April 26, 2024

Bhavana Tv

Its Your Channel

ಕರ್ನಾಟಕ ರಾಜ್ಯ ಸಾವಿತ್ರಿಬಾಯಿ ಪುಲೆ ಶಿಕ್ಷಕಿಯರ ಸಂಘ(ರಿ) ಶಿಕಾರಿಪುರ ತಾಲ್ಲೂಕು ಘಟಕದ ನೂತನ ಪದಾಧಿಕಾರಿಗಳಾಗಿ ಪದಗ್ರಹಣ

ಶಿವಮೊಗ್ಗ: ದಿನಾಂಕ ೧೮-೦೪-೨೦೨೧ ಭಾನುವಾರ ಕರ್ನಾಟಕ ರಾಜ್ಯ ಸಾವಿತ್ರಿಬಾಯಿ ಪುಲೆ ಶಿಕ್ಷಕಿಯರ ಸಂಘ(ರಿ) ರಾಜ್ಯಘಟಕ- ಧಾರವಾಡ ಶಿವಮೊಗ್ಗ ಜಿಲ್ಲೆಯ ಶಿಕಾರಿಪುರ ತಾಲ್ಲೂಕು ಘಟಕ ಉದ್ಘಾಟನಾ ಸಮಾರಂಭ ಹಾಗೂ ಉಪನ್ಯಾಸ ಕಾರ್ಯಕ್ರಮ ಜರುಗಿತು. ಕಾರ್ಯಕ್ರಮವನ್ನು ಮಾನ್ಯ ಮುಖ್ಯಮಂತ್ರಿಗಳ ಸುಪುತ್ರರೂ ಹಾಗೂ ಶಿವಮೊಗ್ಗ ಲೋಕಸಭಾ ಕ್ಷೇತ್ರದ ಸಂಸದರೂ ಆದ ಸನ್ಮಾನ್ಯ ಶ್ರೀ ರಾಘವೇಂದ್ರ ಬಿ.ವೈ.ರವರು ಉದ್ಘಾಟಿಸಿ,ಶಿಕಾರಿಪುರ ತಾಲ್ಲೂಕು ಘಟಕದ ನೂತನ ಪದಾಧಿಕಾರಿಗಳಾಗಿ ಪದಗ್ರಹಣ ನಡೆಯಿತು
ಶಿಕಾರಿಪುರ ತಾಲ್ಲೂಕು ಅಧ್ಯಕ್ಷರಾಗಿ ಲಕ್ಷ್ಮವ್ವ ಸುಣಗಾರ್, ಗೌರವ ಅಧ್ಯಕ್ಷರಾಗಿ ಗೀತಾಂಜಲಿ, ಪ್ರಧಾನ ಕಾರ್ಯದರ್ಶಿಯಾಗಿ ಉಷಾರಾಣಿ.ಎಸ್.ವಿ, ಹಾಗೂ ಕೋಶಾಧ್ಯಕ್ಷರಾಗಿ ಅರುಣ ರವರು ಹಾಗೂ ಸಂಘದ ಉಪಾಧ್ಯಕ್ಷರುಗಳಾಗಿ ಗೀತಾ, ಗೀತಾದೇವಿ, ಅನುಪಮ, ಫರ್ವಿನ್, ಮಧುರ, ಶಾಲಿನಿ, ಗೀತಾ ಹೆಚ್.ಎಸ್ ,ಕವಿತಾ ಜೆ.ಬಿ ಸಹಕಾರ್ಯದರ್ಶಿಗಳಾಗಿ ರಾಜೇಶ್ವರಿ ಪಾಟಿಲ್, ಇಂದಿರ, ಲತಾ, ಸರ್ವದ ರಾಣಿ, ಲೀಲಾವತಿ, ಸಾಕಮ್ಮ,ಪುಷ್ಪ, ಸರಿತಾ, ಗುಲ್ಜರ್ ಖಾಜಿ ರವರುಗಳು ಸಂಘಟನಾ ಕಾರ್ಯದರ್ಶಿಯಾಗಿ ಪ್ರೇಮಾ, ಶಾರದಾಬಾಯಿ, ಗೀತಾ ,ಅನಿತ, ನಿರ್ಮಲ, ಗೃಹಲಕ್ಷ್ಮೀ, ಶೈಲಾ ಪಟ್ಟಕ್ಕನವರ್, ಕಸ್ತೂರಮ್ಮ ಮಾಳಾಪುರ, ಕವಿತರವರುಗಳು ಹಾಗೂ ಕಾರ್ಯಕಾರಿ ಸಮಿತಿ ಸದಸ್ಯರುಗಳು ಪದಗ್ರಹಣ ಮಾಡಿದರು

error: