May 18, 2024

Bhavana Tv

Its Your Channel

ಲವ್ ಜಿಹಾದ್, ಭಯೋತ್ಪಾದನೆಯ ವಿರುದ್ಧ ಉಗ್ರಹೋರಾಟ ಕೆ.ಆರ್.ಸುನೀಲ್ ಭಜರಂಗದಳ ಪ್ರಾಂತ ಸಂಯೋಜಕ ಎಚ್ಚರಿಕೆ

ವರದಿ: ಅರುಣ ಭಟ್ ಕಾರ್ಕಳ

ಕಾರ್ಕಳ: ಪ್ರೀತಿ ಪ್ರೇಮದ ನಾಟಕವಾಡಿ ಹೆಣ್ಣುಮಕ್ಕಳನ್ನು ಭಯೋತ್ಪಾದನೆ, ದೇಶದ್ರೋಹದ ಕೃತ್ಯಗಳಲ್ಲಿ ಬಳಸುತ್ತಿರುವುದಕ್ಕೆ ಬಜರಂಗದಳ ತೀವ್ರವಾಗಿ ಖಂಡಿಸುತ್ತದೆ. ಅದರ ವಿರುದ್ಧ ಉಗ್ರ ಹೋರಾಟಕ್ಕೆ ಸರ್ವ ಸನ್ನದ್ಧವಾಗಿದೆ ಎಂದು ಭಜರಂಗದಳ ಪ್ರಾಂತ ಸಂಯೋಜಕ ಸುನೀಲ್ ಕೆ.ಆರ್ ಸರಕಾರಕ್ಕೆ ಎಚ್ಚರಿಕೆ ನೀಡಿದ್ದಾರೆ.
ನಗರದ ಪ್ರಕಾಶ್ ಹೋಟೆಲ್‌ನಲ್ಲಿ ಆಯೋಜಿಸಿದ ಸುದ್ದಿಗೋಷ್ಠಿಯನ್ನು ಉದ್ದೇಶಿಸಿ ಮಾತನಾಡಿದ ಅವರು ಭಜರಂಗದಳವು ಮುಸ್ಲಿಂಮರ ಈ ಕೃತ್ಯಗಳ ವಿರುದ್ಧ ನಿರಂತರವಾಗಿ ಹಿಂದಿನಿAದಲೂ ವಿರೋಧಿಸಿ ಬಂದಿದೆ ಎಂದರು.
ಕರಾವಳಿ ಭಾಗದಲ್ಲಿ ಲವ್ ಜಿಹಾದ್ ಹೆಸರಿನಲ್ಲಿ ಆಶಾಂತಿಯನ್ನು ಮೂಡಿಸಲಾಗುತ್ತದೆ. ಒಂದೇ ತಿಂಗಳಿನಲ್ಲಿ 70 ಲವ್ ಜಿಹಾದ್ ಪ್ರಕರಣಗಳು ಬೆಳಕಿಗೆ ಬಂದಿದೆ. ಕಾರ್ಕಳದಲ್ಲಿ ಚಾಲಕನೊಬ್ಬ 30 ವಿದ್ಯಾರ್ಥಿಗಳನ್ನು ಲವ್ ಜಿಹಾದ್ ಪ್ರಕರಣದಲ್ಲಿ ವಿದ್ಯಾರ್ಥಿನಿಗಳನ್ನು ಸಿಲುಕಿಸುವ ಪ್ರಯತ್ನ ನಡೆಸುತ್ತಿದ್ದಾನೆ. ಈಗಾಗಲೇ ಅಂತಹ ಅಮಾಯಕ ವಿದ್ಯಾರ್ಥಿನಿಯರ ಮೊಬೈಲ್ ನಂಬ್ರಗಳನ್ನು ಆರೋಪಿ ಬಳಸಿಕೊಂಡು ಬ್ಲಾಕ್‌ಮೈಲ್ ಮಾಡಿರುವ ಅಂಶ ಬೆಳಕಿಗೆ ಬಂದಿದೆ ಎಂದರು.
ಇಸ್ಲಾಮಿನ ಇಂತಹ ಕೃತ್ಯಗಳ ಬಗ್ಗೆ ಬಗರಂಗದಳ ಹೋರಾಟ ನಡೆಸುತ್ತಾ ಬಂದಿದ್ದು, ಪೊಲೀಸರು ಸೂಕ್ತ ಕ್ರಮಕೈಗೊಳ್ಳದಿದ್ದರೆ ಉಗ್ರ ಹೋರಾಟ ನಡೆಸಲಾಗುವುದು. ಅಗತ್ಯ ಬಿದ್ದಲ್ಲಿ ತಕ್ಕ ಉತ್ತರ ನೀಡುವುದಕ್ಕೂ ಹಿಂದೇಟು ಹಾಕಲಾರದೆಂದು ಸರಕಾರಕ್ಕೆ ಎಚ್ಚರಿಕೆ ನೀಡಿದ್ದಾರೆ.

