ನಾಗಮoಗಲ: ರಾಜಕಾರಣಕ್ಕೆ ಬಂದವರು ಬಿಳಿ ಬಟ್ಟೆ ತೊಟ್ಟು ಜನರ ಮುಂದೆ ಠಾಕು ಠೀಕಾಗಿ ಫೋಜು ಕೊಡುವವರ ಮಧ್ಯೆ ನಾಗಮಂಗಲ ತಾಲ್ಲೂಕಿನ ಗ್ರಾಮ ಪಂಚಾಯತ ಸದಸ್ಯನೋರ್ವ ತಾನೆ ಖುದ್ದು ಗಿಡಗಂಟೆಗಳನ್ನ ಕಿತ್ತು ಚರಂಡಿ ಬಾಚುವ ಮೂಲಕ ಜನರ ಆಯ್ಕೆಗೆ ಮಾದರಿಯಾಗಿದ್ದಾನೆ.
ನಾಗಮಂಗಲ ತಾಲ್ಲೂಕಿನ ಬೋಗಾದಿ ಗ್ರಾಮ ಪಂಚಾಯಿತಿ ವ್ಯಾಪ್ತಿಯ ಬೊಮ್ಮನಾಯಕನಹಳ್ಳಿ ಕ್ಷೇತ್ರದ ಗ್ರಾಮ ಪಂಚಾಯಿತಿ ಸದಸ್ಯ ಸಂಪತ್ತು ಎಂಬುವರೆ ಚರಂಡಿ ಸ್ವಚ್ಚಗೊಳಿಸಿ ಜನಪ್ರತಿನಿಧಿಗಳ ಜನಪರ ಕರ್ತವ್ಯ ಮೆರೆದವರಾಗಿದ್ದಾರೆ.
ಈತ ತಾನು ಪಂಚಾಯತ ಸದಸ್ಯ ಎಂಬ ಹಮ್ಮು ಇಲ್ಲದೆ ಯಾವೊಬ್ಬ ಕಾರ್ಮಿಕರನನ್ನು. ಕರೆಯದೆ ತಾನೆ ಪೌರಕಾರ್ಮಿಕನಂತೆ ಗುದ್ದಲಿ ಹಿಡಿದ ಗ್ರಾಮ ಪಂಚಾಯ್ತಿ ಸದಸ್ಯ ಸಂಪತ್ತು ಕಟ್ಟಿಕೊಂಡಿದ್ದ ಚರಂಡಿ, ಬೆಳೆದು ನಿಂತ ಗಿಡಗಂಟೆ ಕಿತ್ತು ಜನರ ಗಮನ ಸೆಳೆದಿದ್ದಾರೆ.
ಸಂಪತ್ತುರವರ ಘನಕಾರ್ಯವನ್ನ ಆತನ ಸ್ನೇಹಿತರು ಸೆರೆಹಿಡಿದು ಸಾಮಾಜಿಕ ಜಾಲತಾಣಗಳಿಗೆ ಹರಿಯಬಿಟ್ಟಿದ್ದು ಸಾರ್ವಜನಿಕ ಪ್ರಶಂಸೆಗಳು ವ್ಯಕ್ತವಾಗಿವೆ.
ವರದಿ: ಚಂದ್ರಮೌಳಿ ನಾಗಮಂಗಲ
More Stories
ಫೈಟರ್ ರವಿ ಸಾರಥ್ಯದಲ್ಲಿ ಹನುಮ ಮಾಲಾಧಾರಿಗಳು ಯಾತ್ರೆ
ಕಾಂತಾಪುರ ಗ್ರಾಮ ಪಂಚಾಯತಿಗೆ ನೂತನ ಅಧ್ಯಕ್ಷರಾಗಿ ಸಿ.ಕೆ.ರಮೇಶ್ ಕುಮಾರ ಆಯ್ಕೆ
ನಾಗಮಂಗಲದಲ್ಲಿ 75 ನೇ ವರ್ಷದ ಸ್ವಾತಂತ್ರೋತ್ಸವದ ಅಂಗವಾಗಿ ಚೆಲುವರಾಯಸ್ವಾಮಿ ಸಾರಥ್ಯದಲ್ಲಿ ಪಾದಯಾತ್ರೆ