ನಾಗಮಂಗಲ: ಬಹುಗ್ರಾಮ ಕುಡಿಯುವ ನೀರಿನ ಯೋಜನೆಗೆ ಕಾಮಗಾರಿ ಆದಿಚುಂಚನಗಿರಿ ಜಗದ್ಗುರುಗಳಾದ ಶ್ರೀ ನಿರ್ಮಲಾನಂದನಾಥ ಮಹಾಸ್ವಾಮಿಗಳು ಕಾಮಗಾರಿಗೆ ಗುದ್ದಲಿಪೂಜೆ ಮಾಡುವ ಮುಖಾಂತರಕಾಮಗಾರಿ ಚಾಲನೆ ನೀಡಿದರು .
ಅವರಿಂದು ನಾಗಮಂಗಲ ತಾಲ್ಲೂಕು ಬಿಟ್ಟಗೋನಹಳ್ಳಿಯಲ್ಲಿ ಬಹುಗ್ರಾಮ ಕುಡಿಯುವ ನೀರಿನ ಯೋಜನೆ ಮಾರ್ಕೋನಹಳ್ಳಿ ಜಲಾಶಯದ ಬಳಿ ಜಾಕ್ವೆಲ್ ಅಳವಡಿಸುವ ಕಾಮಗಾರಿಗೆ ಗುದ್ದಲಿ ಪೂಜೆಯನ್ನು ಶ್ರೀ ಶ್ರೀ ಶ್ರೀ ನಿರ್ಮಾಲಾನಂದನಾಥ ನೆರವೇರಿಸಿದರು.
ಒಂದೇ ಮನೆಯ ಮಕ್ಕಳು ಇಬ್ಬಗೆಯ ನೀತಿ ಯಾಗದೆ ಸೌಹಾರ್ದಯುತವಾಗಿ ನಾಗಮಂಗಲ ಹಾಗೂ ಕುಣಿಗಲ್ ತಾಲೂಕುಗಳಿಗೆ ಕುಡಿಯುವ ನೀರಿನ ಸಮಸ್ಯೆಗೆ ರೈತರು ಮತ್ತು ಭಕ್ತರ ಅನುಕೂಲವಾಗುವ ರೀತಿಯಲ್ಲಿ ಯೋಜನೆ ಜಾರಿಗೆ ಬಂದಿರುವುದು ಸಂತೋಷದಾಯಕವಾಗಿದೆ ಇದರ ಕನಸು ಭೈರವೈಕ್ಯ ಶ್ರೀ ಬಾಲಗಂಗಾಧರನಾಥ ಮಹಾಸ್ವಾಮಿಗಳ ಕನಸು ಸುಮಾರು ೨೩ ವರ್ಷಗಳ ನಂತರ ನನಸಗಿರುವುದು ಸಂತೋಷದಾಯಕವಾಗಿದೆ ಎಂದು ತಿಳಿಸಿದರು.
ನೀರಿಗಾಗಿ ಯಾವುದೇ ಸಮಸ್ಯೆ ಬಾರದು ಸಾಮರಸ್ಯವಾಗಿ ಬಗೆಹರಿಸಿ ಇಂತಹ ಯೋಜನೆ ಜಾರಿಗೆ ಬಂದಿರುವುದು ಹಾಗೂ ಮುಂದೆಯೂ ನೀರಾವರಿ ಸಂಬAಧಪಟ್ಟ ಯೋಜನೆಗಳನ್ನು ಜಾರಿಗೆ ತಂದು ಕಾಪಾಡಿಕೊಂಡು ಶುಭ ಹಾರೈಸಿದರು
ಇದೇ ಸಂದರ್ಭದಲ್ಲಿ ಸಂಸದ ಡಿಕೆ ಸುರೇಶ್ ಮಂಡ್ಯ ಜಿಲ್ಲಾ ಉಸ್ತುವಾರಿ ಸಚಿವರಾದ ನಾರಾಯಣಗೌಡ ಶಾಸಕರುಗಳಾದ ಸುರೇಶ್ ಗೌಡ ರಂಗನಾಥ್ ಹಾಗೂ ವಿಧಾನಪರಿಷತ್ ಸದಸ್ಯರಾದ ಅಪ್ಪಾಜಿಗೌಡ ಉಪಸ್ಥಿತರಿದ್ದರು
ವರದಿ: ದೇವಲಾಪುರ ಜಗದೀಶ್ ನಾಗಮಂಗಲ
More Stories
ಫೈಟರ್ ರವಿ ಸಾರಥ್ಯದಲ್ಲಿ ಹನುಮ ಮಾಲಾಧಾರಿಗಳು ಯಾತ್ರೆ
ಕಾಂತಾಪುರ ಗ್ರಾಮ ಪಂಚಾಯತಿಗೆ ನೂತನ ಅಧ್ಯಕ್ಷರಾಗಿ ಸಿ.ಕೆ.ರಮೇಶ್ ಕುಮಾರ ಆಯ್ಕೆ
ನಾಗಮಂಗಲದಲ್ಲಿ 75 ನೇ ವರ್ಷದ ಸ್ವಾತಂತ್ರೋತ್ಸವದ ಅಂಗವಾಗಿ ಚೆಲುವರಾಯಸ್ವಾಮಿ ಸಾರಥ್ಯದಲ್ಲಿ ಪಾದಯಾತ್ರೆ