May 19, 2024

Bhavana Tv

Its Your Channel

ಮುರ್ಡೇಶ್ವರ ಸಮುದ್ರದಲ್ಲಿ ಇಬ್ಬರು ಪ್ರವಾಸಿಗರು ನೀರು ಪಾಲು

ಭಟ್ಕಳ: ಮುರ್ಡೇಶ್ವರಕ್ಕೆ ಬಂದಿದ್ದ ಎರಡು ಪ್ರತ್ಯೇಕ ಪ್ರವಾಸಿಗರ ತಂಡದಲ್ಲಿ ಇಬ್ಬರು ವ್ಯಕ್ತಿಗಳು ಸಮುದ್ರದಲ್ಲಿ ಮುಳುಗಿ ಸಾವನಪ್ಪಿದ್ದು ಘಟನೆ ರವಿವಾರ ಜರಗಿದೆ. 

ಬೆಂಗಳೂರಿನಿOದ ಮುರುಡೇಶ್ವರ ಪ್ರವಾಸಕ್ಕೆ ಎಂದು ಬಂದಿದ್ದ ೯ ಸ್ನೇಹಿತರು ತಂಡ ಈಜಲು ಸಮುದ್ರದ ನೀರಿಗೆ ಇಳಿದು ಅದರಲ್ಲಿ ಅಭಿಜಿತ್ ೨೯ ವರ್ಷ ಎನ್ನುವ ಯುವಕ ನೀರು ಪಾಲಾಗಿದ್ದಾನೆ. ಈತ ಪಶ್ಚಿಮ ಬಂಗಾಳದ ಮೂಲದ ವ್ಯಕ್ತಿ ಎಂದು ತಿಳಿದು ಬಂದಿದೆ ಬೆಂಗಳೂರಿನ ಖಾಸಗಿ ಕಂಪನಿಯಲ್ಲಿ ಉದ್ಯೋಗ ಮಾಡುತ್ತಿದ್ದರು ಎನ್ನಲಾಗಿದ್ದು ಸಮುದ್ರದಲ್ಲಿ ಭಾರಿ ಅಲೆಗಳೊಂದಿಗೆ ಈಜಾಡಾಲು ತೆರಳಿದಾಗ ಸಾವನ್ನಪ್ಪಿದು ಈತನ ಶವ ಪತ್ತೆಯಾಗಿದೆ ಹಾಗೂ ಕುಂದಾಪುರದ ಮದುವೆಗೆ ಎಂದು ಬಂದಿದ್ದ ಶಿವಮೊಗ್ಗ ಹಳೇ ಸೊರಬದ ೬ ಜನರು ಮದುವೆ ಮುಗಿಸಿ ಮುರ್ಡೇಶ್ವರಕ್ಕೆ ಪ್ರವಾಸಕ್ಕೆ ಬಂದು ಸಮುದ್ರದಲ್ಲಿ ಈಜಲು ತೆರಳಿದಾಗ ಅಲೆಗಳ ಅಬ್ಬರಕ್ಕೆ ಹಳೆ ಸೊರಬ ಮೂಲದ ಯುವಕ ಶರತ್ ೧೮ ವರ್ಷ ಕೊಚ್ಚಿ ಹೋಗಿದ್ದು ಇತನ ಶವವನ್ನು ಪತ್ತೆಯಾಗಿದೆ ಎಂದು ತಿಳಿದು ಬಂದಿದೆ.ಮುರುಡೇಶ್ವರ ಪೋಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ವರದಿ ; ಶೈಲೇಶ ವೈದ್ಯಾ. ಮುರ್ಡೇಶ್ವರ

error: