May 17, 2024

Bhavana Tv

Its Your Channel

ಆರೈಕೆ ಕೇಂದ್ರದಲ್ಲಿ ಇರುವ ಸಂತ್ರಸ್ತರಿಗೆ ಎಲ್ಲಾ ಸೌಕರ್ಯಗಳನ್ನು ವ್ಯವಸ್ಥಿತವಾಗಿ ತಲುಪಿಸಲಾಗಿದೆ-ಶಾಸಕ ಸುನೀಲ್ ನಾಯ್ಕ

ಹೊನ್ನಾವರ ; ತಾಲೂಕಿನಲ್ಲಿ ಸೃಷ್ಟಿ ಆಗಿರುವ ನೆರೆಹಾವಳಿಯಿಂದ ಜನರನ್ನು ಸುರಕ್ಷಿತ ಸ್ಥಳಗಳಿಗೆ ಸ್ಥಳಾಂತರಿಸಿ ಕಾಳಜಿ ಕೇಂದ್ರಗಳಲ್ಲಿ ಆರೈಕೆ ಮಾಡಲಾಗುತ್ತಿದೆ. ನಿನ್ನೆ ಆರೈಕೆ ಕೇಂದ್ರಗಳಿಗೆ ಶಾಸಕ ಸುನೀಲ್ ನಾಯ್ಕ ಬೇಟಿ ನೀಡಿದಾಗ ಆರೈಕೆ ಕೇಂದ್ರದಲ್ಲಿ ಸಂತ್ರಸ್ತರು ಕೆಲ ದೂರುಗಳನ್ನು ನೀಡಿದ ಹಿನ್ನೆಲೆಯಲ್ಲಿ ಸ್ಥಳದಲ್ಲೇ ಸಂಭAದಿಸಿದ ಅಧಿಕಾರಿಗಳಿಗೆ ಕೂಡಲೆ ಚಾಪೆ ದಿಂಬು ಮತ್ತು ಹೊದಿಕೆ ಹಾಗೂ ಪೌಷ್ಟಿಕ ಆಹಾರದ ವ್ಯವಸ್ಥೆ ಕಲ್ಪಿಸುವಂತೆ ತಾಕಿತು ಮಾಡಿದ್ದರು.
ಇಂದು ಶನಿವಾರ ಗುಂಡಿಬೈಲ್ ಮತ್ತು ಚಿಕ್ಕನಕೋಡು ಆರೈಕೆ ಕೇಂದ್ರದಲ್ಲಿ ಇರುವ ಸಂತ್ರಸ್ತರಿಗೆ ಎಲ್ಲಾ ಸೌಕರ್ಯಗಳನ್ನು ವ್ಯವಸ್ಥಿತವಾಗಿ ತಲುಪಿಸಲಾಗಿದೆ ಎಂದು ಶಾಸಕ ಸುನೀಲ್ ನಾಯ್ಕ ಮಾದ್ಯಮಕ್ಕೆ ತಿಳಿಸಿದ್ದಾರೆ.

error: