಂದ ಹೆಚ್ಚಿನ ಸಹಾಯ ಕೊಡಿಸುವುದಾಗಿ ಸಚಿವ ಡಾ.ನಾರಾಯಣಗೌಡ ತಿಳಿಸಿದರು..

ಭಾರಿ ಬಿರುಗಾಳಿ ಮಳೆಗೆ ನೂರಾರು ತೆಂಗಿನ ಮರಗಳು ನೆಲಕ್ಕುರುಳಿದ್ದರೆ, ಹತ್ತಾರು ಮನೆಯ ಮೇಲ್ಚಾವಣಿಯ ಹಂಚುಗಳು, ಸೂರುಗಳು ಹಾರಿಹೋಗಿವೆ. ಬಿ.ಬಾಚಹಳ್ಳಿಯ ಇಟ್ಟಿಗೆ ಕಾರ್ಖಾನೆಯಲ್ಲಿ ಭಾರಿ ಮಳೆಗೆ ಲಕ್ಷಾಂತರ ರೂಪಾಯಿ ನಷ್ಠ ಸಂಭವಿಸಿದೆ..

ತಹಶೀಲ್ದಾರ್ ಎಂ.ವಿ.ರೂಪ, ತಾಲೂಕು ಪಂಚಾಯತಿ ಇಓ ಸತೀಶ್, ತೋಟಗಾರಿಕೆ ಇಲಾಖೆಯ ಸಹಾಯಕ ನಿರ್ದೇಶಕ ಡಾ.ಶಶಿಧರ್, ಕೃಷಿ ಇಲಾಖೆಯ ಸಹಾಯಕ ನಿರ್ದೇಶಕ ಮಂಜುನಾಥ್, ಮುಖಂಡರಾದ ಬಿ.ಜವರಾಯಿಗೌಡ, ಮೋದೂರು ಮಂಜು, ಸಾರಂಗಿ ಮಂಜುನಾಥಗೌಡ, ಕುರುಬರಬಸ್ತಿ ಕೃಷ್ಣೇಗೌಡ, ಪೂವನಹಳ್ಳಿ ಸ್ವಾಮಿನಾಯಕ, ಸುರೇಶ್, ಗ್ರಾಮಾಂತರ ಪೋಲಿಸ್ ಠಾಣೆಯ ಇನ್ಸ್ ಪೆಕ್ಟರ್ ನಿರಂಜನ ಸೇರಿದಂತೆ ತಾಲೂಕು ಮಟ್ಟದ ಅಧಿಕಾರಿಗಳು ಉಪಸ್ಥಿತರಿದ್ದರು…

ವರದಿ.ಡಾ.ಕೆ.ಆರ್.ನೀಲಕಂಠ .
ಕೃಷ್ಣರಾಜಪೇಟೆ , ಮಂಡ್ಯ

error: