April 27, 2024

Bhavana Tv

Its Your Channel

ಎ.ಎಸ್.ಮೊನಾಲೀಸ ಗೆ ಕೆ.ಆರ್.ಪೇಟೆ ತಾಲ್ಲೂಕು ಪತ್ರಕರ್ತರ ಸಂಘದ ವತಿಯಿಂದ ಸನ್ಮಾನ

ಕೃಷ್ಣರಾಜಪೇಟೆ ತಾಲ್ಲೂಕಿನಲ್ಲಿ ಎಸ್.ಎಸ್.ಎಲ್.ಸಿ ಪರೀಕ್ಷಾ ಫಲಿತಾಂಶದಲ್ಲಿ ಪ್ರಥಮ ಟಾಪರ್ ಆಗಿ ಹೊರಹೊಮ್ಮುವ ಮೂಲಕ ಮೊದಲ ಸ್ಥಾನಗಳಿಸಿ ಇತಿಹಾಸ ನಿರ್ಮಿಸಿದ ಪತ್ರಕರ್ತ ಅಗ್ರಹಾರಬಾಚಹಳ್ಳಿ ಆರ್.ಶ್ರೀನಿವಾಸ್ ಅವರ ಪುತ್ರಿ ಎ.ಎಸ್.ಮೊನಾಲೀಸ ಅವರನ್ನು ಕೆ.ಆರ್.ಪೇಟೆ ತಾಲ್ಲೂಕು ಪತ್ರಕರ್ತರ ಸಂಘದ ವತಿಯಿಂದ ಹೃದಯಸ್ಪರ್ಶಿಯಾಗಿ ಸನ್ಮಾನಿಸಿ ಗೌರವಿಸಲಾಯಿತು..

625 ಅಂಕಗಳಿಗೆ 624 ಪಡೆದು ಕೆ.ಆರ್.ಪೇಟೆ ತಾಲ್ಲೂಕಿನ ಮೊದಲ ಟಾಪರ್ ಆಗಿ ಹೊರಹೊಮ್ಮಿರುವ ಮೊನಾಲಿಸ ಅದ್ಭುತವಾದ ಸಾಧನೆಯನ್ನು ಮಾಡಿದ್ದು ಆಕೆಯ ಮುಂದಿನ ಶೈಕ್ಷಣಿಕ ಜೀವನವು ಇನ್ನೂ ಉತ್ತಮವಾಗಿರಲಿ, ಪಿಯುಸಿ ಪರೀಕ್ಷೆಯಲ್ಲಿಯೂ ಸರ್ವಶ್ರೇಷ್ಠ ಸಾಧನೆ ಮಾಡಿ ತಾಲ್ಲೂಕಿನ ಕೀರ್ತಿಯನ್ನು ಬೆಳಗಲೆಂದು ಶುಭ ಹಾರೈಸಲಾಯಿತು..
ಪತ್ರಕರ್ತ ಹಾಗೂ ಪುರಸಭೆ ಸದಸ್ಯರಾದ ಹೆಚ್.ಆರ್.ಲೋಕೇಶ್, ಪತ್ರಕರ್ತರಾದ ಹೆಚ್.ಬಿ.ಮಂಜುನಾಥ್, ಹೆಚ್.ಬಿ.ರಾಜೇಶ್, ಸೈಯ್ಯದ್ ಖಲೀಲ್, ಕೆಪಿಎಸ್ ಶಾಲೆಯ ಉಪಾಧ್ಯಕ್ಷ ವಾಸುದೇವ ಮತ್ತು ರಾಜ್ಯ ಹಿಂದುಳಿದ ವರ್ಗಗಳ ಮಾನ್ಯತೆ ಪಡೆದ ಸಂಪಾದಕರ ವರದಿಗಾರರ ಸಂಘದ ರಾಜ್ಯಾಧ್ಯಕ್ಷ ಕೆ.ಆರ್.ನೀಲಕಂಠ ಮತ್ತಿತರರು ಉಪಸ್ಥಿತರಿದ್ದರು..

ವರದಿ.ಡಾ.ಕೆ.ಆರ್.ನೀಲಕಂಠ .
ಕೃಷ್ಣರಾಜಪೇಟೆ, ಮಂಡ್ಯ

error: