ಕಾರ್ಕಳ:- ಕಾರ್ಕಳಕ್ಕೆ ಆಗಮಿಸಿದ ಶಿವಮೊಗ್ಗ ಲೋಕಸಭಾ ಸದಸ್ಯ ರಾಘವೇಂದ್ರ ಯಡಿಯೂರಪ್ಪ ಕಾರ್ಕಳದ ಬಿ. ಜೆ. ಪಿ. ಹಿರಿಯ ಮುಖಂಡ ಕೋಶಾಧಿಕಾರಿ ದಿ. ಪಾಂಡುರoಗ ಪ್ರಭು ರವರ ಸುಪುತ್ರ ರವಿ ಪ್ರಕಾಶ್ ಪ್ರಭು ರವರ ಜೋಡು ರಸ್ತೆ ಪೂರ್ಣಿಮಾ ಸಿಲ್ಕ್ಸ್ ಗೆ ಆಗಮಿಸಿದರು.
ಈ ಸಂದರ್ಭದಲ್ಲಿ ರಾಘವೇಂದ್ರ ಯಡಿಯೂರಪ್ಪರವರನ್ನು ರವಿ ಪ್ರಕಾಶ್ ಪ್ರಭುರವರು ಶಾಲು ಹೊದಿಸಿ ಫಲಪುಷ್ಪ ನೀಡಿ ಗೌರವಿಸಿ ಜೋಡು ರಸ್ತೆ ಯಲ್ಲಿರುವ ಪ್ರೈಮ್ ಮಾಲ್ ನಲ್ಲಿ ಮಾರ್ಚ್ ೧೦ ರಂದು ಸಚಿವ ಸುನಿಲ್ ಕುಮಾರ್, ಶ್ರೀ ಕ್ಷೇತ್ರ ಧರ್ಮಸ್ಥಳ ಹರ್ಷೇಂದ್ರ ಕುಮಾರ್, ತುಳು ಚಿತ್ರ ನಟ ಅರವಿಂದ್ ಬೋಳಾರ್ ರವರಿಂದ ಶುಭಾರಂಭಗೊಳ್ಳಲಿರುವ ಪೂರ್ಣಿಮಾ ಲೈಫ್ ಸ್ಟೈಲ್ ನ ಅಮಂತ್ರಣ ಪತ್ರಿಕೆ ನೀಡಿದರು.
ಈ ಸಂದರ್ಭದಲ್ಲಿ ರಾಘವೇಂದ್ರ ಯಡಿಯೂರಪ್ಪ ನೂತನವಾಗಿ ಶುಭಾರಂಭ ಗೊಳ್ಳಲಿರುವ ಪೂರ್ಣಿಮಾ ಲೈಫ್ ಸ್ಟೈಲ್ ಗೆ ಶುಭ ಕೋರಿದರು.
ಕಾರ್ಕಳದಲ್ಲಿ ೧೯೫೦ರಲ್ಲಿ ಆರಂಭ ಗೊಂಡ ಸುಪ್ರಸಿದ್ದ ಬಟ್ಟೆ ಮಳಿಗೆ ಪೂರ್ಣಿಮಾ ಕ್ಲಾತ್ ಶಾಪ್ ಹಾಗೂ ಕಾರ್ಕಳದಲ್ಲಿ ಪ್ರಪ್ರಥವಾಗಿ ಅರ್.ಎಸ್,ಎಸ್ ಶಾಖೆ ಆರಂಭ ಗೊಂಡ ಮನೆ “ಕೇಶವ ಕೃಪಾ” ಕ್ಕೆ ಭೇಟಿ ನೀಡಿದ ಮಾಜಿ ಪ್ರಧಾನಿ ಅಟಲ್ ಬಿಹಾರಿ ವಾಜಪೇಯಿ, ಮಾಜಿ ಪ್ರಧಾನಿ ಚಂದ್ರಶೇಖರ್, ಮಾಜಿ ಕೇಂದ್ರ ಸಚಿವರುಗಳಾದ ಜಾರ್ಜ್ ಫರ್ನಾಂಡಿಸ್, ಸುಷ್ಮಾ ಸ್ವರಾಜ್, ಮಾಜಿ ಮುಖ್ಯ ಮಂತ್ರಿ ರಾಮ ಕೃಷ್ಣ ಹೆಗ್ಗಡೆ, ರಾಜ್ಯ ಸರ್ಕಾರದ ಗೃಹ ಸಚಿವ ಡಾ.ವಿ. ಎಸ್. ಆಚಾರ್ಯ ರವರ ಸವಿ ನೆನಪು ಗಳನ್ನು ಉಡುಪಿ ಜಿಲ್ಲಾ ಬಿ.ಜೆ.ಪಿ ಯುವಮೋರ್ಚಾ ಮಾಜಿ ಉಪಾಧ್ಯಕ್ಷ, ಜೋಡು ರಸ್ತೆ ಪೂರ್ಣಿಮಾ ಸಿಲ್ಕ್ಸ್ ಮಾಲಕ ರವಿ ಪ್ರಕಾಶ್ ಪ್ರಭು ರವರು ರಾಘವೇಂದ್ರ ಯಡಿಯೂರಪ್ಪ ರವರಿಗೆ ತಿಳಿಸಿದರು.
ಈ ಸಂದರ್ಭದಲ್ಲಿ ಮಾರುತಿ ಗ್ಯಾಸ್ ಮಾಲಕ ನಿತ್ಯಾನಂದ ಪೈ , ಬೈಂದೂರಿನ ಪ್ರಖ್ಯಾತ ಉದ್ಯಮಿ ವೆಂಕಟೇಶ್ ಕಿಣಿ, ಪ್ರೈಮ್ ಮಾಲ್ ನ ಪಾಲುದಾರರಾದ ಸಂಪತ್ ಜೈನ್, ಸಚಿನ್ ವಿ.ಸಾಲಿಯಾನ್, ಪೂರ್ಣಿಮಾ ಸಿಲ್ಕ್ಸ್ ನ ಸಿಬ್ಬಂದಿ ಗಳು ಉಪಸ್ಥಿತ ರಿದ್ದರು.
More Stories
ಕಾರ್ಕಳ ಪರಶುರಾಮ ಮೂರ್ತಿ ಸಾಕ್ಷಿ ನಾಶ ಯತ್ನ: ಉದಯ ಕುಮಾರ್ ಶೆಟ್ಟಿ
ಅಜೆಕಾರು ವಿಷ್ಣುಮೂರ್ತಿ ದೇವಸ್ಥಾನದ ವಾರ್ಷಿಕ ರಥೋತ್ಸವ: ಸಾವಿರಾರು ಭಕ್ತರು ಭಾಗಿ
ಕಾರ್ಕಳ ಮುಸ್ಲಿಂ ಬಾಂಧವರಿAದ ರಂಜಾನ್ ವಿಶೇಷ ಪಾರ್ಥನೆ,