May 3, 2024

Bhavana Tv

Its Your Channel

ಬಡವರ ಭೂಮಿ ಮಂಜೂರು ದರಖಾಸ್ತ ಕಮಿಟಿ ಒಂದು ದೊಡ್ಡ ದಂಧೆಯಾಗಿದೆ- ಮಾಜಿ ಸಚಿವ ಚಲುವರಾಯಸ್ವಾಮಿ

ವರದಿ:ಚಂದ್ರಮೌಳಿ ನಾಗಮಂಗಲ

ನಾಗಮoಗಲ: ನಾಗಮಂಗಲ ತಾಲೂಕಿನ ವ್ಯಾಪ್ತಿಯಲ್ಲಿ ಬಡವರು ಪ್ರಸ್ತುತ ಉಳಿಮೆ ಮಾಡುತ್ತಿರುವ ಜಮೀನಿನಲ್ಲಿ ಈಗಾಗಲೇ ಫಾರ್ಮ್ ೫೩ ಮತ್ತು ೫೭ ನಲ್ಲಿ ಅರ್ಜಿ ಸಲ್ಲಿಸಿ ಕೊಂಡಿದ್ದಾರೆ ಅಧಿಕಾರಿಗಳು ಹಣಕ್ಕಾಗಿ ಬೇಡಿಕೆ ಇಟ್ಟು ಇಲ್ಲಸಲ್ಲದ ನೆಪವೊಡ್ಡಿ ಉಳ್ಳವರಿಗೆ ಜಮೀನನ್ನು ನೀಡುತ್ತಿದ್ದು ಪ್ರಸ್ತುತ ಉಳುಮೆ ಮಾಡುತ್ತಿರುವ ರೈತರಿಗೆ ಹಣಕ್ಕಾಗಿ ಪೀಡಿಸುತ್ತಿದ್ದಾರೆ
ನಾಗಮಂಗಲದಲ್ಲಿ ದರಖಾಸ್ತ ಕಮಿಟಿ ಒಂದು ದೊಡ್ಡ ಹಣದ ದಂಧೆಯಾಗಿ ಮಾರ್ಪಟ್ಟಿದೆ ಈ ಪ್ರಕರಣ ಸಂಬoಧಿಸಿದoತೆ ಅಧಿಕಾರಿಗಳ ವಿರುದ್ಧ ಉಪವಿಭಾಗಾಧಿಕಾರಿಗಳು ಮತ್ತು ಜಿಲ್ಲಾಧಿಕಾರಿಗಳು ತಕ್ಷಣ ಕ್ರಮ ವಹಿಸಿಬೇಕು ಒತ್ತಾಯಿಸಿದರು

ಜೆ.ಡಿ.ಎಸ್. ನ ಹಿರಿಯ ನಾಯಕ ಜಿ.ಟಿ .ದೇವೇಗೌಡ ರವರು ಕಾಂಗ್ರೆಸ್ಸ್ ಪಕ್ಷ ಸೇರುತ್ತಿರುವ ಬಗ್ಗೆ ಮಾತನಾಡುತ್ತಾ ಪಕ್ಷದ ವರಿಷ್ಠರಾದ ಡಿ.ಕೆ. ಶಿವಕುಮಾರ್ ಮತ್ತು ಸಿದ್ದರಾಮಯ್ಯನವರ ಜೊತೆ ಚರ್ಚಿಸಿ ಕಾಂಗ್ರೆಸ್ ಪಕ್ಷ ಸೇರುತ್ತಿದ್ದೇನೆ ಎಂದು ಹಿರಿಯ ನಾಯಕರಾದ ಜಿ.ಟಿ .ದೇವೇಗೌಡರು ತಿಳಿಸಿದ್ದಾರೆ ಅವರು ಕಾಂಗ್ರೆಸ್ ಪಕ್ಷಕ್ಕೆ ಬಂದರೆ ಸ್ವಾಗತ ಬಯಸುತ್ತೇನೆ ಎಂದರು

ಮೈಸೂರಿನ ಎಂ.ಬಿ.ಎ. ವಿದ್ಯಾರ್ಥಿ ಅತ್ಯಾಚಾರ ಪ್ರಕರಣದಲ್ಲಿ ಸಂತಸ್ತರ ಪರ ಧ್ವನಿ ಎತ್ತಿದ್ದಕ್ಕೆ ಕಾಂಗ್ರೆಸ್ ನನ್ನ ಮೇಲೆ ರೇಪ್ ಮಾಡುತ್ತಿದೆ ಎಂದು ಗೃಹಸಚಿವ ಅರಗ ಜ್ಞಾನೆಂದ್ರ ಹೇಳಿಕೆಯನ್ನು ಮಾಜಿ ಸಚಿವ ಎನ್.ಚಲುವರಾಯಸ್ವಾಮಿ ತೀವ್ರವಾಗಿ ಖಂಡಿಸಿದ್ದಾರೆ. ಕನ್ನಡಿಗರು ತಲೆತಗ್ಗಿಸಬೇಕಾದ ವಿಚಾರ ಸರಕಾರದ ವೈಫಲ್ಯ ಎದ್ದು ಕಾಣುತ್ತಿದೆ ಗೃಹ ಸಚಿವರ ಬೇಜವಾಬ್ದಾರಿ ಹೇಳಿಕೆ ೬ ಕೋಟಿ ಕರ್ನಾಟಕದ ಜನತೆಯ ಖಂಡಿಸುತ್ತಾರೆ ಇದು ಕಾಂಗ್ರೆಸ್ ಪಕ್ಷದ ಹೇಳಿಕೆಯಲ್ಲ ಸಮಸ್ತ ಕನ್ನಡಿಗರ ಧ್ವನಿ ಎಂದರು

error: