May 19, 2024

Bhavana Tv

Its Your Channel

ಕಾರ್ಕಳ ಉತ್ಸವದಲ್ಲಿ ಗೂಡುದೀಪ ಉತ್ಸವ

ಕಾರ್ಕಳ; ತುಳು ನಾಡಿನ ಸಂಗತಿಗಳನ್ನು ನೋಡಿ ಅನುಭವಿಸುವ ಮಾನ್ಯತೆ ನೀಡುವ ಕಾರ್ಕಳ ಉತ್ಸವ ವಿಶಿಷ್ಟ ಪ್ರಯತ್ನ.ಸಚಿವ ಸುನಿಲ್ ಕುಮಾರ್ ಶಿಶುವಿನಿಂದ ವೃದ್ದರವರೆಗೂ ಅವಕಾಶ ಕಲ್ಲಿಸಿ ನೀಡಿದ್ದಾರೆ ಎಂದು ಜಿಲ್ಲಾ ರಾಜ್ಯೋತ್ಸವ ಪ್ರಶಸ್ತಿ ಪುರಸ್ಜ್ರತ ಉಗ್ಗಪ್ಪ ಪರವ ಹೇಳಿದರು.


ಕಾರ್ಕಳ ಉತ್ಸವ ಪ್ರಯುಕ್ತ ಪೆರ್ವಾಜೆ ಶಾಲೆಯಲ್ಲಿ ಗೂಡು ದೀಪ ಉತ್ಸವ ಉದ್ಘಾಟಿಸಿ ಅವರು ಮಾತನಾಡಿದರು. ಉದ್ಯಮಿ ಮಹಾವೀರ ಹೆಗ್ಡೆ ಸ್ವಿಚ್ ಅದಮುವ ಮೂಲಕ ಗೂಡು ದೀಪ ಬೆಳಗಿಸಿದರು.

ಪುರಸಭೆ ಅಧ್ಯಕ್ಷೆ ಸುಮಾಕೇಶವ್, ಗೇರು ಅಭಿವ್ರದ್ದಿ ನಿಗಮದ ಅಧ್ಯಕ್ಷ ಮಣಿರಾಜ್ ಶೆಟ್ಟಿ, ಅಂಗನವಾಡಿ ಕಾರ್ಯಕರ್ತೆಯರ ಸಂಘದ ತಾ.ಅಧ್ಯಕ್ಷೆ ಪದ್ಮಾವತಿ, ಆಶಾ ಕಾರ್ಯಕರ್ತೆಯರ ಸಂಘದ ತಾ.ಅಧ್ಯಕ್ಷೆ ಶೋಭಾ ಸತೀಶ ಭಂಡಾರಿ, ಪೆರ್ವಾಜೆ ಶಾಲೆಯ ಪ್ರೌಢಶಾಲೆ ಹಾಗೂ ಪ್ರಾಥಮಿಕ ಶಾಲೆ ಶಿಕ್ಷಕಿಯರಾದ ಹರ್ಷಿಣಿ, ಲಕ್ಷ್ಮಿ ಹೆಗ್ಡೆ, ಕನ್ನಡ ಮತ್ತು ಸಂಸ್ಕ್ರತಿ ಇಲಾಖೆ ಮಂಗಳೂರು ಜಿಲ್ಲೆಯ ಅಧಿಕಾರಿ ರಾಜೇಶ್, ಕಾರ್ಮಿಕ ಇಲಾಖೆ ಅಧಿಕಾರಿ ಪ್ರಸನ್ನಕುಮಾರ, ಪ್ರಮೀಳಾ ಹರೀಶ್ ಸ್ವಾಗತಿಸಿ, ರಾಮಚಂದ್ರ ಮುನಿಯಾಲು ನಿರೂಪಿಸಿದರು.

126 ಶಾಲೆಗಳ 200ಕ್ಕೂ ಅಧಿಕ ಗೂಡು ದೀಪಗಳು ಪ್ರದರ್ಶನಗೊಂಡವು

ವರದಿ: ಅರುಣ ಭಟ್ ಕಾರ್ಕಳ

error: