May 19, 2024

Bhavana Tv

Its Your Channel

ಮಲ್ಪೆಯಲ್ಲಿ ಯುವಕನ ಬರ್ಬರ ಕೊಲೆ:ಮೀಟರ್ ಬಡ್ಡಿ ವಿಚಾರದಲ್ಲಿ ಕೊಲೆ ಮಾಡಿರುವ ಶಂಕೆ

ಉಡುಪಿ : ರಾತ್ರಿಯಲ್ಲಿ ಉಡುಪಿಯ ಲಕ್ಷೀ ನಗರ ಬಳಿ ಯುವನೊಬ್ಬನ ಬರ್ಬರವಾಗಿ ಕೊಲೆಯಾಗಿದೆ.ಲಕ್ಷ್ಮೀ ನಗರ ಶಾಲೆಯ ಹಿಂಭಾಗದಲ್ಲಿ ಹತ್ಯೆಯಾದ ಯುವಕನ ಶವ ಪತ್ತೆಯಾಗಿದೆ ಎಂದು ತಿಳಿದು ಬಂದಿದೆ.

ಕೊಲೆಯಾದ ಯುವಕ ಮಲ್ಪೆಯಲ್ಲಿ ಮೀನುಗಾರಿಕೆ‌ ಕೆಲಸ ಮಾಡಿಕೊಂಡಿದ್ದ ಯೋಗಿಶ್ ಎಂಬವ ಎನ್ನಲಾಗಿದೆ.ಹಣಕಾಸಿನ ವಿಚಾರಕ್ಕೆ ಕೊಲೆ ನಡೆದಿದೆ‌ ಎನ್ನಲಾಗಿದೆ.

ರೌಡಿ ಶೀಟರ್ ವಕ್ವಾಡಿ ಪ್ರವೀಣ್ ಹಾಗೂ ಗುರು ಭಟ್ ಕೊಲೆ ಪ್ರಕರಣದಲ್ಲಿ ಭಾಗಿಯಾಗಿದ್ದ ಸುಜೀತ್ ಪಿಂಟೋ ಈ ಯುವಕನ‌ ಕೊಲೆ ಮಾಡಿರುವುದಾಗಿ ತಿಳಿದು ಬಂದಿದೆ.ಸುಜೀತ್ ಪಿಂಟೋ ಹಾಗೂ ಅತನ‌ ಅಣ್ಣಾ ಬಡ್ಡಿ ವ್ಯವಹಾರ ನಡೆಸುತ್ತಿದ್ದರು ಎನ್ನಲಾಗಿದೆ.ಯೋಗಿಶನಿಗೆ ಹಣ ನೀಡಿದ್ದರು ಎನ್ನಲಾಗಿದೆ.ಹಣ ವಾಪಸ್ಸು ಕೇಳಲು ಇವರಿಬ್ಬರು ಸಂತಕಟ್ಟೆ ಬಾರಲ್ಲಿ ಕೂತಿದ್ದ ಯೋಗಿಶನನ್ನು ಭೇಟಿಯಾಗಿದ್ದರು‌.ಅಲ್ಲಿ ಕೊಲೆಯಾದ ಯುವಕ ಹಾಗೂ ಸುಜಿತ್ ಪಿಂಟೋ ಗುಂಪು ಗಲಾಟೆ ನಡೆಸಿದ್ದರು ಎನ್ನುವ ಮಾಹಿತಿ ತಿಳಿದು ಬಂದಿದೆ. ಬಳಿಕ ಲಕ್ಷ್ಮೀನಗರದ ಶಾಲೆ ಬಳಿ‌ಬಂದಾಗ ಇಬ್ಬರ ಮಧ್ಯೆ ಮಾತಿನ‌ ಚಕಮಕಿ ನಡೆದು ಕೊಲೆ ಮಾಡಲಾಗಿದೆ ಎಂದು ತಿಳಿಯಲಾಗಿದೆ. ಮಲ್ಪೆ ಪೊಲೀಸ್ ಠಾಣೆಯಲ್ಲಿ ಕೊಲೆ ಪ್ರಕರಣ ದಾಖಲಾಗಿದೆ.ಪೊಲೀಸರು ವಿಚಾರಣೆ ನಡೆಸುತ್ತಿದ್ದಾರೆ

error: