ಹೊನ್ನಾವರ : ರಾಮತೀರ್ಥದ ತುರ್ತು ಅಭಿವೃದ್ಧಿ ಕಾರ್ಯಗಳಿಗಾಗಿ ಚಿಕ್ಕ ನೀರಾವರಿ ಅನುದಾನದಲ್ಲಿ ೫೦ಲಕ್ಷ ರೂಪಾಯಿ ಯೋಜನೆ ರೂಪಿಸಿರುವುದಾಗಿ ಶಾಸಕ ದಿನಕರ ಶೆಟ್ಟಿ ತಿಳಿಸಿದ್ದಾರೆ.
ಮೂಲಭೂತ ಸೌಕರ್ಯವನ್ನು ಒದಗಿಸಲು ೨೫ಲಕ್ಷ ರೂಪಾಯಿ ಕಾಮಗಾರಿಗೆ ಟೆಂಡರ್ ಕರೆಯಲಾಗಿದ್ದು ಅಂಕೋಲೆಯ ಗುತ್ತಿಗೆದಾರರೊಬ್ಬರಿಗೆ ಕೆಲಸವಹಿಸಲಾಗಿದೆ. ಮಳೆ ಕಡಿಮೆಯಾದೊಡನೆ ಕಾಮಗಾರಿ ಆರಂಭಿಸಲು ಸೂಚಿಸಿದ್ದೇನೆ ಎಂದು ಅವರು ಹೇಳಿದ್ದಾರೆ. ರಾಮತೀರ್ಥದ ಪರಿಸರ ಮಾತ್ರವಲ್ಲ ಅದರ ಜಲಮೂಲದ ಸಂರಕ್ಷಣೆ ನಡೆಯಬೇಕು ಮತ್ತು ಅರಣ್ಯ ಇಲಾಖೆಯ ಪವಿತ್ರವನದ ಅಭಿವೃದ್ಧಿಯಾಗಬೇಕು. ಇದಕ್ಕೆ ರಾಮೇಶ್ವರ ದೇವಸ್ಥಾನದ ಆಡಳಿತದವರು ಅರ್ಚಕರು, ಶ್ರೀಧರಾಶ್ರಮದವರು ಸಿದ್ಧರಿದ್ದಾರೆ. ಅವರ ಅಭಿಪ್ರಾಯದೊಂದಿಗೆ ಸಾರ್ವಜನಿಕರು ಸಹಕಾರ ನೀಡಲಿದ್ದಾರೆ ಎಂಬುದನ್ನು ಶಾಸಕರ ಗಮನ ಸೆಳೆದಾಗ ಎಲ್ಲವನ್ನೂ ಸೇರಿಸಿಕೊಂಡು ಖಂಡಿತ ಅಭಿವೃದ್ಧಿ ಮಾಡೋಣ ಹೆಚ್ಚಿನ ಅನುದಾನ ಬೇಕಾದರೆ ಪ್ರವಾಸೋದ್ಯಮ ಇಲಾಖೆಯಿಂದ ಪಡೆದುಕೊಂಡು ಪ್ರವಾಸಿ ಮತ್ತು ತೀರ್ಥಕ್ಷೇತ್ರವನ್ನಾಗಿ ಮುಂದಿನ ದಿನಗಳಲ್ಲಿ ಅಭಿವೃದ್ಧಿಪಡಿಸೋಣ ಎಂದಿದ್ದಾರೆ.
ಈ ಸುದ್ದಿ ಸಾಮಾಜಿಕ ಜಾಲತಾಣದಲ್ಲಿ ಪ್ರಕಟವಾಗುತ್ತಿದ್ದಂತೆಯೇ ಬೆಂಗಳೂರು ಮೆಟ್ರೋ ರೈಲಿನ ಮುಖ್ಯ ಅಭಿಯಂತ ಸುಬ್ರಹ್ಮಣ್ಯ ಗುಡಿಗೇ ಸಹಿತ ರಾಜ್ಯದ ನಾನಾಭಾಗದಲ್ಲಿ ಉನ್ನತ ಸ್ಥಾನದಲ್ಲಿರುವ ಹಲವರು ಶಾಸಕರ ಅಭಿಪ್ರಾಯವನ್ನು ಹಾಗೂ ಅವರ ಕೊಡುಗೆಯನ್ನು ಸ್ವಾಗತಿಸಿ, ಅಭಿನಂದಿಸಿದ್ದಾರೆ. ಗುಣಮಟ್ಟದ ಕಾಮಗಾರಿಯಿಂದ ರಾಮತೀರ್ಥದ ಕೀರ್ತಿ ಬೆಳಗಿಲಿ ಎಂದು ಅವರು ಹಾರೈಸಿದ್ದಾರೆ.
More Stories
ನಾನು ಮಾಡಿದಷ್ಟು ಅಭಿವೃದ್ಧಿ ಕನಸಿನಲ್ಲೂ ಕಾಗೇರಿ ಮಾಡಿಲ್ಲ: ದೇಶಪಾಂಡೆ
ಉಳವಿಯಲ್ಲಿ ನಡೆದ ಕನ್ನಡ ಸಾಹಿತ್ಯ ಸಮ್ಮೇಳನದ ಲೆಕ್ಕಪತ್ರ ಮಂಡಿಸಿದ ಜಿಲ್ಲಾ ಕಸಾಪ
ಉಳವಿಯಲ್ಲಿ ಗಡಿ ಪ್ರಾಧಿಕಾರದಿಂದ ಸಾಂಸ್ಕೃತಿಕ ಸಂಭ್ರಮ