ಸರಕಾರ ಯಾವುದೇ ಪಕ್ಷಕ್ಕೆ ಸೇರಿರಲಿ
ಸರಕಾರ ಯಾವುದೇ ಪಕ್ಷವಿರಲಿ. ಬಿಜೆಪಿ-ಕಾಂಗ್ರೆಸ್ ಅಥವಾ ಇತರ ಇರಲಿ ಅದು ನಮಗೆ ಮುಖ್ಯವೂ ಅಲ್ಲ. ಹೆಣ್ಣುಮಕ್ಕಳನ್ನು ವಶೀಕರಿಸಿಕೊಳ್ಳುವ ಷಡ್ಯಂತ್ರದ ವಿರುದ್ಧ ಹಿಂದಿನಿAದಲೂ ಹೋರಾಟ ಮಾಡುತ್ತಿದ್ದೇವೆ. ಲವ್ ಜಿಹಾದ್, ಲ್ಯಾಂಡ್ ಜಿಹಾದ್ ಹಾಗೂ ಭಯೋತ್ಸಾಪದನೆಯ ವಿರುದ್ಧ ಕಠಿಣ ಕಾನೂನು ಅನುಷ್ಠಾನವಾಗಲೇ ಬೇಕು ಎಂದು ಅವರು ಇದೇ ಸಂದರ್ಭದಲ್ಲಿ ಸರಕಾರವನ್ನು ಒತ್ತಾಯಿಸಿದ್ದಾರೆ.

ತಾಲೂಕಿಕೊಂದು ಮಹಿಳಾ ಠಾಣೆ ಆರಂಭಿಸುವAತೆ ಒತ್ತಾಯ
ಲವ್ ಜೀಹಾದ್ ಸೇರಿದಂತೆ ಇತರ ಮಹಿಳಾ ದೌರ್ಜನ್ಯ ಪ್ರಕರಣಗಳು ಹೆಚ್ಚುತ್ತಿರುವುದು ಕಳವಳಕಾರಿಯಾಗಿದೆ. ಅದನ್ನು ನುಗ್ರಹಿಸುವ ನಿಟ್ಟಿನಲ್ಲಿ ಪ್ರತಿ ತಾಲೂಕು ಮಟ್ಟದಲ್ಲಿ ಮಹಿಳಾ ಪೊಲೀಸ್ ಠಾಣೆಯನ್ನು ಆರಂಭಿಸುವAತೆ ಇದೇ ಸಂದರ್ಭದಲ್ಲಿ ಬಜರಂಗದಳ ಪ್ರಾಂತ ಸಂಯೋಜಕ ಸುನೀಲ್ ಕೆ.ಆರ್. ಸರಕಾರವನ್ನು ಒತ್ತಾಯಿಸಿದ್ದಾರೆ.

ವಿಶ್ವ ಹಿಂದು ಪರಿಷತ್ತ್ ಉಡುಪಿ ಜಿಲ್ಲಾ ಉಪಾಧ್ಯಕ್ಷ ಅಶೋಕ್ ಪಾಲಡ್ಕ, ವಿ.ಹಿಂ.ಪ ಜಿಲ್ಲಾ ಸಹ ಕಾರ್ಯದರ್ಶಿ ಸುಧೀರ್ ನಿಟ್ಟೆ, ಬಜರಂಗದಳ ಜಿಲ್ಲಾ ಸಹ ಸಂಚಾಲಕ ಚೇತನ ಪೇರಲ್ಕೆ, ಜಿಲ್ಲಾ ಗೋರಕ್ಷಾ ಪ್ರಮುಖ ಸುನೀಲ್ ನಿಟ್ಟೆ, ಬಜರಂಗದಳ ತಾಲೂಕು ಸಂಚಾಲಕ ಮನೋಜ್, ಕಾರ್ಕಳ ತಾಲೂಕು ವಿ.ಹಿಂ.ಪ ಕಾರ್ಯದರ್ಶಿ ಪ್ರಸಾದ್ ಸುದ್ದಿಗೋಷ್ಠಿಯಲ್ಲಿ ಉಪಸ್ಥಿತರಿದ್ದರು.

error: