May 3, 2024

Bhavana Tv

Its Your Channel

ಬಹುಗ್ರಾಮ ಕುಡಿಯುವ ನೀರಿನ ಯೋಜನೆಯ ಕಾಮಗಾರಿಗೆ ಗುದ್ದಲಿಪೂಜೆ ನೆರೆವೇರಿಸಿದ ಶ್ರೀ ನಿರ್ಮಲಾನಂದನಾಥ ಮಹಾಸ್ವಾಮಿ

ನಾಗಮಂಗಲ: ಬಹುಗ್ರಾಮ ಕುಡಿಯುವ ನೀರಿನ ಯೋಜನೆಗೆ ಕಾಮಗಾರಿ ಆದಿಚುಂಚನಗಿರಿ ಜಗದ್ಗುರುಗಳಾದ ಶ್ರೀ ನಿರ್ಮಲಾನಂದನಾಥ ಮಹಾಸ್ವಾಮಿಗಳು ಕಾಮಗಾರಿಗೆ ಗುದ್ದಲಿಪೂಜೆ ಮಾಡುವ ಮುಖಾಂತರಕಾಮಗಾರಿ ಚಾಲನೆ ನೀಡಿದರು .

ಅವರಿಂದು ನಾಗಮಂಗಲ ತಾಲ್ಲೂಕು ಬಿಟ್ಟಗೋನಹಳ್ಳಿಯಲ್ಲಿ ಬಹುಗ್ರಾಮ ಕುಡಿಯುವ ನೀರಿನ ಯೋಜನೆ ಮಾರ್ಕೋನಹಳ್ಳಿ ಜಲಾಶಯದ ಬಳಿ ಜಾಕ್ವೆಲ್ ಅಳವಡಿಸುವ ಕಾಮಗಾರಿಗೆ ಗುದ್ದಲಿ ಪೂಜೆಯನ್ನು ಶ್ರೀ ಶ್ರೀ ಶ್ರೀ ನಿರ್ಮಾಲಾನಂದನಾಥ ನೆರವೇರಿಸಿದರು.

ಒಂದೇ ಮನೆಯ ಮಕ್ಕಳು ಇಬ್ಬಗೆಯ ನೀತಿ ಯಾಗದೆ ಸೌಹಾರ್ದಯುತವಾಗಿ ನಾಗಮಂಗಲ ಹಾಗೂ ಕುಣಿಗಲ್ ತಾಲೂಕುಗಳಿಗೆ ಕುಡಿಯುವ ನೀರಿನ ಸಮಸ್ಯೆಗೆ ರೈತರು ಮತ್ತು ಭಕ್ತರ ಅನುಕೂಲವಾಗುವ ರೀತಿಯಲ್ಲಿ ಯೋಜನೆ ಜಾರಿಗೆ ಬಂದಿರುವುದು ಸಂತೋಷದಾಯಕವಾಗಿದೆ ಇದರ ಕನಸು ಭೈರವೈಕ್ಯ ಶ್ರೀ ಬಾಲಗಂಗಾಧರನಾಥ ಮಹಾಸ್ವಾಮಿಗಳ ಕನಸು ಸುಮಾರು ೨೩ ವರ್ಷಗಳ ನಂತರ ನನಸಗಿರುವುದು ಸಂತೋಷದಾಯಕವಾಗಿದೆ ಎಂದು ತಿಳಿಸಿದರು.

ನೀರಿಗಾಗಿ ಯಾವುದೇ ಸಮಸ್ಯೆ ಬಾರದು ಸಾಮರಸ್ಯವಾಗಿ ಬಗೆಹರಿಸಿ ಇಂತಹ ಯೋಜನೆ ಜಾರಿಗೆ ಬಂದಿರುವುದು ಹಾಗೂ ಮುಂದೆಯೂ ನೀರಾವರಿ ಸಂಬAಧಪಟ್ಟ ಯೋಜನೆಗಳನ್ನು ಜಾರಿಗೆ ತಂದು ಕಾಪಾಡಿಕೊಂಡು ಶುಭ ಹಾರೈಸಿದರು

ಇದೇ ಸಂದರ್ಭದಲ್ಲಿ ಸಂಸದ ಡಿಕೆ ಸುರೇಶ್ ಮಂಡ್ಯ ಜಿಲ್ಲಾ ಉಸ್ತುವಾರಿ ಸಚಿವರಾದ ನಾರಾಯಣಗೌಡ ಶಾಸಕರುಗಳಾದ ಸುರೇಶ್ ಗೌಡ ರಂಗನಾಥ್ ಹಾಗೂ ವಿಧಾನಪರಿಷತ್ ಸದಸ್ಯರಾದ ಅಪ್ಪಾಜಿಗೌಡ ಉಪಸ್ಥಿತರಿದ್ದರು

ರದಿ: ದೇವಲಾಪುರ ಜಗದೀಶ್ ನಾಗಮಂಗಲ

error: