
ಹೊನ್ನಾವರ: ಕರೋನಾ ಸಂಕಷ್ಟದಿoದ ಪತ್ರಿಕಾ ವಿತರಕರ ಸಂಕಷ್ಟದ ಬಗ್ಗೆ ಭಾವನಾ ವಾಹಿನಿ ತನ್ನ ವೆಬ್ ಪೇಜನಲ್ಲಿ ವಿಸ್ತಿತ ವರದಿ ಪ್ರಕಟಿಸಿತ್ತು. ಇದನ್ನು ಹಾಲಿ ಮಾಜಿ ಶಾಸಕರು ಸೇರಿದಂತೆ ವಿವಧ ಜನಪ್ರತಿನಿಧಿಗಳಿಗೆ ಸಂಘಸoಸ್ಥೆ ಗಮನಕ್ಕೂ ತರುವ ಕಾರ್ಯ ಮಾಡಿತ್ತು. ವರದಿಗೆ ಸ್ಪಂದಿಸಿದ ಕುಮಟಾ-ಹೊನ್ನಾವರ ಕ್ಷೇತ್ರದ ಮಾಜಿ ಶಾಸಕಿ ಶಾರದಾ ಶೆಟ್ಟಿ ದಿ.ಮೋಹನ ಶೆಟ್ಟಿ ಪ್ರತಿಷ್ಟಾನದ ಮೂಲಕ ಶನಿವಾರ ಬೆಳಿಗ್ಗೆ ದಿನಸಿ ಕಿಟ್ ನೀಡಲು ಮುಂದಾಗಿದ್ದಾರೆ. ಇದಲ್ಲದೇ ತನ್ನ ಕ್ಷೇತ್ರ ವ್ಯಾಪ್ತಿಗೆ ಬರದೇ ಇದ್ದರೂ ಸಮಾಜಮುಖಿ ಕಾರ್ಯ ಮಾಡುತ್ತಿರುವ ಭಟ್ಕಳ-ಹೊನ್ನಾವರ ಕ್ಷೇತ್ರದ ಮಾಜಿ ಶಾಸಕ ಮಂಕಾಳ ವೈದ್ಯ ಶನಿವಾರ ಮಧ್ಯಾಹ್ನ ಸಹಾಯ ನೀಡುವುದಾಗಿ ಸಂಘಟನೆಯ ಗಮನಕ್ಕೆ ತಂದಿದ್ದಾರೆ. ಇದರಿಂದ ಸಂಕಷ್ಟದ ಬಗ್ಗೆ ವರದಿ ಪ್ರಕಟಿಸಿ ನೆರವಾಗುವಂತೆ ಸಹಕರಿಸಿದ ಭಾವನಾ ವಾಹಿನಿ ತಂಡಕ್ಕೆ ಪತ್ರಿಕಾ ವಿತರಕರು ಅಭಿನಂದಿಸಿದ್ದಾರೆ.
More Stories
ಪುನಃ ಕೊನೆಗೌಡರತ್ತ ಒಲವು ತೋರುತ್ತಿರುವ ಕೃಷಿಕರು
ಅಸ್ತಂಗತನಾದ ತಬಲಾಸೂರ್ಯ ಶ್ರೀ ಎನ್. ಎಸ್. ಹೆಗಡೆ ಹಿರೇಮಕ್ಕಿ.
ನವ ವಧುವಿನಂತೆ ಕಂಗೊಳಿಸುತ್ತಿದೆ ಮಿರ್ಜಾನ್ ಕೋಟೆ