ನಾಗಮಂಗಲ:- ತಾಲ್ಲೂಕಿನ ಬೆಳ್ಳೂರು ಹೋಬಳಿಯ ಪಟ್ಟಣದ ಪಂಚಾಯಿತಿಗೆ ಕಾಂಗ್ರೆಸ್ ಮುಖಂಡ ಬೆಳ್ಳೂರಿನ ಮಹೇಶ್ ರವರ ಧರ್ಮಪತ್ನಿ ಲಕ್ಷ್ಮಮ್ಮ ರವರು ನೂತನ ಅಧ್ಯಕ್ಷರಾಗಿ ಆಯ್ಕೆಯಾಗಿದ್ದಾರೆ
ಬೆಳ್ಳೂರು ಪಟ್ಟಣ ಪಂಚಾಯತಿಯಲ್ಲಿ 13 ವಾರ್ಡಗಳಿದ್ದು ಎಂಟು ಜನ ಕಾಂಗ್ರೆಸ್. ನಾಲ್ಕು ಜನ ಜೆಡಿಎಸ್ . ಒಂದು ಪಕ್ಷೇತರ ಸದಸ್ಯರಿದ್ದು ಒಡಂಬಡಿಕೆಯAತೆ ಜಯಪಾಲ ರವರು ತೆರವಾದ ಸ್ಥಾನಕ್ಕೆ ಇಂದು ನಡೆದ ಚುನಾವಣೆಯಲ್ಲಿ ಒಮ್ಮತದಿಂದ ಕಾಂಗ್ರೆಸ್ಸಿನ ಚೆಲುವರಾಯಸ್ವಾಮಿ ಬಣ್ಣದ ಲಕ್ಷ್ಮಮ್ಮ ಮಹೇಶ್ ರವರು ಆಯ್ಕೆಯಾಗಿದ್ದಾರೆ
ಇದೇ ಸಂದರ್ಭದಲ್ಲಿ ಮಾತನಾಡಿದ ನೂತನ ಅಧ್ಯಕ್ಷರಾದ ಲಕ್ಷ್ಮಮ್ಮ ರವರ ತನ್ನ ಗೆಲುವಿಗೆ ಸಹಕರಿಸಿದ ಎಲ್ಲ ಸದಸ್ಯರು ಹಾಗೂ ನಮ್ಮ ನಾಯಕರಾದ ಚಲುವರಾಯಸ್ವಾಮಿ ಹಾಗೂ ಸುನಿಲ್ ಗೌಡ ಮತ್ತು ನಮ್ಮ ಮುಖಂಡರುಗಳಿಗೆ ನನ್ನ ಧನ್ಯವಾದಗಳು ಮತ್ತು ಇದೇ ರೀತಿ ಬೆಳ್ಳೂರು ಅಭಿವೃದ್ಧಿಗೆ ತಮ್ಮೆಲ್ಲರ ಸಹಕಾರ ಇರಬೇಕು ಎಂದು ತಿಳಿಸಿ ಧನ್ಯವಾದಗಳು ಹೇಳಿದರು
ಸ್ಥಾಯಿ ಸಮಿತಿ ಅಧ್ಯಕ್ಷ ಲ್ಯಾಬ್ ಮಂಜು ಮಾತನಾಡಿ ನೂತನ ಅಧ್ಯಕ್ಷರ ಜೊತೆಗೂಡಿ ಬೆಳ್ಳೂರಿನ ಅಭಿವೃದ್ಧಿಗೆ ಸಹಕರಿಸುವುದಾಗಿ ತಿಳಿಸಿದರು…
ಕಾಂಗ್ರೆಸ್ ಮುಖಂಡ ತಿಮ್ಮರಾಯ ಗೌಡ ಮಾತನಾಡಿ ಅಭಿವೃದ್ಧಿ ಎಂದರೆ ಚೆಲುವರಾಯಸ್ವಾಮಿ ಅದಕ್ಕೆ ಉತ್ತಮ ಉದಾಹರಣೆ ಬೆಳ್ಳೂರು ಗ್ರಾಮ ಪಂಚಾಯಿತಿಯನ್ನು ಶ್ರಮಪಟ್ಟು ಪಟ್ಟಣ ಪಂಚಾಯಿತಿ ಮಾಡಿದ್ದಾರೆ ಅವರ ಶ್ರಮಕ್ಕೆ ಬೆಳ್ಳೂರಿನ ಜನತೆ ಅತಿಹೆಚ್ಚು ಮತ ನೀಡಿ 10ಕ್ಕೂ ಹೆಚ್ಚು ವಾರ್ಡ್ಗಳಲ್ಲಿ ಜಯಗಳಿಸಿದ ನಮ್ಮ ಪಕ್ಷದ ಅಭ್ಯರ್ಥಿಗಳ ಅಧಿಕಾರ ಹಂಚಿಕೆ ಯಂತೆ ಈ ದಿನ ಅಧ್ಯಕ್ಷರಾಗಿ ಲಕ್ಷ್ಮಮ್ಮ ಅವರನ್ನು ಆಯ್ಕೆ ಮಾಡಲಾಗಿದೆ ಎಲ್ಲರೂ ಕೂಡ ಸಹಕರಿಸಬೇಕೆಂದು ತಿಳಿಸಿದರು
ಇದೇ ಸಂದರ್ಭದಲ್ಲಿ ಕಾಂಗ್ರೆಸ್ಸಿನ ಕಾರ್ಯಕರ್ತರು ಅಭಿಮಾನಿಗಳು ಮತ್ತು ಮುಖಂಡರಾದ ತಿಮ್ಮರಾಯ ಗೌಡ .ದಿನೇಶ್. ಲ್ಯಾಬ್ ಮಂಜು. ಯುವ ಮುಖಂಡ ಸುನಿಲ್ ಗೌಡ . ಅಪಾರ ಸಂಖ್ಯೆಯ ಮಾಜಿ ಸಚಿವ ಚಲುವರಾಸ್ವಾಮಿ ಅಭಿಮಾನಿಗಳು ಭಾಗವಹಿಸಿದ್ದರು
ವರದಿ: ಚಂದ್ರಮೌಳಿ ನಾಗಮಂಗಲ
More Stories
ಫೈಟರ್ ರವಿ ಸಾರಥ್ಯದಲ್ಲಿ ಹನುಮ ಮಾಲಾಧಾರಿಗಳು ಯಾತ್ರೆ
ಕಾಂತಾಪುರ ಗ್ರಾಮ ಪಂಚಾಯತಿಗೆ ನೂತನ ಅಧ್ಯಕ್ಷರಾಗಿ ಸಿ.ಕೆ.ರಮೇಶ್ ಕುಮಾರ ಆಯ್ಕೆ
ನಾಗಮಂಗಲದಲ್ಲಿ 75 ನೇ ವರ್ಷದ ಸ್ವಾತಂತ್ರೋತ್ಸವದ ಅಂಗವಾಗಿ ಚೆಲುವರಾಯಸ್ವಾಮಿ ಸಾರಥ್ಯದಲ್ಲಿ ಪಾದಯಾತ್ರೆ