ವರದಿ: ಚಂದ್ರಮೌಳಿ ನಾಗಮಂಗಲ
ನಾಗಮಂಗಲ:ಜಿ.ಟಿ. ದೇವೇಗೌಡ ಅಥವಾ ಮಧು ಬಂಗಾರಪ್ಪ ಮಾತ್ರವಲ್ಲ, ಅಧಿಕಾರ ಅನುಭವಿಸಿ ಪಕ್ಷ ತೊರೆಯೋದು ನಮ್ಮ ಜೆಡಿಎಸ್ ಗೆ ಸಾಮಾನ್ಯ ಎಂದು ಮಾಜಿ ಸಂಸದ ಎಲ್.ಆರ್.ಶಿವರಾಮೇಗೌಡ ತಿಳಿಸಿದರು. ಮಂಡ್ಯ ಜಿಲ್ಲೆ, ನಾಗಮಂಗಲ ಪಟ್ಟಣದ ಪ್ರೆಸ್ ಕ್ಲಬ್ ಕಚೇರಿಯಲ್ಲಿ ಕರೆಯಲಾಗಿದ್ದ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು,
ಈ ಹಿಂದೆ ಚಲುವರಾಯಸ್ವಾಮಿ ಸೇರಿದಂತೆ ೭ ಜನ ಶಾಸಕರು ಹೊರಕ್ಕೆ ಹೋದರೂ ಪಕ್ಷ ಬಲಿಷ್ಟವಾಗಿದೆ. ಈಗ ಅವರ ಸ್ಥಿತಿ ಏನಾಗಿದೆ. ಮುಂಬರುವ ಸಾರ್ವತ್ರಿಕ ಚುನಾವಣೆಯಲ್ಲಿ ನಮ್ಮ ಪಕ್ಷ ಅಧಿಕಾರಕ್ಕೆ ಬರಲಿದೆ. ಕಾರ್ಯಕರ್ತರೆ ನಮ್ಮ ಪಕ್ಷದ ಆಧಾರ ಸ್ಥಂಭ ಎಂದರು.
ಸುದ್ದಿಗಾರರ ಪ್ರಶ್ನೆಗಳಿಗೆ ಉತ್ತರಿಸಿದ ಶಿವರಾಮೇಗೌಡರು, ಮಂಡ್ಯ ಜಿ.ಪಂ.ನಮ್ಮದೆ, ಜಿಲ್ಲೆಯ ಎಲ್ಲಾ ತಾ.ಪಂ.ಗಳು ನಮ್ಮವೇ.ಜಿಲ್ಲೆಯಲ್ಲಿ ಮಾತ್ರವಲ್ಲದೆ ತಾಲೂಕಿನಲ್ಲೂ ಕಾಂಗ್ರೆಸ್ ಪಕ್ಷ ಸಂಪೂರ್ಣವಾಗಿ ನೆಲಕಚ್ಚಿದೆ. ವೀಕ್ ವೀಲ್ ನಂತಾಗಿದೆ ಎಂದುರು.
More Stories
ಫೈಟರ್ ರವಿ ಸಾರಥ್ಯದಲ್ಲಿ ಹನುಮ ಮಾಲಾಧಾರಿಗಳು ಯಾತ್ರೆ
ಕಾಂತಾಪುರ ಗ್ರಾಮ ಪಂಚಾಯತಿಗೆ ನೂತನ ಅಧ್ಯಕ್ಷರಾಗಿ ಸಿ.ಕೆ.ರಮೇಶ್ ಕುಮಾರ ಆಯ್ಕೆ
ನಾಗಮಂಗಲದಲ್ಲಿ 75 ನೇ ವರ್ಷದ ಸ್ವಾತಂತ್ರೋತ್ಸವದ ಅಂಗವಾಗಿ ಚೆಲುವರಾಯಸ್ವಾಮಿ ಸಾರಥ್ಯದಲ್ಲಿ ಪಾದಯಾತ್ರೆ