May 20, 2024

Bhavana Tv

Its Your Channel

ಭಟ್ಕಳದ ಬೆಂಗ್ರೆಯಲ್ಲಿ ಪೆಟ್ರೋಲ್ ಮತ್ತು ಡಿಸೇಲ್ ದರ ಏರಿಕೆ ನೀತಿ ವಿರುದ್ದ ಭಟ್ಕಳ್ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಸಂತೋಷ್ ನಾಯ್ಕ ನೇತ್ರತ್ವದಲ್ಲಿ ಪ್ರತಿಭಟನೆ

ಭಟ್ಕಳ-ರಾಜ್ಯ ಸರ್ಕಾರವು ಜನರ ಸಂಕಷ್ಟದ ಹಸಿಗಾಯದ ಮೇಲೆ ಪೆಟ್ರೋಲ್ ಮತ್ತು ಡಿಸೇಲ ದರ ಏರಿಕೆಯ ಬರೆ ಎಳೆದಿದೆ. ಈಗಾಗಲೇ ಕೊರೊನಾ ಸೋಂಕು, ಲಾಕ್ ಡೌನ್ ನಿಂದಾಗಿ ಜನರು ಸಂಕಷ್ಟ ಅನುಭವಿಸುತ್ತಿದ್ದಾರೆ.
ಉತ್ಪಾದನೆಯಿಲ್ಲದೆ ಉದ್ಯಮಿಗಳಿಗೂ ಕಷ್ಟ-ನಷ್ಟ ಉಂಟಾಗಿದೆ ಇಂತಹ ಸಂದರ್ಭದಲ್ಲಿ ಪೆಟ್ರೋಲ್ ಮತ್ತು ಡೀಸೆಲ್ ದರವನ್ನು ನಿರಂತರವಾಗಿ ಏರಿಸುವ ಮೂಲಕ ಕೊರೊನಾದಿಂದ ಸಂಕಷ್ಟದಲ್ಲಿರುವ ಜನರ ಗಾಯದ ಮೇಲೆ ಬರೆ ಹಾಕುತ್ತಿರುವ ಕೇಂದ್ರ ಸರ್ಕಾರದ ವಿರುದ್ಧ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷರಾದ ಸಂತೋಷ ನಾಯ್ಕರ ನೇತ್ರತ್ವದಲ್ಲಿ ಬೆಂಗ್ರೆ ಪೆಟ್ರೋಲ್ ಬಂಕ್ ಮುಂಭಾಗ ಪ್ರತಿಭಟನೆ ನಡೆಸಿದರು.
ಈ ಪ್ರತಿಭಟನೆಯಲ್ಲಿ ಮಾಜಿ ಶಾಸಕ ಮಂಕಾಳ ವೈದ್ಯ, ಜಿಲ್ಲಾ ಪಂಚಾಯತ ಮಾಜಿ ಉಪಾಧ್ಯಕ್ಷರಾದ ರಾಮ ಮೊಗೇರ, ಜಿಲ್ಲಾ ಪಂಚಾಯತ ಮಾಜಿ ಸದಸ್ಯರಾದ ಸಿಂಧು ಭಾಸ್ಕರ, ತಾಲೂಕ ಪಂಚಾಯತ ಮಾಜಿ ಸದಸ್ಯರಾದ ವಿಷ್ಣು ದೇವಡಿಗ ಅಬ್ದುಲ್ ಮಾಜಿದ್, ತಿಮ್ಮಪ್ಪ ನಾಯ್ಕ, ರವಿಶಂಕರ ನಾಯ್ಕ, ನಾಸೀರ ಶೇಖ್, ಸೇರಿದಂತೆ ಹಲವು ಮುಖಂಡರು ಈ ಪ್ರತಿಭಟನೆಯಲ್ಲಿ ಭಾಗವಹಿಸಿ ಸರಕಾರದ ವಿರುದ್ಧ ತಮ್ಮ ಆಕ್ರೋಶ ಹೊರ ಹಾಕಿದರು.

error: