May 3, 2024

Bhavana Tv

Its Your Channel

ಕೋವಿಡ್ ಲಸಿಕಾ ಕೇಂದ್ರಕ್ಕೆ ಜಿಲ್ಲಾಧಿಕಾರಿ ಅಶ್ವಥಿ ಭೇಟಿ

ವರದಿ: ಚಂದ್ರಮೌಳಿ ನಾಗಮಂಗಲ

ನಾಗಮoಗಲ ತಾಲೂಕಿನ ಬೋಗಾದಿ .ಕಾಂತಾಪುರ. ಬ್ರಹ್ಮದೇವರಹಳ್ಳಿ .ಪ್ರಾಥಮಿಕ ಆರೋಗ್ಯ ಕೇಂದ್ರಗಳಿಗೆ ಮಂಡ್ಯ ಜಿಲ್ಲಾಧಿಕಾರಿ ಅಶ್ವಥಿರವರು ಭೇಟಿ ನೀಡಿ ಲಸಿಕಾ ಕೇಂದ್ರದಲ್ಲಿ ಕುಂದು ಕೊರತೆಗಳನ್ನು ವಿಚಾರಿಸಿ ನಾಗಮಂಗಲ ತಾಲೂಕಿನ ವ್ಯಾಪ್ತಿಯಲ್ಲಿ ಕೋವಿಡ್ ಲಸಿಕೆ ಅಭಿಯಾನ ತುಂಬಾ ಚೆನ್ನಾಗಿ ನಡೆಯುತ್ತಿದೆ ಎಂದು ಅಧಿಕಾರಿ ವರ್ಗದವರಿಗೆ ಮೆಚ್ಚುಗೆ ವ್ಯಕ್ತಪಡಿಸಿದರು

ಇದೇ ಸಂದರ್ಭದಲ್ಲಿ ಮಾತನಾಡಿದ ಜಿಲ್ಲಾಧಿಕಾರಿ ಅಶ್ವಥಿ ರವರು ಮಂಡ್ಯ ಜಿಲ್ಲೆಯ ವ್ಯಾಪ್ತಿಗೆ ಈ ದಿನ ಎಪತ್ತು ಸಾವಿರ ಕೋವಿಡ್ ಲಸಿಕೆ ಬಂದಿದ್ದು ಮಂಡ್ಯ ಜಿಲ್ಲೆಯ ತಾಲೂಕಿನ ಎಲ್ಲಾ ವ್ಯಾಪ್ತಿಗೂ ವಿತರಣೆ ಮಾಡಲಾಗಿದೆ ನಾಳೆಗೂ ಕೂಡ ಲಸಿಕೆ ನೀಡಲು ನಲವತ್ತು ಸಾವಿರ ಡೋಸ್ ಗಳು ಬಂದಿರುತ್ತವೆ ಪ್ರತಿಯೊಬ್ಬ ನಾಗರಿಕನು ಕೂಡ ಕೋವಿಡ್ ಲಸಿಕೆ ಪಡೆದು ಆರೋಗ್ಯವಂತರಾಗಿರಬೇಕು ಜಿಲ್ಲಾಡಳಿತದ ಆಶಯವಾಗಿದೆ ಎಂದರು

ಇದೇ ಸಂದರ್ಭದಲ್ಲಿ ಜಿಲ್ಲಾಧಿಕಾರಿಗಳ ಜೊತೆಗೂಡಿ ತಾಲೂಕು ದಂಡಾಧಿಕಾರಿ ಕುಂಜಿ ಅಹಮದ್ ತಾಲೂಕು ಆರೋಗ್ಯ ಅಧಿಕಾರಿ ಪ್ರಸನ್ನ ಹಾಗೂ ರಮೇಶ್ ಅಧಿಕಾರಿಗಳಿಂದ ಹಾಜರಿದ್ದರು

error: