April 26, 2024

Bhavana Tv

Its Your Channel

ರಾಜ್ಯದಲ್ಲಿ ಕಾಂಗ್ರೆಸ್ ಪರ್ವ ಆರಂಭ ಮತದಾರರ ಒಲವು ಕಾಂಗ್ರೆಸ್ ನತ್ತ-ಚೆಲುವರಾಯಸ್ವಾಮಿ

ನಾಗಮಂಗಲ: ಈ ಬಾರಿ ಕಾಂಗ್ರೆಸ್ ಪಕ್ಷಕ್ಕೆ ಮತದಾನದ ಒಲವು ಇರುವುದರಿಂದ ಎಲ್ಲರೂ ಕಾಂಗ್ರೆಸ್ ಪಕ್ಷಕ್ಕೆ ಅಧಿಕಾರ ನೀಡಿ ರಾಜ್ಯದಲ್ಲಿದೆ ಕಾಂಗ್ರೆಸ್ ಪರ್ವ ಆರಂಭವಾಗಿದ್ದು ಎಲ್ಲರೂ ಸಹಕರಿಸಬೇಕೆಂದು ಮಾಜಿ ಸಚಿವರಾದ ಚಲುವರಾಯಸ್ವಾಮಿ ಅವರು ಕರೆ ನೀಡಿದರು.

ಅವರಿಂದು ನಾಗಮಂಗಲ ಗಂಗಾಧರೇಶ್ವರ ಕಲ್ಯಾಣ ಮಂಟಪದ ಆವರಣದಲ್ಲಿ ಆಯೋಜಿಸಿದ್ದ ಸ್ಥಳೀಯ ಸಂಸ್ಥೆಗಳ ಚುನಾಯಿತ ಪ್ರತಿನಿಧಿಗಳು ಕಾಂಗ್ರೆಸ್ ಕಾರ್ಯಕರ್ತರ ಸಭೆ ಉದ್ಘಾಟಿಸಿ ಮಾತನಾಡಿದರು
ರಾಜ್ಯದಲ್ಲಿ ಈಗಾಗಲೇ ಆಡಳಿತ ಪಕ್ಷದ ವಿರುದ್ಧ ಭುಗಿಲೆದ್ದಿರುವ ಜನತೆ ಮುಂದಿನ ಚುನಾವಣೆಗೆ ಜನತೆ ತೀರ್ಮಾನಿಸಿದ್ದು ಕಾಂಗ್ರೆಸ್ ಪರ್ವ ಆರಂಭಗೊAಡಿದ್ದು ಇದರ ವಿಜಯಕ್ಕೆ ವಿಧಾನಪರಿಷತ್ ಚುನಾವಣೆಯಲ್ಲಿ ಕಾಂಗ್ರೆಸ್ ಪಕ್ಷ ಅಧಿಕಾರಕ್ಕೆ ತರಲು ಮತದಾರರ ಒಲವು ಎಲ್ಲೆಡೆ ಇರುವುದರಿಂದ ನಮ್ಮ ಪಕ್ಷದ ಒಮ್ಮತದ ಅಭ್ಯರ್ಥಿಯಾದ ದಿನೇಶ್ ಗೂಳಿಗೌಡರ ಗೆಲುವಿಗೆ ಚುನಾಯಿತ ಪ್ರತಿನಿಧಿಗಳು ಕಾರ್ಯಕರ್ತರು ಪಕ್ಷವನ್ನು ಅಧಿಕಾರಕ್ಕೆ ತರಲು ಎಲ್ಲರೂ ಶ್ರಮಿಸಬೇಕೆಂದು ನೀಡಬೇಕೆಂದು ತಿಳಿಸಿದರು.

