ಕುಂದಾಪುರ ; ಮನುವಿಕಾಸ ಸಂಸ್ಥೆ ಶಿರಸಿ ಮತ್ತು ಹೆಚ್ ಡಿ ಎಫ್ ಸಿ ಪರಿವರ್ತನ ಇವರ ಸಹಯೋಗದಲ್ಲಿ ದಿನಾಂಕ 6 ಮತ್ತು 7 – ಏಪ್ರಿಲ್-2023 ರಂದು ಉಡುಪಿ ಜಿಲ್ಲೆಯ ಕುಂದಾಪುರ ತಾಲೂಕಿನ ತ್ರಾಸಿಯ ಕೊಂಕಣ ಖಾರ್ವಿ ಸಭಾಭವನದಲ್ಲಿ ಮೀನುಗಾರ ಮಹಿಳೆಯರಿಗೆ 2 ದಿನದ ತರಬೇತಿ ಕಾರ್ಯಾಗಾರವನ್ನು ಹಮ್ಮಿಕೊಳ್ಳಲಾಗಿತ್ತು. ಈ ಕಾರ್ಯಕ್ರಮದಲ್ಲಿ 09 ಸಂಘದಿAದ 32 ಮಹಿಳೆಯರು ತರಬೇತಿಯಲ್ಲಿ ಹಾಜರಿದ್ದರು. ನವೀನ್ ನಾಯ್ಕ ಅತಿಥಿಗಳಿಗೆ ಸ್ವಾಗತ ಕೋರಿದರು. ತರಬೇತಿದಾರರಾಗಿ ಆಗಮಿಸಿದ ಶ್ರೀ ರಾಘವೇಂದ್ರ ಆಚಾರಿ ಅವರು ಸಮಯ ಪಾಲನೆ ಶಿಸ್ತು ಕ್ರಮ, ಅಧ್ಯಕ್ಷ ಕಾರ್ಯದರ್ಶಿಗಳ ಕರ್ತವ್ಯಗಳನ್ನು ಹೇಳಿದರು, ನಂತರ ಮನುವಿಕಾಸ ಆಫರೇಷನ್ ಹೆಡ್ ಆದ ಶ್ರೀಮತಿ ಗೀತಾ ಪಾಟೀಲ್ ಅವರು ಚೆಕ್ ಬುಕ್ ಬರೆಯುವುದು ಠರಾವು ಬರೆಯುವುದು ಹಣ ಪಾವತಿ ತುಂಬುವ ಬಗ್ಗೆ ಮಾಹಿತಿ ನೀಡಿದರು.
ನವೀನ್ ನಾಯ್ಕ ನಿರೂಪಣೆ ಮಾಡಿದರು, ಮಿಥುನ್ ನಾಯ್ಕ ,ನವಿನ್ ನಾಯ್ಕ್ , ಕಾರ್ಯಕ್ರಮವನ್ನು ಆಯೋಜಿಸಿದರು . ಮನು ವಿಕಾಸ ಸಿಬ್ಬಂದ್ದಿ ನಾಗರಾಜ್ ಕೆ ಹಾಜರಿದ್ದರು..
ವರದಿ ; ರಾಘವೇಂದ್ರ ಆಚಾರಿ, ಕುಂದಾಪುರ.
More Stories
ಕಾರು ಅಪಘಾತ ಓರ್ವ ಮಹಿಳೆ ಮೃತ, ಇಬ್ಬರು ಗಂಭೀರ
ಶ್ರೀ ಸಿದ್ಧಿವಿನಾಯಕ ವಸತಿ ಶಾಲೆ, ಹಟ್ಟಿಅಂಗಡಿಗೆ, ಶ್ರೀ ಶ್ರೀ ರಾಘವೇಶ್ವರ ಭಾರತೀ ಸ್ವಾಮೀಜಿಗಳ ಭೇಟಿ
ಶ್ರೀ ಸಿದ್ಧಿವಿನಾಯಕ ವಸತಿ ಶಾಲೆ, ಹಟ್ಟಿಯಂಗಡಿಯಲ್ಲಿ77ನೇ ಸ್ವಾತಂತ್ರ್ಯ ದಿನದ ಸಂಭ್ರಮಾಚರಣೆ