April 29, 2024

Bhavana Tv

Its Your Channel

ಅಭ್ಯುದಯ ಕ್ರೆಡಿಟ್ ಕೋ.ಆಪರೇಟಿವ್ ಸೊಸೈಟಿ ಲಿ.ಇದರ 24ನೇ ವರ್ಷದ ವಾರ್ಷಿಕ ಮಹಾಸಭೆ

ಕಾರ್ಕಳ:- ಅಭ್ಯುದಯ ಕ್ರೆಡಿಟ್ ಕೊ. ಆಪರೇಟಿವ್ ಸೊಸೈಟಿ ಲಿ.ಕಾರ್ಕಳ ಇದರ 2021/2022ನೇಯ ಸಾಲಿನ ವಾರ್ಷಿಕ ಮಹಾಸಭೆ ಯು ಬುಧವಾರ ಶ್ರೀ ವಿಶ್ವೇಶ್ವರ ವೇಣುಗೋಪಾಲ ದೇವಸ್ಥಾನ ಅನಂತಶಯ ಕಾರ್ಕಳ ಇಲ್ಲಿ ಐವನ್ ಪಿಂಟೋ ಅಧ್ಯಕ್ಷರ ನೇತೃತ್ವದಲ್ಲಿ ಜರುಗಿತು. ಇವರು ಸಭೆಯನ್ನು ಉದ್ದೇಶಿಸಿ ಸಂಘದ ಸಾಧನೆಗಳ ಬಗ್ಗೆ
ತಿಳಿಸಿದರು.
2021/2022ನೇಯ ಸಾಲಿನ ವ್ಯವಹಾರ ರೂ 64.17ಕೋಟಿ ಯಲ್ಲಿ ಲಾಭ ರೂಪಾಯಿ 32.36 ಲಕ್ಷದಲ್ಲಿ ಸದಸ್ಯರಿಗೆ ಶೇ 12% ಡಿವಿಡೆಂಡ್ ನೀಡುವ ಬಗ್ಗೆ ಸಭೆಯಲ್ಲಿ ಘೋಷಿಸಿದರು.

ಸಂಘದ ಸರ್ವತೋಮುಖ ಅಭಿವೃದ್ಧಿಗೆ ಸಹಕರಿಸಿದ ಆಡಳಿತ ಮಂಡಳಿಗೆ ಮತ್ತು ಸಿಬಂದಿಗಳಿಗೆ ,ಸದಸ್ಯರಿಗೆ ಕೃತಜ್ಞತೆ ಸಲ್ಲಿಸಿದರು ಸಂಘದ ಉಪಾಧ್ಯಕ್ಷ ಸುರೇಂದ್ರ ಸೂರಿ,ಮಾಜಿ ಅಧ್ಯಕ್ಷ ಟಿ.ಕೆ.ರಘುವೀರ್, ನಿರ್ದೇಶಕರು ಗಳಾದ ಟಿ.ರಮಾನಾಥ ನಾಯಕ್ ,ಉಮೇಶ್ ರಾವ್,ಶ್ರೀನಿವಾಸ್ ಪ್ರಭು,ಸುಧಾಕರ್ ಶೆಟ್ಟಿ,ದಿನೇಶ್,ಶ್ರೀಮತಿ ಲಕ್ಷ್ಮೀ ವಿ.ಪೈ ಮತ್ತು ಶ್ರೀಮತಿ ಸುಜಾತ ಏನ್.ರಾವ್, ವೇದಿಕೆಯಲ್ಲಿ ಉಪಸ್ಥಿತರಿದ್ದರು.ಸಂಘದ ವಾರ್ಷಿಕ ವರದಿಯನ್ನು ಮುಖ್ಯಕಾರ್ಯ ನಿರ್ವಾಹಕ ರಾದ ಶ್ರೀಮತಿ ದಿವ್ಯಾ ಎಂ .ಪೈ ವಾಚಿಸಿದರು. ರೂಪಕ್ ಎಂ.ಶಾಖಾ ಮ್ಯಾನೇಜರ್ ಧನ್ಯವಾದ ಸಮರ್ಪಣೆ ಗೈದರು.

ವರದಿ: ಅರುಣ ಭಟ್ ಕಾರ್ಕಳ

error: