ಹೊನ್ನಾವರ ; ಆಗಸ್ಟ್ 17ರಂದು ನಡೆಸಿದ ಕೋವಿಡ್ 19 ಟೆಸ್ಟ್ ನಲ್ಲಿ ಹೊನ್ನಾವರದ ನಾಗರಿಕ ಪತ್ರಿಕೆಯ ಸಂಪಾದಕ ಕೃಷ್ಣಮೂರ್ತಿ ಹೆಬ್ಬಾರ್ ಅವರಿಗೆ ಕೋವಿಡ್ ಸೋಂಕು ದೃಢಪಟ್ಟ ಹಿನ್ನೆಲೆಯಲ್ಲಿ ಅವರು ಆರೋಗ್ಯಾಧಿಕಾರಿ ಗಳ ಮಾರ್ಗದರ್ಶನದಲ್ಲಿ 17 ದಿನಗಳ ಕಾಲ ಮನೆಯಲ್ಲೇ ಪ್ರತ್ಯೇಕ ಕೊಠಡಿಯಲ್ಲಿ ವಾಸವಿದ್ದು ಗುಣಮುಖರಾಗಿದ್ದಾರೆ ಎಂದು ವೈದ್ಯಾಧಿಕಾರಿಗಳು ತಿಳಿಸಿದ್ದಾರೆ. ಪ್ರಸ್ತುತ ಸಂಪಾದಕರು ತಮಗೆ ಕೋವಿಡ್ ಸೋಂಕು ದೃಢಪಟ್ಟ ತಕ್ಷಣ ಎಲ್ಲ ಮಾಧ್ಯಮ ಮಿತ್ರರಿಗೆ, ನಿಕಟವರ್ತಿ ಗಳಿಗೆ ವಿಷಯವನ್ನು ತಿಳಿಸಿ ದ್ದರಲ್ಲದೆ ಉಸಿರಾಟ ತೊಂದರೆ, ನೆಗಡಿ, ಜ್ವರ, ಕೆಮ್ಮಿನ ಯಾವುದೇ ಲಕ್ಷಣ ವಿಲ್ಲದ ಈ ಸೋಂಕನ್ನು ಸತತ ಪ್ರಾಣಾಯಾಮ, ವ್ಯಾಯಾಮ, ಆರೋಗ್ಯಕರ ದಿನಚರಿ ಗಳೊಂದಿಗೆ ಧೈರ್ಯದಿಂದ ಎದುರಿಸಿ ಗುಣಮುಖರಾಗಿ ರುವುದು ವಿಶೇಷವಾಗಿದೆ.
More Stories
ನಾನು ಮಾಡಿದಷ್ಟು ಅಭಿವೃದ್ಧಿ ಕನಸಿನಲ್ಲೂ ಕಾಗೇರಿ ಮಾಡಿಲ್ಲ: ದೇಶಪಾಂಡೆ
ಉಳವಿಯಲ್ಲಿ ನಡೆದ ಕನ್ನಡ ಸಾಹಿತ್ಯ ಸಮ್ಮೇಳನದ ಲೆಕ್ಕಪತ್ರ ಮಂಡಿಸಿದ ಜಿಲ್ಲಾ ಕಸಾಪ
ಉಳವಿಯಲ್ಲಿ ಗಡಿ ಪ್ರಾಧಿಕಾರದಿಂದ ಸಾಂಸ್ಕೃತಿಕ ಸಂಭ್ರಮ