ರಾಜಕಾರಣದ ವ್ಯವಸ್ಥೆಯ ದಿಕ್ಸೂಚಿಯಲ್ಲಿ ಅಲ್ಪಸ್ವಲ್ಪ ಬದಲಾವಣೆಯಾದರೂ ಸ್ವಾಭಿಮಾನ ವಿಷಯ ಬಂದಾಗ ರಾಜ್ಯದಲ್ಲಿ ಮಂಡ್ಯ ಜಿಲ್ಲೆ ಪ್ರಥಮವಾಗಿದ್ದು ಎಂಬುದನ್ನು ಯಾರೂ ಮರೆಯುವಂತಿಲ್ಲ ನನ್ನ ಅಧಿಕಾರವಧಿಯಲ್ಲಿ ತಾಲೂಕಿಗೆ ಆಗಬೇಕಾಗಿರುವ ಕೆಲಸಗಳು ನಿಮ್ಮ ಕಣ್ಮುಂದೆ ಇದ್ದು ಪದೇ ಪದೇ ಹೇಳುವ ಅವಶ್ಯಕತೆಇಲ್ಲ ಮುಂದೆಯೂ ತಾಲೂಕಿಗೆ ಹೆಚ್ಚು ಕೆಲಸ ಮಾಡುವ ಅವಕಾಶ ಕಲ್ಪಿಸಲು ರಾಜಕಾರಣದಲ್ಲಿ ಏರುಪೇರು ಆದರೂ ನಿಮ್ಮ ಸೇವೆ ಮಾಡಲು ಹಾಗೂ ಜಿಲ್ಲೆ ಹಾಗೂ ತಾಲೂಕಿಗೆ ಪ್ರಾಮಾಣಿಕವಾಗಿ ಸೇವೆ ಮಾಡಲು ನಮ್ಮ ಅಭ್ಯರ್ಥಿಗೆ ಒಟ್ಟಾಗಿ ದುಡಿಯಬೇಕೆಂದು ತಿಳಿಸಿದರು .

ಪಕ್ಷದ ಹಣತೆಯಂತೆ ತಮ್ಮ ಗಳೆಲ್ಲ ಆಶೀರ್ವಾದದೊಂದಿಗೆ ನಿಮ್ಮಗಳ ಅಭ್ಯರ್ಥಿಯಾಗಿ ಕಾಂಗ್ರೆಸ್ ಪಕ್ಷದ ಅಭ್ಯರ್ಥಿಯಾಗಿ ಸ್ಪರ್ಧಿಸಿದ್ದು ತಮ್ಮಗಳ ಸೇವೆ ಮಾಡಲು ಜಿಲ್ಲಾ ನಾಯಕರು ಹಾಗೂ ನಿಮ್ಮಗಳ ಬೆಂಬಲದೊAದಿಗೆ ಮತ ನೀಡುವಂತೆ ಪಕ್ಷದ ಅಭ್ಯರ್ಥಿಯಾದ ದಿನೇಶ್ ಗೂಳಿ ಗೌಡರವರು ಮನವಿ ಮಾಡಿದರು.

ಇದೇ ವೇಳೆ ಮಾಜಿ ಮಂತ್ರಿಗಳಾದ ನರೇಂದ್ರಸ್ವಾಮಿ ಎಂ.ಎಸ್. ಆತ್ಮಾನಂದ ಮಾಜಿ ಶಾಸಕರಾದ ಕೆ.ಬಿ.ಚಂದ್ರಶೇಖರ್ ವಿಧಾನ ಪರಿಷತ್ ಮಾಜಿ ಸದಸ್ಯ ರಾಮಕೃಷ್ಣ . ಜಿಲ್ಲಾ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷರಾದ ಗಂಗಾಧರ್ ಅವರುಗಳು ಮಾತನಾಡಿದರು

ಮಾಜಿ ಜಿಲ್ಲಾ ಪಂಚಾಯತ್ ಸದಸ್ಯರಾದ ಹುಚ್ಚೇಗೌಡ ಮಾಜಿ ತಾಲೂಕು ಪಂಚಾಯಿತಿ ಸದಸ್ಯ ರಾಜೇಶ್ .ಕೃಷ್ಣೇಗೌಡ. ರಾಜೇಗೌಡ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಪ್ರಸನ್ನ ಹನುಮಂತ ಪಕ್ಷದ ಮುಖಂಡರುಗಳು ಉಪಸ್ಥಿತರಿದ್ದರು.

ವರದಿ: ದೇವಲಾಪುರ ಜಗದೀಶ ನಾಗಮಂಗಲ

error: