May 3, 2024

Bhavana Tv

Its Your Channel

ನಾಗಮಂಗಲ ಪುರಸಭೆಗೆ ಲೋಕಾಯುಕ್ತರ ದಾಳಿ

ನಾಗಮಂಗಲ:– ಉದ್ಘಾಟನೆಗೆ ಸಿದ್ದವಾಗಿರುವ ನಾಗಮಂಗಲ ಪುರಸಭೆ ಸೂಪರ್ ಮಾರ್ಕೆಟ್ ಕಟ್ಟಡ ವಾಣಿಜ್ಯ ಮಳಿಗೆಗಳಿಗೆ ನೆನ್ನೆ ಎಂಎಲ್ಸಿ ಗೂಳಿ ಗೌಡ ಭೇಟಿ ಬೆನ್ನಲ್ಲೇ ಲೋಕಾಯುಕ್ತ ಎಇಇ ನಾಗರತ್ನ ದಿಢೀರ್ ಭೇಟಿ ನೀಡಿ ಪರಿಶೀಲನೆ ನಡೆಸಿ ಕಚೇರಿಯಲ್ಲಿ ಗಂಟೆಗಳ ಕಾಲ ಅಧಿಕಾರಿಗಳೊಂದಿಗೆ ಚರ್ಚಿಸಿರುವುದು ಭಾರಿ ಚರ್ಚೆಗೆ ಗ್ರಾಸವಾಗಿದೆ.

ಬೆಳಿಗ್ಗೆ ೧೧.೩೦ಕ್ಕೆ ಪುರಸಭೆ ಕಚೇರಿಗೆ ದಿಢೀರ್ ಭೇಟಿ ಕೊಟ್ಟ ಅಧಿಕಾರಿಗಳ ತಂಡ ಪುರಸಭೆ ಮುಖ್ಯಾಧಿಕಾರಿ ಶೈಲಾರೊಂದಿಗೆ ಸೂಪರ್ ಮಾರ್ಕೆಟ್ ಪರಿಶೀಲನೆ ನಡೆಸಿದ್ದಾರೆ.

ಸೂಪರ್ ಮಾರ್ಕೆಟ್ ಕಟ್ಟಡ ಕಳಪೆ ಕಾಮಗಾರಿ ಎಂದು ಸಾರ್ವಜನಿಕರ ದೂರಿನ ಮೇರೆಗೆ ಬೆಂಗಳೂರಿನಿAದ ಲೋಕಾಯುಕ್ತ ಎಇಇ ಆಗಮಿಸಿದ್ದಾರೆ ಎನ್ನಲಾಗಿದೆ. ಎಸ್ಟಿಮೇಟ್ ನಂತೆ ಸೂಪರ್ ಮಾರ್ಕೆಟ್ ಕಟ್ಟಡದ ಕಾಮಗಾರಿ ನಡೆದಿಲ್ಲ ಎಂಬ ದೂರಿನಂತೆ ಕಟ್ಟಡದ ಅಳತೆ ಮಾಡಿದ್ದಾರೆ .

ಅಲ್ಲದೆ ಕಟ್ಟಡ ಕಾಮಗಾರಿಯ ಸಂಪೂರ್ಣ ಬಿಲ್ ಮಾಡಿರುವ ಈ ಹಿಂದಿನ ಮುಖ್ಯಾಧಿಕಾರಿ ಆಗಿದ್ದ ಕೃಷ್ಣ ಪ್ರಸಾದ್ ಅವರನ್ನು ಕರೆಸಿಕೊಂಡಿದ್ದ ಅಧಿಕಾರಿಗಳು ಪುರಸಭೆ ಕಚೇರಿಯಲ್ಲಿ ಕಾಮಗಾರಿ ಸಂಬAಧಿತ ಇಂಜಿನೀಯರ್ ಪ್ರಕಾಶ್ ರೊಂದಿಗೆ ಗಂಟೆಗೂ ಹೆಚ್ಚು ಕಾಲ ದೂರಿನ ವಿಚಾರವಾಗಿ ಮಾಹಿತಿ ಪಡೆದಿದ್ದಾರೆ . ಹಾಗೂ. ಸೂಪರ್ ಮಾರ್ಕೆಟ್ ಕಳಪೆ ಕಾಮಗಾರಿ ಪ್ರಕರಣ ಲೋಕಾಯುಕ್ತ ಕೋರ್ಟ್ ತಲುಪಿದೆ ಎನ್ನಲಾಗಿದ್ದು ತನಿಖೆ ಪ್ರಾರಂಭಾಗಿಯೇ ಇಂದು ಅಧಿಕಾರಿಗಳ ಭೇಟಿ ನಡೆದಿದೆ ಎಂಬ ಮಾತುಗಳು ಕೇಳಿಬಂದಿವೆ ಇನ್ನೂ ಮುಂದುವರೆದು ಈ ತನಿಖೆ ಪ್ರಾಮಾಣಿಕವಾಗಿ ನಡೆಯಲಿದೆ ಎಂದು ಖಡಕ್ಕಾಗಿ ಹೇಳಿ ತೆರಳಿದ್ದಾರೆ ಎನ್ನಲಾಗಿದೆ.

ಶಾಸಕ ಸುರೇಶ್ ಗೌಡ ಮೊದಲ ಅಧಿಕಾರ ಅವಧಿಯಲ್ಲಿ ಪ್ರಾರಂಭವಾದ ಸೂಪರ್ ಮಾರ್ಕೆಟ್ ವಾಣಿಜ್ಯ ಕಟ್ಟಡ ಕಾಮಗಾರಿ ಅಂಗಡಿ ಮಳಿಗೆ ಹಂಚಿಕೆ ವಿಚಾರದಲ್ಲಿ ರಾಜಕೀಯ ಪೈಪೋಟಿ ಕಾರಣಕ್ಕೆ ಹಲವು ವರ್ಷಗಳಿಂದ ನೆನಗುಧಿಗೆ ಬಿದ್ದಿತ್ತು.

ವರದಿ: ಚಂದ್ರಮೌಳಿ ನಾಗಮಂಗಲ.

error: