May 18, 2024

Bhavana Tv

Its Your Channel

ರಾಜ್ಯಕ್ಕೆ ಮುಂದುವರೆದ “ಮಹಾ” ಕಂಟಕ; ಇಂದು ಮತ್ತೆ 257 ಜನರಿಗೆ ಕೋವಿಡ್ ಸೋಂಕು

ಬೆಂಗಳೂರು :

ರಾಜ್ಯದಲ್ಲಿ ಇವತ್ತು ಒಂದೇ ದಿನ 257 ಮಂದಿಗೆ ಕೊರೊನಾ ಸೋಂಕು ತಗುಲಿರುವುದು ದೃಢಪಟ್ಟಿದೆ. ಇದರೊಂದಿಗೆ ಒಟ್ಟು ಸಂಖ್ಯೆ 4320 ಕ್ಕೆ ಏರಿಕೆಯಾಗಿದೆ.

2651 ಸಕ್ರಿಯ ಪ್ರಕರಣಗಳು ಇದ್ದು 13 ಮಂದಿ ಐಸಿಯುನಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ. ಇವತ್ತು 106 ಮಂದಿ ಗುಣಮುಖರಾಗಿ ಆಸ್ಪತ್ರೆಯಿಂದ ಬಿಡುಗಡೆಯಾಗಿದ್ದು ಒಟ್ಟು 1610 ಮಂದಿ ಆಸ್ಪತ್ರೆಯಿಂದ ಡಿಸ್ಚಾರ್ಜ್ ಆಗಿದ್ದಾರೆ.

ಈ ಕುರಿತಂತೆ ರಾಜ್ಯ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ ಹೆಲ್ತ್ ಬುಲೆಟಿನ್ ಬಿಡುಗಡೆ ಮಾಡಿದ್ದು, ಇಂದು ಉಡುಪಿ – 92, ಬೆಂಗಳೂರು ನಗರ -09, ರಾಯಚೂರು -88, ಮಂಡ್ಯ -15, ಬೆಳಗಾವಿ-12, ಹಾಸನ – 15, ದಾವರಣಗೆರೆ -13, ಚಿಕ್ಕಬಳ್ಳಾಪರು – 02, ದಕ್ಷಿಣ ಕನ್ನಡ -04, ವಿಜಯಪುರ -01, ಮೈಸೂರು -01, ಬಳ್ಳಾರಿ -01, ಗದಗ -02, ತುಮಕೂರು -01 ಮತ್ತು ಹಾವೇರಿ -01 ಕೊರೋನಾ ಸೋಂಕು ತಗಲುವ ಮೂಲಕ ಇಂದು 257 ಜನರಿಗೆ ಕೊರೋನಾ ದೃಢಪಟ್ಟಿದೆ. ಇವತ್ತು ಕೊರೋನಾ ಸೋಂಕಿನಿಂದ ನಾಲ್ವರು ಸಾವನ್ನಪ್ಪಿದ್ದಾರೆ. ಇದರೊಂದಿಗೆ ಕೊರೋನಾ ಸೋಂಕಿನಿಂದ ಮೃತಪಟ್ಟವರ ಸಂಖ್ಯೆ 57 ಕ್ಕೆ ಏರಿಕೆಯಾಗಿದೆ.

ಇವತ್ತು ಪತ್ತೆಯಾದ 257 ಪ್ರಕರಣಗಳಲ್ಲಿ 155 ಅಂತರರಾಜ್ಯ ಪ್ರಯಾಣಿಕರಿದ್ದು ಒಬ್ಬರು ಅಂತರರಾಷ್ಟ್ರೀಯ ಪ್ರಯಾಣಿಕರಾಗಿದ್ದಾರೆ.

error: