May 14, 2024

Bhavana Tv

Its Your Channel

ವಿಧಾನ ಪರಿಷತ್ ಚುನಾವಣೆಯ ಪ್ರಚಾರ ಸಭೆಯಲ್ಲಿ ಎಂಎಲ್‌ಸಿ ಬಿ ಕೆ ಹರಿಪ್ರಸಾದ

ಕುಮಟಾ : ಬ್ಲಾಕ್ ಕಾಂಗ್ರೆಸ್ ಕಚೇರಿಯಲ್ಲಿ ನಡೆದ ವಿಧಾನ ಪರಿಷತ್ ಚುನಾವಣೆಯ ಪ್ರಚಾರ ಸಭೆಯಲ್ಲಿ ಮಾತನಾಡಿದ ಎಂಎಲ್‌ಸಿ ಬಿ ಕೆ ಹರಿಪ್ರಸಾದ ಅವರು, ಕಾಂಗ್ರೆಸ್ ಅಭ್ಯರ್ಥಿ ಭೀಮಣ್ಣ ನಾಯ್ಕ ಅವರ ಪರ ಪ್ರಚಾರ ನಡೆಸಿದರು.

ಚುನಾವಣೆ ಬಂದಾಗ ಜಾತಿ, ಧರ್ಮದ ಹೆಸರಿನಲ್ಲಿ ರಾಜಕಾರಣ ಮಾಡಿ, ಜನರಲ್ಲಿ ಗೊಂದಲ ಸೃಷ್ಟಿಸುವುದೇ ಬಿಜೆಪಿಗರ ಜಾಯಮಾನವಾಗಿದೆ.. ಕಳೆದ ಎಂಎಲ್‌ಎ ಚುನಾವಣೆಯಲ್ಲಿ ಪರೇಶ ಮೇಸ್ತಾನ ಸಾವನ್ನು ಇಟ್ಟುಕೊಂಡು ರಾಜಕಾರಣ ಮಾಡಿದರು. ಇವತ್ತು ಕೇಂದ್ರ ಮತ್ತು ರಾಜ್ಯದಲ್ಲಿ ಇವರದ್ದೆ ಸರ್ಕಾರವಿದೆ. ಯಾಕೆ ಇನ್ನು ಪರೇಶ ಮೇಸ್ತಾನ ಪ್ರಕರಣವನ್ನು ಭೇದಿಸಿಲ್ಲ ಎಂದು ಪ್ರಶ್ನಿಸಿದ ಹರಿಪ್ರಸಾದ ಅವರು ರೈತ ವಿರೋಧಿ ನೀತಿಗಳಿಂದ ಒಂದು ವರ್ಷ ರೈತರು ಹೋರಾಟ ನಡೆಸುವಂತಾಯಿತು. ಅದೆಷ್ಟೊ ರೈತರು ತಮ್ಮ ಪ್ರಾಣ ಬಲಿದಾನ ನೀಡಿದ ಮೇಲೆ ಈ ದೇಶದ ಪ್ರಧಾನಿ ಕ್ಷಮೆ ಕೇಳುವ ಮೂಲಕ ಕೃಷಿ ಕಾಯ್ದೆಯನ್ನು ವಾಪಸ್ ಪಡೆದರು. ಚೀನಾವು ಭಾರತದ ಪ್ರದೇಶವನ್ನು ಅತಿಕ್ರಮಿಸಿಕೊಂಡಿದ್ದರೂ ಆ ಬಗ್ಗೆ ಛಕಾರ ಕೂಡ ಎತ್ತದೇ ಇರುವ ರಣಹೇಡಿ ಸರ್ಕಾರ ಎಂದು ಟೀಕಿಸಿದರು.

ಕುಮಟಾ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ವಿ ಎಲ್ ನಾಯ್ಕ, ಕಾಂಗ್ರೆಸ್ ಒಬಿಸಿ ರಾಜ್ಯ ಪ್ರಧಾನ ಕಾರ್ಯದರ್ಶಿ ರತ್ನಾಕರ ನಾಯ್ಕ, ಕಾಂಗ್ರೆಸ್ ಯುವ ಮುಖಂಡ ರವಿಕುಮಾರ ಶೆಟ್ಟಿ, ಜಿಪಂ ನಿಕಟಪೂರ್ವ ಸದಸ್ಯ ಪ್ರದೀಪ ನಾಯಕ, ಪ್ರಮುಖರಾದ ಯಶೋದರ ನಾಯ್ಕ, ಮಂಜುನಾಥ ನಾಯ್ಕ ಅಂಕೋಲಾ, ನಾಗೇಶ ನಾಯ್ಕ ಕಲಭಾಗ, ಮಹೇಶ ನಾಯ್ಕ ಭಟ್ಕಳ, ವಿನು ಜಾರ್ಜ್, ಸಚಿನ ನಾಯ್ಕ, ಸುರೇಖಾ ವಾರೇಕರ್, ಗಣಪತಿ ಶೆಟ್ಟಿ, ಮುಜಾಫರ್ ಶೇಖ್, ಚಂದ್ರಾಸ ನಾಯಕ, ಆನಂದು ನಾಯ್ಕ, ಅಶೋಕ ಗೌಡ, ವಿವಿಧ ಗ್ರಾಪಂಗಳ ಅಧ್ಯಕ್ಷರು, ಸದಸ್ಯರು, ಕಾರ್ಯಕರ್ತರು ಉಪಸ್ಥಿತರಿದ್ದರು.

error: