April 26, 2024

Bhavana Tv

Its Your Channel

ಶಾಸಕ ಸುರೇಶಗೌಡ ಚುನಾವಣೆ ಗಿಮಿಕ್, ಜನರ ಮುಂದೆ ಡ್ರಾಮಾ ನಿಲ್ಲಿಸಲಿ- ಮಾಜಿ ಸಂಸದ ಶಿವರಾಮೇಗೌಡ

ನಾಗಮಂಗಲ ಪಟ್ಟಣದ ಟಿ.ಬಿ. ಬಡಾವಣೆಯಲ್ಲಿರುವ ಸುಭಾಷ್ ನಗರದ ನಿವೇಶನಗಳ ಹಕ್ಕು ಪತ್ರ ವಿತರಣೆ ಕುರಿತು ಶಾಸಕ ಸುರೇಶ ಗೌಡ ಸದನದಲ್ಲಿ ಪ್ರಶ್ನಿಸಿ ಅಕ್ರಮದ ಕುರಿತು ವಸತಿ ಇಲಾಖೆಯನ್ನು ವಿವರಣೆ ಕೇಳಿದ್ದರು ಸಚಿವ ಸೋಮಣ್ಣನವರು ಉತ್ತರಿಸಿ ಈ ತಕ್ಷಣ ಅಧಿಕಾರಿಗಳನ್ನು ಕರೆದು ಸಭೆ ನಡೆಸಿ ಸರಿಪಡಿಸುವುದಾಗಿ ಹೇಳಿಕೆಯನ್ನು ನೀಡಿದರು

ಈ ಸಂಬAಧ ನಾಗಮಂಗಲದ ಬೆಳ್ಳೂರಿನ ಖಾಸಗಿ ಹೋಟೆಲಿನಲ್ಲಿ ಪತ್ರಿಕಾಗೋಷ್ಠಿ ನಡೆಸಿ ಮಾತನಾಡಿದ ಮಾಜಿ ಸಂಸದ ಶಿವರಾಮೇಗೌಡ 25 ವರ್ಷದ ಹಿಂದೆ ನನ್ನ ಅವಧಿಯಲ್ಲಿ ಸುಭಾಷ್ ನಗರದ ಕಡುಬಡವರಿಗೆ ನ್ಯಾಯಬದ್ಧವಾಗಿ ಹಕ್ಕು ಪತ್ರ ವಿತರಣೆ ಮಾಡಿದ್ದು ನಿಜ ಈ ಸಂಬAಧ ನ್ಯಾಯಬದ್ಧವಾದ ಯಾವುದೇ ತನಿಖೆಗೂ ಸಿದ್ಧ ಆದರೆ ಶಾಸಕ ಸುರೇಶಗೌಡ ರವರು ಮೂಲ ಹಕ್ಕದಾರರನ್ನು ಒಕ್ಕಲೆಬ್ಬಿಸಿ ತನ್ನ ಪ್ರಭಾವಿ ಮುಖಂಡರನ್ನು ಒಳ ಸೇರಿಸುವ ಉದ್ದೇಶದಿಂದ ಶಾಸಕ ಸುರೇಶಗೌಡ ಮಾಡುತ್ತಿದ್ದಾರೆಂದು ನನಗೆ ಬಲ್ಲಮೂಲಗಳಿಂದ ತಿಳಿದು ಬಂದಿದೆ ನಾನು ಸುಭಾಷ್ ನಗರದ ಬಡ ಜನತೆಯ ಪರವಾಗಿ ಹೋರಾಟಕ್ಕೆ ನಿಲ್ಲುವುದಾಗಿ ತಿಳಿಸಿದರು

ಶಾಸಕ ಸುರೇಶಗೌಡ ತನ್ನ ಪ್ರಭಾವಿ ಮುಖಂಡರ ಗಳಿಗೋಸ್ಕರ ಬಡವರಿಗೆ ಅನ್ಯಾಯ ಮಾಡುತ್ತಿದ್ದಾರೆ 25 ವರ್ಷದ ಹಿಂದೆ ಆದ ಪ್ರಕರಣವನ್ನು ಈಗ ಸದನದಲ್ಲಿ ಪ್ರಸ್ತಾಪ ಮಾಡಿರುವುದು ಎಷ್ಟು ಸರಿ ತಮ್ಮ ಬೆಂಬಲಿಗರಿಗೆ ಗೋಸ್ಕರ ಶಾಸಕರಾಗಿ ನಿಮ್ಮ ಕಾರ್ಯವೈಖರಿಯನ್ನು ಎತ್ತಿಹಿಡಿಯುತ್ತದೆ ಈ ನಿವೇಶನ ಹಂಚಿಕೆ ಪ್ರಕರಣ ಸದನದಲ್ಲಿ ಮಾತನಾಡುವಂತಹ ಮಾತೇ ಅಲ್ಲ ಎರಡು ಬಾರಿ ಎಂ.ಎಲ್.ಎ. ಆಗಿದ್ದಾಗ ಈ ನಿವೇಶನ ಹಂಚಿಕೆ ವಿಚಾರ ನಿಮ್ಮ ಗಮನಕ್ಕೆ ಬರಲಿಲ್ಲವೇ ಇದೆಲ್ಲವೂ ರಾಜಕೀಯ ಗಿಮಿಕ್ ಗಾಗಿ ಈ ತಂತ್ರ ಹೆಣೆದಿರುವುದು ತಾಲೂಕಿನ ಜನತೆ ನಿಮಗೆ ತಕ್ಕ ಪಾಠ ಕಲಿಸುತ್ತಾರೆ

ಕಾನೂನು ಎಂದು ಕೂಡ ಪ್ರಭಾವಿಗಳ ಪರ ಇರುವುದಿಲ್ಲ ಶಾಸಕರು ತನ್ನ ಬೆಂಬಲಿಗರಿಗೆ ಅನುಕೂಲ ಮಾಡುವ ಉದ್ದೇಶದಿಂದ ಮೂಲ ಬಡವರನ್ನು ಒಕ್ಕಲೆಬ್ಬಿಸಲು ನೋಡಿದರೆ ಜನ ತಕ್ಕ ಪಾಠ ಕಲಿಸುತ್ತಾರೆ ಎಂದರು

ವರದಿ: ಚಂದ್ರಮೌಳಿ ನಾಗಮಂಗಲ

error: