April 29, 2024

Bhavana Tv

Its Your Channel

ಕೊವಿಡ್ ಸೊಂಕು ನಿಯಂತ್ರಣದ ಅರಿವನ್ನು ಮೂಡಿಸಲು ಯುವಕರ ಪಾತ್ರ ಮಹತ್ವ ವಾಗಿದೆ ಎಂದು ಕ್ರಿಬ್ಕೋ ನಿರ್ದೇಶಕ ಆರ್ ರಾಜೇಂದ್ರ ಅಭಿಪ್ರಾಯಪಟ್ಟರು.

ಮಧುಗಿರಿ: ಪಟ್ಟಣದ ಎಂ.ಜಿ. ಎಂ ಬಾಲಕಿಯರ ಫ್ರೌಡಶಾಲೆಯಲ್ಲಿ ತಾಲ್ಲೂಕು ಕಾಂಗ್ರೆಸ್ ಸಮಿತಿ, ಕೆ ಎನ್ ಆರ್ ಮತ್ತು ಆರ್ ಆರ್ ಅಭಿಮಾನಿಗಳ ವತಿಯಿಂದ ಪಟ್ಟಣದ ಎರಡು ಕಡೆ ಉಚಿತ ವಾಗಿ ಊಟ ವಿತರಿಸುವ ವ್ಯವಸ್ಥೆಯ ಕಾರ್ಯಕ್ರಮಕ್ಕೆ ಚಾಲನೆ ನೀಡಿ ಮಾತನಾಡಿದರು.

ಇಂದೂ ಗ್ರಾಮಗಳಲ್ಲಿ ಹೆಚ್ಚಾಗಿ ಕೊರೊನಾ ಸೊಂಕು ಕಂಡು ಬರುತ್ತಿದೆ ಈ ಬಗ್ಗೆ ಸ್ವಚ್ಚತೆ, ದೈಹಿಕ ಅಂತರ , ಮಾಸ್ಕ್ ಬಳಕೆಗಳ ಬಗ್ಗೆ ಗ್ರಾಮಸ್ಥರಿಗೆ ಅರಿವು ಮೂಡಿಸಲು ಪ್ರಮುಖ ಪಾತ್ರ ವಹಿಸಬೇಕಾಗಿದೆ.

ಈ ಹಿಂದಿನ ಮುಖ್ಯ ಮಂತ್ರಿ ಸಿದ್ದರಾಮಯ್ಯ ನವರ ಜಾರಿಗೆ ತಂದಿದ್ದ ಹಲವಾರು ಜನಪರ ಯೋಜನೆಗಳನ್ನು ರದ್ದೂ ಮಾಡಲು ಹೊರಟಿ ಮತ್ತೆ ಆ ಯೋಜನೆಗಳನ್ನು ಇಂದಿನ ಬಿಜೆಪಿ ಸರಕಾರ ಮುಂದುವರೆಸುತ್ತಿದೆ. ತಾಲ್ಲೂಕಿನಲ್ಲಿ ಕೊರೊನಾ ನಿಯಂತ್ರಣಕ್ಕಾಗಿ ಎರಡು ಅಂಬುಲೈನ್ಸ್ ಈಗಾಗಲೇ ನೀಡಲಾಗಿದೆ. ಸೊಂಕಿತರು ಹಾಗೂ ಸೊಂಕಿತರ ಪರವಾಗಿ ಬರುವವರಿಗೆ ಲಾಕ್ ಡೌನ್ ಹಿನ್ನೆಲೆಯಲ್ಲಿ ಊಟದ ವ್ಯವಸ್ಥೆ ಗಾಗಿ ಪರಿದಾಡುತ್ತಿರುವುದರಿಂದ ಕಷ್ಟ ಕರವಾದ ವಾತವರಣ ಸೃಷ್ಟಿಯಾಗಿದೆ ಆದ್ದರಿಂದ ಬಡವರಿಗೂ ಅನೂಕೂಲ ವಾಗುವ ದೃಷ್ಟಿಯಿಂದ ಪಟ್ಟಣದಲ್ಲಿನ ಸರಕಾರಿ ಆಸ್ಪತ್ರೆ ಮುಂಭಾಗ ಹಾಗೂ ಎಂಜಿಎA ಶಾಲೆಯ ಮುಂಭಾಗ ಪ್ರತಿದಿನ ೪೦೦ ಜನರಿಗೆ ಊಟದ ವ್ಯವಸ್ಥೆ ಕಲ್ಪಿಸಲಾಗಿದೆ ಎಂದರು.

ಕಾರ್ಯಕ್ರಮದಲ್ಲಿ ಡಿ ಸಿ ಸಿ ಬ್ಯಾಂಕ್ ನಿರ್ದೇಶಕ ನಾಗೇಶ್ ಬಾಬು, ಪುರಸಭಾ ಸದಸ್ಯರಾದ ಎಂ.ವಿ.ಗೋವಿAದರಾಜು, ಆಲೀಂ,ಮAಜುನಾಥ್, ಮಾಜಿ ಸಹಕಾರ ಯೂನಿಯನ್ ಅಧ್ಯಕ್ಷ ಎನ್.ಗಂಗಣ್ಣ, ಮುಖಂಡರಾದ ಎಂ.ಎಸ್.ಶAಕರನಾರಾಯಣ, ಉಮೇಶ್, ಎಸ್ ಬಿಟಿ ರಾಮು, ಸಂಜೀವಮೂರ್ತಿ, ಆನಂದ್, ಗಂಗರಾಜು, ದೀಪಕ್ ಹೊನ್ನಾಪುರ ಯುವ ಕಾಂಗ್ರೆಸ್ ತಾ ಅಧ್ಯಕ್ಷ ಎಸ್ ಡಿ. ಕೆ ವೆಂಕಟೇಶ್ ಮೂಡ್ಲಿಗೀರೀಶ್ , ರಾಜೇಶ್, ಜೆ ಮಂಜು, ಮಾರುತಿ ಮತ್ತು ಮತ್ತಿತರರು ಇದ್ದರು.
ವರದಿ: ಮಧುಸೂದನ್ ಮಧುಗಿರಿ

ಹೆಚ್ಚಿನ ಮಾಹಿತಿ ಹಾಗೂ ಸುದ್ದಿ ವಿವರಕ್ಕೆ ಹಾಗೂ ವಿಡಿಯೊ ನ್ಯೂಸ್ ವೀಕ್ಷಿಸಲು ಭಾವನ ಟಿವಿ ವೀಕ್ಷಿಸಿ. ಭಾವನ ಟಿವಿ ಇದು ನಿಮ್ಮ ವಾಹಿನಿ.
ಭಾವನಾ ಟಿವಿಯಲ್ಲಿ ಮತ್ತು ವೆಬ್ ಸೈಟ್‌ನಲ್ಲಿ ಜಾಹಿರಾತು ನೀಡಲು ಕರೆ ಮಾಡಿ, 9740723670, 9590906499

error: