May 3, 2024

Bhavana Tv

Its Your Channel

ಎವಿಎಸ್ಎಸ್ ಶಾಖೆಯ ವಾರ್ಷಿಕ ಮಹಾಸಭೆ

ನಾಗಮಂಗಲ: ಅಂಬೇಡ್ಕರ್ ವಿವಿಧೋದ್ದೇಶ ಸಹಕಾರ ಸಂಘದಲ್ಲಿ ನೀಡಲಾಗುವ ಸೌಲ ಸೌಲಭ್ಯಗಳನ್ನು ಸದುಪಯೋಗ ಪಡಿಸಿಕೊಂಡು ಗೌತಮ ಬುದ್ಧರ ಸಿದ್ದಾಂತ ಪಾಲನೆಯೊಂದಿಗೆ ಆರ್ಥಿಕವಾಗಿ ಸಬಲರಾಗುವಂತೆ ಧಮ್ಮವೀರ್ ಭಂತೇಜಿ ಕರೆ ನೀಡಿದ್ದಾರೆ.

ನಾಗಮಂಗಲ ಎವಿಎಸ್‌ಎಸ್ ಶಾಖೆಯ ವಾರ್ಷಿಕ ಮಹಾಸಭೆಯಲ್ಲಿ ಪಾಲ್ಗೊಂಡು ಧಮ್ಮವೀರ್ ಭಂತೇಜಿ ವಂದನೆ ಸಲ್ಲಿಸಿ ಅವರು ಮಾತನಾಡಿದರು. ಎವಿಎಸ್‌ಎಸ್ ಬ್ಯಾಂಕ್ ರಾಜ್ಯಾದ್ಯಂತ ಶಾಖೆಗಳನ್ನು ಹೊಂದಿದ್ದು ಒಬ್ಬರು ಮತ್ತಿಬ್ಬರು ಷೇರುದಾರರನ್ನಾಗಿ ಮಾಡುವ ಮೂಲಕ ಆರ್ಥಿಕ ಪ್ರಗತಿಗೆ ಕೈಜೋಡಿಸುವಂತೆ ಕರೆ ನೀಡಿದರು.

ನಾಗಮಂಗಲ ಎವಿಎಸ್ ಎಸ್ ಬ್ಯಾಂಕ್ ಶಾಖೆಯ ಕಾರ್ಯದರ್ಶಿ ಕೆಹೆಚ್ ಮಹದೇವ್ ಮಾತನಾಡಿ ಈಗಾಗಲೆ ೧೨ ಲಕ್ಷದ ೧೬ ಸಾವಿರ ವೈಯುಕ್ತಿಕ ಸಾಲನೀಡಿದ್ದು, ೪ ಲಕ್ಷದ ೯೬ ಸಾವಿರ ಒಟ್ಟು ಷೇರು ಧನ ಸಂಗ್ರಹಿಸಲಾಗಿದೆ ಎಂದು ಬ್ಯಾಂಕ್ ವಾರ್ಷಿಕ ವರದಿ ಮಂಡಿಸಿದರು.
ಸಭೆಯಲ್ಲಿ ಗ್ರಾಮಪಂಚಾಯ್ತಿ ಸದಸ್ಯ ಪುಟ್ಟರಾಜು, ಬಿಎಂ ರಾಣಿ, ಮುಖಂಡರಾದ ಕೋಡಿಹಳ್ಳಿ ರಾಮಮೂರ್ತಿ, ಮುಳಕಟ್ಟೆ ಚಂದ್ರು, ಇತರರು ಇದ್ದರು.

ವರದಿ: ಚಂದ್ರಮೌಳಿ ನಾಗಮಂಗಲ

error: