ಉಡುಪಿ : ಉಡುಪಿಯ ಸಮೀಪದ ಕಡಿಯಾಳಿ ಶಿವ ಪ್ರಸಾದ್ ಹೋಟೆಲ್ ಮಾಲೀಕರಾದ ರಾಘು ಭಟ್ ಯಾನೆ ರಾಘವೇಂದ್ರ ಭಟ್ (48) ತಮ್ಮ ಸಹೋದರನ ಮನೆಯಲ್ಲಿ ಇಂದು ಸಂಜೆ ಆತ್ಮಹತ್ಯೆಗೆ ಶರಣಾಗಿದ್ದಾರೆ ಎಂದು ತಿಳಿದು ಬಂದಿದೆ. ಸಾಮಾಜಿಕ ಕಾರ್ಯಕರ್ತರಾಗಿದ್ದರು ಹಾಗೂ ಕಡಿಯಾಳಿ ಶಿವಸಾಗರ್ ಕ್ಯಾಂಟೀನ್ ಮಾಲಕರಾಗಿದ್ದರು.ಓಂ ಫ್ರೆಂಡ್ಸ್ ಎಂಬ ಯುವಕರ ತಂಡದ ಮೂಲಕ ಶ್ರೀ ಕೃಷ್ಣಾಷ್ಟಮಿ ಸಂದರ್ಭದಲ್ಲಿ ಅದ್ದೂರಿ ಹುಲಿವೇಷ ಸ್ಪರ್ಧೆ ನಡೆಸಿ ಚಿರಪರಿಚಿತರಾಗಿದ್ದ ಯುವ ಉದ್ಯಮಿಯಾಗಿದ್ದರು.
ಈ ಹಿಂದೆ ಕಾಂಗ್ರೆಸ್ ನಿಂದ ನಗರಸಭಾ ಚುನಾವಣೆಯಲ್ಲಿ ಸ್ಪರ್ಧಿಸಿ ಬಿಜೆಪಿಯ ವಿರುದ್ಧ ಕೆಲವೇ ಕೆಲವು ಮತಗಳ ಅಂತರದಿಂದ ಸೋತಿದ್ದರು. ಕೆಲ ಸಮಯದ ನಂತರ ಬಿಜೆಪಿಯನ್ನು ಸೇರ್ಪಡೆಗೊಂಡಿದ್ದರು. ಇಂದು ಸಂಜೆ ಹಿರಿಯಡ್ಕದ ತನ್ನ ಸಹೋದರನ ಮನೆಯ ಬಾವಿಗೆ ಹಾರಿ ಆತ್ಮಹತ್ಯೆ ಮಾಡಿಕೊಂಡಿದ್ದಾರೆ.ಆತ್ಮಹತ್ಯೆಗೆ ನಿಖರ ಕಾರಣ ತಿಳಿದು ಬಂದಿಲ್ಲ.ಹಿರಿಯಡ್ಕ ಪೊಲೀಸ್ ಠಾಣೆಯಲ್ಲಿ ಆತ್ಮಹತ್ಯೆ ಪ್ರಕರಣ ದಾಖಲಾಗಿದೆ.ಪೊಲೀಸರು ವಿಚಾರಣೆ ನಡೆಸುತ್ತಿದ್ದಾರೆ
More Stories
ಕರಾವಳಿ ಕಾವಲು ಪಡೆಯ ಎಸ್ಐ ಅಣ್ಣಪ್ಪ ಮೊಗೇರ ಸೇವಾ ನಿವೃತ್ತಿ
ಬಂಟಕಲ್ ಇಂಜಿನಿಯರಿAಗ್ ಕಾಲೇಜಿಗೆ“ ಟೆಕ್ ಯುವ– ಕೆ24” ನಲ್ಲಿ ಓವರ್ಆಲ್ ಚಾಂಪಿಯನ್ಶಿಪ್
ಭಾವಿ ಪರ್ಯಾಯ ಉಡುಪಿ ಶ್ರೀ ಪುತ್ತಿಗೆ ಮಠದಿಂದ ಗೀತಾ ರಥಕ್ಕೆ ಚಾಲನೆ