May 19, 2024

Bhavana Tv

Its Your Channel

ಮಾತು ಮಾಣಿಕ್ಯ ” ಉಪನ್ಯಾಸ ಕಾರ್ಯಕ್ರಮ

ಕಾರ್ಕಳ ; ಅಖಿಲ ಭಾರತೀಯ ಸಾಹಿತ್ಯ ಪರಿಷತ್ತು ಕರ್ನಾಟಕ ಉಡುಪಿ ಜಿಲ್ಲಾ ಕಾರ್ಕಳ ತಾಲೂಕು ಸಮಿತಿ ವತಿಯಿಂದ ಸಾಹಿತ್ಯ ಉಪನ್ಯಾಸ ಮಾಲಿಕೆಯಲ್ಲಿ ಮಾತು ಮಾಣಿಕ್ಯ ವಿಷಯದ ಉಪನ್ಯಾಸವು ಶ್ರೀ ಮದ್ ಭುವನೇಂದ್ರ ಪ್ರೌಢ ಶಾಲೆಯ ವರದೇಂದ್ರ ಸದನದಲ್ಲಿ ಜರುಗಿತು.

ಮಾತೆಂಬುದು ನಮಗೆ ದೊರೆತ ಭಗವಂತನ ವಿಶೇಷ ಅನುಗ್ರಹ ಆ ಭಾಗ್ಯವನ್ನು ಪಡೆದ ನಾವು ಸದ್ವಿಚಾರಗಳನ್ನಾಡುತ್ತಾ ಎಲ್ಲರಿಗೂ ಬೆಳಕಾಗಬೇಕು. ಮಾತಿನ ಮೌಲ್ಯವು ನಮ್ಮ ವ್ಯಕಿತ್ವವನ್ನು ತಿಳಿಸುತ್ತದೆ. ಮಾತು ಮುತ್ತಾಗಬೇಕಾದರೆ ಮನಸ್ಸು ಸ್ವಾತಿಮಳೆಯಂತೆ ಎಲ್ಲರಿಗೂ ಹಿತವನ್ನೇ ಬಯಸಬೇಕು. ಮಾತು ನವನೀತವಾಗಲು ವಿನೀತಭಾವವು ನಮ್ಮರಲಿರಬೇಕು ಎಂದು ಆಳ್ವಾಸ್ ಕಾಲೇಜಿನ ಕನ್ನಡ ಸಹಾಯಕ ಪ್ರಾಧ್ಯಾಪಕ ಪ್ರೊ ಹರೀಶ್ ಟಿ.ಜಿ ಯವರು ಹೇಳಿದರು. ಕಾರ್ಯಕ್ರಮದ ಅಧ್ಯಕ್ಷತೆಯನ್ನು ತಾಲೂಕು ಸಮಿತಿ ಗೌರವಾಧ್ಯಕ್ಷ ನಿತ್ಯಾನಂದ ಪೈ ಯವರು ವಹಿಸಿದ್ದರು. ಕಾರ್ಯಕ್ರಮವನ್ನು ಜೊತೆಕಾರ್ಯದರ್ಶಿ ದೇವದಾಸ್ ಕೆರೆಮನೆ ನಿರೂಪಿಸಿ ಶೈಲಜಾ ಹೆಗ್ಡೆ ಯವರು ಅತಿಥಿಗಳನ್ನು. ಪರಿಚಯಿಸಿದರು. ಅಧ್ಯಕ್ಷೆ ಶ್ರೀಮತಿ ಮಿತ್ರಪ್ರಭಾ ಹೆಗ್ಡೆಯವರು ಸ್ವಾಗತಿಸಿ ಕಾರ್ಯದರ್ಶಿ ಗಣೇಶ್ ಜಾಲ್ಸೂರು ಧನ್ಯವಾದ ವಿತ್ತರು. ಜ್ಯೋತ್ಸ್ನಾ ಶೆಣೈ ಯವರು ಪ್ರಾರ್ಥನೆಯನ್ನು ನೆರವೇರಿಸಿದರು. ಕಾರ್ಯಕ್ರಮವು ಐಕ್ಯಮಂತ್ರದೊAದಿಗೆ ಸುಸಂಪನ್ನಗೊAಡಿತು.

ವರದಿ : ಅರುಣ ಭಟ್ ಕಾರ್ಕಳ

error: